೧೮.೨.೨೦೨೩ ಈ ದಿನದಂದು ಪರಾತ್ಪರ ಗುರು ಪಾಂಡೆ ಮಹಾರಾಜರ ಪುಣ್ಯತಿಥಿ ಇದೆ. ಆ ನಿಮಿತ್ತದಿಂದ

‘೨೫.೧೨.೨೦೧೮ ಈ ದಿನ ದಂದು ನಾನು ಕುಟುಂಬ ಸಮೇತ ದೇವದ ಆಶ್ರಮಕ್ಕೆ ಹೋಗಿದ್ದೆನು. ಆ ಸಮಯದಲ್ಲಿ ಆಕಸ್ಮಿಕವಾಗಿ ನಮಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ದರ್ಶನದ ಅವಕಾಶವು ಲಭಿಸಿತು. ಅವರ ಈ ಅಮೂಲ್ಯ ಸತ್ಸಂಗದಲ್ಲಿ ಅವರು ಮಾಡಿದ ಮಾರ್ಗದರ್ಶನವನ್ನು ಕೊಡುತ್ತಿದ್ದೇವೆ.

೧. ಬಾಹ್ಯ ಆವರಣವನ್ನು ನೋಡದೇ ಎಲ್ಲರಲ್ಲಿರುವ ಆತ್ಮತತ್ತ್ವವನ್ನು ತಿಳಿಯಬೇಕು !
‘ಯಾವುದಾದರೊಂದು ಭರಣಿಯಲ್ಲಿರುವ ವಸ್ತುವನ್ನು ನೋಡುವ ಬದಲು ನಾವು ಕೇವಲ ಭರಣಿ, ಅಂದರೆ ಬಾಹ್ಯ ಆವರಣವನ್ನು ನೋಡುತ್ತೇವೆ. ಅಂತರಂಗ ನೋಡುವುದಿಲ್ಲ. ನಾವು ಕನ್ನಡಿಯೆದುರು ನಿಂತಿರುತ್ತೇವೆ. ಆ ಸಮಯದಲ್ಲಿಯೂ ನಾವು ಏನು ನೋಡುತ್ತೇವೆ. ನಾವು ನಮ್ಮ ದೇಹ ಅಂದರೆ ನಮ್ಮ ಬಾಹ್ಯಾಂಗ, ಅಂದರೆ ಆವರಣವನ್ನು ನೋಡುತ್ತೇವೆ. ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.
೨. ಎಲ್ಲವೂ ಭಗವಂತನದ್ದಾಗಿರುವುದರಿಂದ ‘ನನ್ನದು ಎನ್ನುವುದು ತಪ್ಪಾಗಿರುವುದು
ನಾವು ‘ನನ್ನ ಮಕ್ಕಳು, ‘ನನ್ನ ಶರೀರ, ‘ನನ್ನ ಮನೆ ಎಂದೆಲ್ಲ ಹೇಳುತ್ತೇವೆ. ಈ ‘ನನ್ನದು ಎಲ್ಲಿಂದ ಬಂದಿತು ? ನಮ್ಮ ಕೈ-ಕಾಲು ನಿಜವಾಗಿಯೂ ಸತ್ತಂತಿವೆ. ನಾವೂ ಸತ್ತಂತೇ ಇದ್ದೇವೆ. ಈಶ್ವರನು ಇವೆಲ್ಲವನ್ನೂ ಸಜೀವ ಮಾಡಿದ್ದಾನೆ, ಅಂದರೆ ಎಲ್ಲ ಕಡೆಗೆ ಆ ಭಗವಂತನಿದ್ದಾನೆ. ಎಲ್ಲವೂ ಅವನದ್ದೇ ಇದೆ. ಹೀಗಿರುವಾಗ ‘ನಾನು, ‘ನನ್ನದು ಹೀಗೆ ಏನೂ ಇಲ್ಲ. ಹಾಗಾದರೆ ‘ನನ್ನ ಈ ಪದವು ಎಲ್ಲಿಂದ ಬಂದಿತು ? ಎಲ್ಲ ಕಡೆಗೆ ಭಗವಂತನೇ ಇದ್ದಾನೆ ಹಾಗೂ ಅವನೇ ಎಲ್ಲವನ್ನೂ ಮಾಡುತ್ತಿದ್ದಾನೆ.
೩. ಕ್ರೋಧವನ್ನು ಬಳಸಿ ಆದರೆ ಅದಕ್ಕೆ ತುತ್ತಾಗಬೇಡಿ !
ಸಿಟ್ಟು ಬರುವುದೂ ಒಂದು ಭಾವವೇ ಆಗಿದೆ. ಸಿಟ್ಟು, ಅನುರಾಗ, ವಿರಾಗ, ಪ್ರೇಮ, ಪ್ರೀತಿ, ಹೀಗೆ ಈ ಪದಗಳಿವೆ. ತಾಯಿಯು ಮಗುವಿನ ಮೇಲೆ ಸಿಟ್ಟಾಗುತ್ತಾಳೆ, ಅದು ಸರಿಯಿದೆ; ಆದರೆ ತಾಯಿಯು ಸಿಟ್ಟಿನಲ್ಲಿರುತ್ತಾಳೆಯೇ ?, ಇಲ್ಲ. ಆದ್ದರಿಂದ ‘ತಾಯಿಯು ಸಿಟ್ಟಿನಲ್ಲಿರುತ್ತಾಳೆ, ಎಂದು ಹೇಳುವುದು ತಪ್ಪಾಗಿದೆ. (ಮಕ್ಕಳಲ್ಲಿ ಶಿಸ್ತನ್ನು ಕಲಿಸುವಾಗ ಕ್ರೋಧದ ಉಪಯೋಗವು ಆವಶ್ಯಕವಿದೆ; ಆದರೆ ಕ್ರೋಧಕ್ಕೆ ತುತ್ತಾಗಬಾರದು.)
– ಶ್ರೀ. ದತ್ತಾತ್ರಯ ಕುಲಕರ್ಣಿ, ಗಾವಭಾಗ, ಸಾಂಗಲಿ. (೨೭.೧೨.೨೦೧೮)
| ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೂಲ್ಯ ಮಾರ್ಗದರ್ಶನ
ಅ. ‘ಶಿಕ್ಷಣದ ಅಹಂಕಾರ ಮನುಕುಲವನ್ನು ಮನುಷ್ಯತ್ವ ದಿಂದ ದೂರ ಒಯ್ಯುತ್ತಿದೆ. ಆ. ಪರಸ್ಪರರಲ್ಲಿ ಪ್ರೀತಿ ಇಲ್ಲದಿದ್ದರೆ, ಹಣವಿದ್ದು ಏನು ಉಪಯೋಗ ? ಇ. ಅಹಂ ಕಡಿಮೆ ಇದ್ದರೆ ದೇವರತ್ತ ಹೋಗಬಹುದು. |
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !