ಆಹಾರ-ವಿಹಾರಗಳಲ್ಲಿನ ಅಯೋಗ್ಯ ಅಭ್ಯಾಸಗಳನ್ನು ಬಿಡುವುದರ ಮಹತ್ವ

ವೈದ್ಯ ಮೇಘರಾಜ ಪರಾಡಕರ್

ಪ್ರಶ್ನೆ 

ಸುಶ್ರೀ (ಕು.) ಯುವರಾಜ್ಞಿ ಶಿಂದೆ : ಅನೇಕ ವರ್ಷಗಳಿಂದ ದಿನವಿಡಿ ಅನೇಕ ಬಾರಿ ತಿಂದರೂ ಏನು ಅಪಾಯವಾಗದ, ಅನೇಕ ಜನರು ನಮ್ಮ ಸುತ್ತಮುತ್ತಲು ಕಾಣಿಸುತ್ತಾರೆ. ಹೀಗಿದ್ದರೂ ಆಯುರ್ವೇದದಲ್ಲಿ ‘ದಿನಕ್ಕೆ ಎರಡು ಬಾರಿಯೇ ಊಟ ಮಾಡಬೇಕು’, ಎಂದು ಏಕೆ ಹೇಳಲಾಗಿದೆ ?

ಉತ್ತರ

೧. ಭಗವಂತನು ನೀಡಿದ ಶಕ್ತಿಯಿಂದ ಮನುಷ್ಯನ ಶರೀರವು ಆರೋಗ್ಯವಾಗಿರಬಹುದು : ‘ಮನುಷ್ಯನ ಶರೀರವು ಭಗವಂತನು ನಿರ್ಮಿಸಿದ ಉತ್ತಮ ಮತ್ತು ಸ್ವಯಂಚಾಲಿತ ಯಂತ್ರವಾಗಿದೆ. ‘ಈ ಯಂತ್ರವು ೧೦೦ ವರ್ಷಗಳ ವರೆಗೆ ಯಾವುದೇ ತೊಂದರೆಯಾಗದೇ ವ್ಯವಸ್ಥಿತವಾಗಿ ನಡೆಯಬೇಕೆಂದು ಬಾಹ್ಯ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವ ಶಕ್ತಿಯನ್ನು ಭಗವಂತನೇ ಶರೀರದಲ್ಲಿ ನಿರ್ಮಿಸಿದ್ದಾನೆ. ಆದ್ದರಿಂದ ಯಾವಾಗಲಾದರೊಮ್ಮೆ ಆಹಾರ-ವಿಹಾರದ ತಪ್ಪುಗಳಿಂದ ಶರೀರದ ಮೇಲೆ ಪರಿಣಾಮವಾಗುವುದು ಕಂಡುಬರುವುದಿಲ್ಲ. (‘ವಿಹಾರ’ ಎಂದರೆ ‘ನಮ್ಮಿಂದಾಗುವ ವಿವಿಧ ಕೃತಿಗಳು’) ಈ ಶಕ್ತಿಯಿಂದಾಗಿಯೇ ಕೆಲವು ಬಾರಿ ನಿಯಮಿತ ಸರಾಯಿ, ಸಿಗರೇಟ್‌ ಇತ್ಯಾದಿಗಳ ವ್ಯಸನಗಳಿದ್ದರೂ ಆರೋಗ್ಯ ಉತ್ತಮವಿರುವ ಮನುಷ್ಯರನ್ನು ನಾವು ನೋಡುತ್ತೇವೆ. ಈ ಕ್ಷಮತೆಯು ‘ವಂಶಪರಂಪರೆಯಿಂದ ನಡೆದುಕೊಂಡು ಬಂದಿರುತ್ತದೆ’, ಅಂದರೆ ‘ಯಾರಾದರೂ ವ್ಯಕ್ತಿಯ ತಾಯಿತಂದೆಯರು ಅತ್ಯಂತ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾಗಿದ್ದರೆ, ಅವರ ಮಕ್ಕಳು ಸಹ ಅದೇ ರೀತಿ ಇರುವುದನ್ನು ನಾವು ನೋಡುತ್ತೇವೆ.’

೨. ಶಕ್ತಿಯ ಮಿತಿ : ಹೀಗಿದ್ದರೂ, ಈ ಶಕ್ತಿಗೂ ಒಂದು ಮಿತಿ ಇದೆ. ಆಹಾರ-ವಿಹಾರಗಳಲ್ಲಿನ ತಪ್ಪುಗಳು ಅದೇ ರೀತಿ ಮುಂದುವರಿದರೆ, ಮುಂದೆ ಯಾವತ್ತಾದರೂ ಈ ಶರೀರಕ್ಕೆ ಅವು ತೊಂದರೆ ಕೊಡುವವು. ಶಿಶುಪಾಲನು ೯೯ ಅಪರಾಧಗಳನ್ನು ಮಾಡಿದರೂ, ಅವನಿಗೆ ಏನು ಆಗಲಿಲ್ಲ; ಆದರೆ ೧೦೦ ನೇ ಅಪರಾಧ ಮಾಡಿದ ಕೂಡಲೇ ಭಗವಂತನು ಅವನ ತಲೆಯನ್ನು ದೇಹದಿಂದ ಬೇರ್ಪಡಿಸಿದನು. ನಮ್ಮ ವಿಷಯದಲ್ಲಿಯೂ ಇದೇ ರೀತಿ ಆಗುತ್ತಿರುತ್ತದೆ. ‘ಎಲ್ಲವೂ ಸರಿಯಾಗಿರುವಾಗ ಒಮ್ಮೆಲೆ ರಕ್ತದಲ್ಲಿ ಸಕ್ಕರೆ ಹೆಚ್ಚಾಗಿರುವುದು ತಿಳಿಯುತ್ತದೆ ಮತ್ತು ಮಧುಮೇಹ ಆಗಿರುವುದು ತಿಳಿಯುತ್ತದೆ. ದೇಹವು ಗಟ್ಟಿಮುಟ್ಟಾಗಿದ್ದರೂ ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ) ಪ್ರಾರಂಭವಾಗುತ್ತದೆ. ಒಮ್ಮಿಂದೊಮ್ಮೆಲೆ ಹೃದಯಾಘಾತ ಆಗುತ್ತದೆ ಮತ್ತು ಇದ್ದ ಜಾಗದಲ್ಲಿಯೇ ಪ್ರಾಣ ಹೋಗುತ್ತದೆ. ಇಂತಹ ಉದಾಹರಣೆಗಳನ್ನು ನಾವು ನೋಡಿರಬಹುದು ಅಥವಾ ಕೇಳಿರಬಹುದು. ಹೀಗಾದರೂ ಕೆಲವರು ಎಚ್ಚೆತ್ತುಕೊಳ್ಳುವುದಿಲ್ಲ ಮತ್ತು ‘ನನಗೆ ಏನೂ ಆಗುವುದಿಲ್ಲ ಅಥವಾ ಆಗಲಾರದು’, ಎಂಬ ವಿಚಾರದಿಂದ ಅಯೋಗ್ಯ ಕೃತಿಗಳನ್ನು ಮಾಡುತ್ತಲೇ ಹೋಗುತ್ತಾರೆ.

೩. ಆಹಾರ-ವಿಹಾರದ ತಪ್ಪುಗಳಿಂದ ಆಯುಷ್ಯ ಕಡಿಮೆಯಾಗುವುದು : ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ ಮತ್ತು ಅದರ ತೀವ್ರತೆ ಕಡಿಮೆಯಾಗುತ್ತದೆ; ಆದರೆ ಇದರಿಂದ ೧೦೦ ವರ್ಷಗಳ ವರೆಗೆ ಆರೋಗ್ಯವಂತವಾಗಿರಬೇಕಿದ್ದ ಶರೀರವು ಹೇಗೋ ಹಾಗೋ ಒದ್ದಾಡುತ್ತ ೬೦ ರಿಂದ ೭೦ ವರ್ಷಗಳ ವರೆಗೆ ಬದುಕುತ್ತದೆ. ಇದರಿಂದ ‘ನನಗೆ ಏನೂ ಆಗುವುದಿಲ್ಲ. ನಾನು ಏನು ಬೇಕಾದರೂ ಮಾಡುತ್ತೇನೆ’, ಎಂದು ಹೇಳುವುದು ಖಂಡಿತ ಜಾಣತನವಲ್ಲ’, ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.

೪. ಶರೀರರೂಪಿ ಯಂತ್ರವನ್ನು ಆಯುರ್ವೇದರೂಪಿ ಮಾಹಿತಿಪುಸ್ತಕದಲ್ಲಿ ನೀಡಿದಂತೆ ನಡೆಸುವುದು ಮಹತ್ವದ್ದಾಗಿದೆ : ಯಾವುದಾದರೊಂದು ಉಪಕರಣ ಸರಿಯಾಗಿ ನಡೆಯಲು ‘ಉಪಯೋಗಿಸುವನಿಗೆ ಒಂದು ಮಾಹಿತಿಪುಸ್ತಕ (‘ಯುಸರ ಮ್ಯಾನ್ಯುವಲ್‌’) ವನ್ನು ಕೊಟ್ಟಿರುತ್ತಾರೆ. ಅದರಲ್ಲಿ ಕೊಟ್ಟಿರುವಂತೆ ಉಪಕರಣವನ್ನು ಉಪಯೋಗಿಸಿದರೆ, ಅದು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮಾಹಿತಿಪುಸ್ತಕವನ್ನು ಓದದೇ ಸ್ವಂತ ಮನಸ್ಸಿನಂತೆ ಆ ಉಪಕರಣವನ್ನು ಬೇಕಾದ ಹಾಗೆ ಉಪಯೋಗಿಸಿದರೆ ಮತ್ತು ಅದು ಹಾಳಾದರೆ, ಅದನ್ನು ನಿರ್ಮಿಸಿದ ಸಂಸ್ಥೆಯು ಅದರ ಜವಾಬ್ದಾರಿಯನ್ನು (ಗ್ಯಾರಂಟಿ) ತೆಗೆದುಕೊಳ್ಳುವುದಿಲ್ಲ. ‘ಆಯುರ್ವೇದ’ವು ಶರೀರ ಎಂಬ ಯಂತ್ರವನ್ನು ೧೦೦ ವರ್ಷಗಳ ವರೆಗೆ ರೋಗಗಳು ಬರದಂತೆ ಹೇಗಿಡಬೇಕು (ಆರೋಗ್ಯಕರವಾಗಿಡಬೇಕು), ಎಂಬುದಕ್ಕಾಗಿ ಋಷಿಮುನಿಗಳು ಬರೆದ ಮಾಹಿತಿಪುಸ್ತಕವೇ (ಯುಸರ ಮ್ಯಾನುವಲ್) ಆಗಿದೆ. ಇದರಲ್ಲಿ ಹೀಗೆ ಹೇಳಿದೆ,

ಉಚಿತಾತ್‌ ಅಹಿತಾತ್‌ ಧೀಮಾನ್‌ ಕ್ರಮಶೋ ವಿರಮೇತ್‌ ನರಃ |- ಚರಕಸಂಹಿತಾ, ಸೂತ್ರಸ್ಥಾನ, ಅಧ್ಯಾಯ ೭, ಸೂತ್ರ ೩೬

ಅರ್ಥ : ನಮ್ಮಲ್ಲಿ ಅಯೋಗ್ಯ ಅಭ್ಯಾಸಗಳಿದ್ದರೆ, ಬುದ್ಧಿವಂತ ಮನುಷ್ಯನು ಅವುಗಳನ್ನು ಕ್ರಮೇಣ ಬಿಟ್ಟು ತನ್ನಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

೫. ಶರೀರ ಆರೋಗ್ಯವಾಗಿರಲು ೨ ಬಾರಿಯೇ ಆಹಾರವನ್ನು ಸೇವಿಸಬೇಕು ಮತ್ತು ಬಹಳಷ್ಟು ವ್ಯಾಯಾಮ ಮಾಡಬೇಕು : ಮೇಲಿಂದ ಮೇಲೆ ತಿನ್ನುವ ಅಭ್ಯಾಸವಿದ್ದರೆ, ಅದನ್ನು ಕ್ರಮೇಣ ಬಿಡಬೇಕು ಮತ್ತು ಆಯುರ್ವೇದದ ತಿರುಳಾಗಿರುವ ‘ದಿನಕ್ಕೆ ೨ ಬಾರಿಯೇ ಆಹಾರವನ್ನು ಸೇವಿಸಬೇಕು ಮತ್ತು ಬೆಳಗ್ಗೆ ತಮ್ಮ ಕ್ಷಮತೆಗನುಸಾರ ಬಹಳಷ್ಟು ವ್ಯಾಯಾಮ ಮಾಡಬೇಕು’, ಇವೆರಡು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೧.೨೦೨೩)

‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದಾಗುವ ದುಷ್ಪರಿಣಾಮ !

ವೈದ್ಯ ಸಮೀರ ಪರಾಂಜಪೆ

‘ಚೈನೀಸ್’ ಪದಾರ್ಥಗಳ ಅಂಗಡಿಗಳು ದೇಶದಲ್ಲಿ ವಿವಿಧ ನಗರಗಳೊಂದಿಗೆ ಹಳ್ಳಿಗಳ ವರೆಗೂ ತಲುಪಿವೆ. ಅನೇಕ ಯುವಕರು ತಡರಾತ್ರಿಯ ವರೆಗೆ ಇದನ್ನೇ ತಿನ್ನುವುದು ಕಂಡುಬರುತ್ತದೆ. ಈ ಪದಾರ್ಥಗಳಲ್ಲಿ ‘ಮೊನೊಸೋಡಿಯಮ್‌ ಗ್ಲುಟಾಮೆಟ್’ (‘ಅಜಿನೊಮೊಟೋ’) ದಂತಹ ರಾಸಾಯನಿಕಗಳಿರುವುದರಿಂದ ಈ ಪದಾರ್ಥಗಳ ಸೇವನೆಯಿಂದ ಒಂದು ರೀತಿಯಲ್ಲಿ ವ್ಯಸನವಾಗುತ್ತದೆ. ಇವುಗಳನ್ನು ತಿನ್ನುವುದರಿಂದ ಮಕ್ಕಳಿಗೆ ಮನೆಯ ಆಹಾರ (ಚಪಾತಿ-ಪಲ್ಯ) ವನ್ನು ತಿನ್ನಲು ಇಷ್ಟವಾಗುವುದಿಲ್ಲ. ಆದ್ದರಿಂದ ಅವರ ಪಾಲಕರು ತುಂಬಾ ಚಿಂತೆಗೀಡಾಗಿದ್ದಾರೆ. ‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು, ಜಂತುಗಳು, ‘ಗ್ಯಾಸೆಸ್‌’, ಕೀಲುನೋವು, ಉರಿಯುವುದು ಮತ್ತು ಪಿತ್ತಕ್ಕೆ ಸಂಬಂಧ ಪಟ್ಟಿರುವ ರೋಗಗಳಂತಹ ಶಾರೀರಿಕ ರೋಗಗಳು ಮತ್ತು ಸಿಡಿಮಿಡಿ ಹೀಗೆ ಅನೇಕ ಮಾನಸಿಕ ರೋಗಗಳಾಗುತ್ತವೆ. ಆದ್ದರಿಂದ ‘ಇಂತಹ ಚೈನೀಸ್ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಹಾನಿ ಮಾಡಿಕೊಳ್ಳಬೇಕೇ ? ಅಥವಾ ಮನೆಯ ಸಾತ್ತ್ವಿಕ ಆಹಾರವನ್ನು ಸೇವಿಸಿ ಆರೋಗ್ಯವಾಗಿರಬೇಕೇ ?’, ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಸದ್ಬುದ್ಧಿವಿವೇಕದಿಂದ ನಿರ್ಧರಿಸಬೇಕು !’

– ವೈದ್ಯ ಸಮೀರ ಮುಕುಂದ ಪರಾಂಜಪೆ, ಖೆರ್ಡಿ, ದಾಪೋಲಿ, ರತ್ನಾಗಿರಿ. (೮.೧೨.೨೦೨೨)