
ಓರ್ವ ನಿರ್ದಯಿ ಮತ್ತು ಮಹಾಪಾಪಿ ಬೇಟೆಗಾರನಿದ್ದನು. ಒಂದು ದಿನ ಅವನು ಬೇಟೆಗೆಂದು ಹೋಗುವಾಗ ದಾರಿಯಲ್ಲಿ ಒಂದು ಶಿವನ ದೇವಸ್ಥಾನವು ಕಾಣಿಸಿತು. ಅಂದು ಮಹಾಶಿವರಾತ್ರಿಯಾಗಿರುವುದರಿಂದ ಅಲ್ಲಿ ಭಕ್ತರು ಪೂಜೆ, ಭಜನೆ, ಕೀರ್ತನೆ ಇತ್ಯಾದಿಗಳನ್ನು ಮಾಡುತ್ತಿದ್ದರು. ಅದನ್ನು ನೋಡಿ ಆ ಬೇಟೆಗಾರನು, ಕಲ್ಲಿಗೆ ದೇವರೆಂದು ತಿಳಿದು ‘ಶಿವ ಶಿವ ‘ಹರ ಹರ ಎಂದು ಹೇಳುವ ಮೂರ್ಖ ಜನರು ಎಂದು ಅವರ ನಿಂದನೆಯನ್ನು ಮಾಡುತ್ತಾ ಬೇಟೆಗಾಗಿ ವನಕ್ಕೆ ಹೋದನು. ಬೇಟೆಯನ್ನು ನೋಡಲು ಅವನು ಒಂದು ಮರದ ಮೇಲೆ ಏರಿ ಕುಳಿತನು, ಆದರೆ ಮರದ ಎಲೆಗಳಿಂದಾಗಿ ಅವನಿಗೆ ಬೇಟೆಯು ಕಾಣಿಸುತ್ತಿರಲಿಲ್ಲ. ಆಗ ಅವನು ಒಂದೊಂದೇ ಎಲೆಯನ್ನು ಕಿತ್ತು ಕೆಳಗೆ ಎಸೆಯತೊಡಗಿದನು. ಎಲೆಗಳನ್ನು ಕಿತ್ತೆಸೆಯುವಾಗ ಅವನು ‘ಶಿವ ಶಿವ ಎನ್ನುತ್ತಿದ್ದನು. ಆ ಎಲೆಗಳು ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು. ಬೆಳಗಿನ ಸಮಯದಲ್ಲಿ ಅವನಿಗೆ ಒಂದು ಜಿಂಕೆಯು ಕಾಣಿಸಿತು. ಬೇಟೆಗಾರನು ಅದಕ್ಕೆ ಬಾಣವನ್ನು ಬಿಡಲು ಸಿದ್ಧತೆಯನ್ನು ಮಾಡುವಾಗ ಆ ಜಿಂಕೆಯು ಅವನಿಗೆ ಬಾಣವನ್ನು ಬಿಡಬೇಡವೆಂದು ವಿನಂತಿಸಿತು. ಪಾಪವನ್ನು ಮಾಡಿದರೆ ಏನಾಗುತ್ತದೆ ಎಂಬುದನ್ನು ಹೇಳಿ ಆ ಜಿಂಕೆಯು ಅಲ್ಲಿಂದ ಹೊರಟುಹೋಯಿತು. ತನಗೆ ಅರಿವಿಲ್ಲದೇ ಆಗಿರುವ ಮಹಾಶಿವರಾತ್ರಿಯ ಜಾಗರಣೆ, ಶಿವನಿಗೆ ಮಾಡಿದ ಬಿಲ್ವಾರ್ಚನೆ ಮತ್ತು ಶಿವನ ಜಪ ಇವುಗಳಿಂದಾಗಿ ಆ ಬೇಟೆಗಾರನ ಎಲ್ಲ ಪಾಪಗಳು ನಾಶವಾಗಿ ಅವನಿಗೆ ಜ್ಞಾನಪ್ರಾಪ್ತವಾಯಿತು.
ಇದರಿಂದ ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಶಿವನು ಹೇಗೆ ಪ್ರಸನ್ನನಾಗುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ.
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !