ಸನಾತನ ಸಂಸ್ಥೆ ನಿರ್ಮಿತ ಆ್ಯಪ್ ನಲ್ಲಿ ಹಬ್ಬ-ಹರಿದಿನ, ವ್ರತಗಳು, ಧರ್ಮಶಿಕ್ಷಣ ಇತ್ಯಾದಿ ವಿಷಯಗಳ ಕುರಿತು ವಿಶೇಷ ಮಾಹಿತಿ

ಬೆಂಗಳೂರು : ಸನಾತನ ಸಂಸ್ಥೆ ನಿರ್ಮಿಸಿರುವ Android ಸನಾತನ ಪಂಚಾಂಗವು ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವಂತಹದ್ದು. ಕಳೆದ 11 ವರ್ಷಗಳಿಂದ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿಯ ಅವಿರತ ಕಾರ್ಯವು ಸನಾತನ ಪಂಚಾಂಗದ ಮೂಲಕ ನಡೆಯುತ್ತಿದೆ. ಮಹರ್ಷಿ ಆನಂದ ಗುರೂಜಿಯವರು ಗುರುವಾರ, ಜನವರಿ 5 ರಂದು ಈ App ಅನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಮಹರ್ಷಿಗಳ ಪುತ್ರರಾದ ಶ್ರೀನಿವಾಸ ಶರ್ಮಾ ಗುರೂಜಿ, ಸನಾತನ ಸಂಸ್ಥೆಯ ಸೌ. ಸುಧಾ ಸದಾನಂದ, ಶ್ರೀ. ಸುಜನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಗುರೂಜಿಯವರು, ’ಸನಾತನ ಪಂಚಾಂಗ 2023 ಆ್ಯಪ್’ ನಲ್ಲಿ ಪಂಚಾಂಗ ಮತ್ತು ಶುಭ ಮುಹೂರ್ತ, ಹಬ್ಬ-ಹರಿದಿನ, ವ್ರತಗಳು, ಧರ್ಮಶಿಕ್ಷಣ, ರಾಷ್ಟ್ರ-ಧರ್ಮ ರಕ್ಷಣೆ, ಆಯುರ್ವೇದ, ಉಪಚಾರ ಪದ್ಧತಿ, ಅಧ್ಯಾತ್ಮ, ಇತ್ಯಾದಿ ಹೀಗೆ ವಿವಿಧ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. ವಿವಿಧ ಮಾಹಿತಿಗಳಿರುವ ಈ ಆ್ಯಪ್ ಸಾಮಾನ್ಯ ಹಿಂದೂಗಳ ದೈನಂದಿನ ಜೀವನದಲ್ಲಿ ಮಾರ್ಗದರ್ಶಕವಾಗಿದೆ. ಸಮಸ್ತ ಭಾರತೀಯರು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಹಾಗೂ ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಉಪಯೋಗವನ್ನು ಗಮನದಲ್ಲಿಟ್ಟುಕೊಂಡು, Android ಮತ್ತು IOS ಸನಾತನ ಪಂಚಾಂಗ ಆ್ಯಪ್’ ಅನ್ನು ನಿರ್ಮಿಸಲಾಗಿದೆ. ಈ ಆ್ಯಪ್ ಮರಾಠಿ, ಹಿಂದಿ, ಇಂಗ್ಲಿಷ್, ಕನ್ನಡ, ಗುಜರಾತಿ, ತೆಲುಗು ಮತ್ತು ತಮಿಳು ಈ 7 ಭಾಷೆಗಳಲ್ಲಿ ಲಭ್ಯವಿದೆ. ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ’ಆಂಡ್ರಾಯ್ಡ್’ ಹಾಗೂ 1 ಲಕ್ಷಕ್ಕೂ ಹೆಚ್ಚು ಜನರು ’I0S’ನ ’ಸನಾತನ ಪಂಚಾಂಗ’ವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ’ಗೂಗಲ್ ಪ್ಲೇ ಸ್ಟೋರ್’ ಮತ್ತು ’ಆಪಲ್ ಸ್ಟೋರ್’ ನಲ್ಲಿ ಉಚಿತವಾಗಿ ಲಭ್ಯವಿದೆ.
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ರಾಷ್ಟ್ರದ ಏಳಿಗೆಗಾಗಿ ಇಂದು ಮುಂಬಯಿಯಲ್ಲಿ ನಡೆಯಲಿದೆ ಶ್ರೀ ರಾಜಮಾತಂಗಿ ಮಹಾಯಜ್ಞ!
ಶ್ರೀ ರಾಜಮಾತಂಗಿ ಮಹಾಯಜ್ಞ
ಮಿರಜನಲ್ಲಿ ‘ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ ಟ್ರಸ್ಟ್’ನ ಜಾಗದಲ್ಲಿನ ‘ಲ್ಯಾಂಡ್ ಜಿಹಾದ್’ನ ಯತ್ನವನ್ನು ಹತ್ತಿಕ್ಕಿದ ಹಿಂದುತ್ವನಿಷ್ಠರು !
ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!