PM Modi RSS Nagpur Visit : ಯುಗಾದಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ನಾಗಪುರ ಭೇಟಿ!

  • ಸಂಘದ ಸ್ಮೃತಿ ಮಂದಿರ ಮತ್ತು ದೀಕ್ಷಾಭೂಮಿಗೆ ಭೇಟಿ

  • ನೇತ್ರಾಲಯದ ಭೂಮಿ ಪೂಜೆ ಸಮಾರಂಭದಲ್ಲಿ ಸಹಭಾಗ

ನಾಗಪುರ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುಗಾದಿಯ ಶುಭ ಸಂದರ್ಭದಲ್ಲಿ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ. 2014 ರಲ್ಲಿ ಪ್ರಧಾನಿಯಾದ ನಂತರ, ಅವರು ಮೊದಲ ಬಾರಿಗೆ ರೇಷ್ಮಬಾಗದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಎರಡನೇ ಬಾರಿಗೆ ದೀಕ್ಷಾಭೂಮಿಗೆ ಭೇಟಿ ನೀಡಲಿದ್ದಾರೆ. ಅವರು 2017 ರಲ್ಲಿ ದೀಕ್ಷಾಭೂಮಿಗೆ ಬಂದಿದ್ದರು. ಮಾರ್ಚ್ 30 ರಂದು, ಅವರು ಬೆಳಿಗ್ಗೆ 9 ಗಂಟೆಗೆ ರೇಷ್ಮಬಾಗ ದ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ದೀಕ್ಷಾಭೂಮಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಸ್ಮಾರಕಕ್ಕೆ ನಮಿಸುವರು. ಅಲ್ಲಿಂದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಚಾಲಿತ ಮಾಧವ ನೇತ್ರಾಲಯದ ಹೊಸ ಕಟ್ಟಡದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ರಕ್ಷಣಾ ವಲಯದ ಪ್ರಮುಖ ಕಮಾನಿ ಸೋಲಾರ್ ಇಂಡಸ್ಟ್ರೀಸ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗೆ ಅವರ 5 ಗಂಟೆಗಳ ನಾಗಪುರ ಪ್ರವಾಸ ನಡೆಯಲಿದೆ.

1. ಮಾಧವ ನೇತ್ರಾಲಯದ ನೂತನ ಕಟ್ಟಡದ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಒಂದೇ ವೇದಿಕೆಯಲ್ಲಿ ಇರಲಿದ್ದಾರೆ.

2. ಸಂಘದ ಸ್ಥಾಪನೆಗೆ 100 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅವರು ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.

3. ಮುಂಬಯಿನ ಚೈತ್ಯಭೂಮಿ ಮತ್ತು ನಾಗಪುರದ ದೀಕ್ಷಾಭೂಮಿ ಎರಡೂ ಬೌದ್ಧ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಾಗಿವೆ. ಆದ್ದರಿಂದ ಅವರು ದೀಕ್ಷಾಭೂಮಿಗೂ ಭೇಟಿ ನೀಡಲಿದ್ದಾರೆ.