
ಶೀತ, ಕೆಮ್ಮು ಮತ್ತು ಜ್ವರವಿದ್ದಾಗ ತುಳಸಿಯ ಉಪಯೋಗ
‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು. ತುಳಸಿಯ ೧೦-೧೫ ಎಲೆಗಳನ್ನು ೧ ಲೋಟ ನೀರಿನಲ್ಲಿ ಕುದಿಸಿ ಆವಿಯನ್ನು ಮೂಗು ಮತ್ತು ಬಾಯಿಯಿಂದ ಒಳಗಡೆ (ದೇಹದಲ್ಲಿ) ತೆಗೆದುಕೊಳ್ಳಬೇಕು. ದಿನದಲ್ಲಿ ೨ ಬಾರಿ ಒಂದೊಂದು ಕಪ್ ತುಳಸಿಯ ಕಷಾಯವನ್ನು (ಆವಿ ತೆಗೆದುಕೊಂಡ ನಂತರ ಉಳಿದಿರುವ ನೀರು) ಕುಡಿಯಬೇಕು. ಹೀಗೆ ೩ ರಿಂದ ೫ ದಿನಗಳ ವರೆಗೆ ಮಾಡಬೇಕು. ನಮಗೆ ತುಳಸಿ ಯಾವಾಗಲೂ ಸಿಗಬೇಕೆಂದು ಪ್ರತಿಯೊಬ್ಬರೂ ತುಳಸಿಯ ೧-೨ ಸಸಿಗಳನ್ನು ತಮ್ಮ ಮನೆಯಲ್ಲಿ ನೆಡಬೇಕು.’
ಊಟ ಬೇಡ ಅನಿಸುವುದು, ಶೌಚ ಸ್ವಚ್ಛವಾಗದಿರುವುದು ಇಂತಹ ಸಮಸ್ಯೆಗಳಿಗೆ ‘ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣದ ಒಂದು ಭಿನ್ನ ಪ್ರಯೋಗ
‘ಊಟ ಬೇಡವೆನಿಸುವುದು, ಶೌಚ ಸ್ವಚ್ಛವಾಗದಿರುವುದು, ಮೇಲಿಂದಮೇಲೆ ಪಿತ್ತವಾಗುವುದು ಇವುಗಳಂತಹ ಸಮಸ್ಯೆಗಳಿದ್ದರೆ, ೧ ದೊಡ್ಡ ಚಮಚದಷ್ಟು ‘ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇವು ನೆನೆಯುವಷ್ಟು ೧-೨ ಚಮಚ ಮಜ್ಜಿಗೆ ಅಥವಾ ನೀರನ್ನು ಒಟ್ಟಿಗೆ ಸೇರಿಸಿ ಚಟ್ನಿಯನ್ನು ಮಾಡಬೇಕು. ಈ ಚಟ್ನಿಯನ್ನು ಊಟ ಮಾಡುವಾಗ ಮಧ್ಯಮಧ್ಯದಲ್ಲಿ ತಿನ್ನಬೇಕು. ಇದರಿಂದ ಬಾಯಿಗೆ ರುಚಿ ಬರುತ್ತದೆ, ಹಾಗೆಯೇ ಶೌಚವೂ ಸ್ವಚ್ಛವಾಗಲು ಸಹಾಯವಾಗುತ್ತದೆ.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !