ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಈ ಮುಂದೆಯೂ ಅವರಿಂದ ತುಂಬಾ ಮಹಾನ ಅದ್ವಿತೀಯ ಮತ್ತು ದೈವೀ ಕಾರ್ಯ ಆಗಲಿದೆ !

‘ಶ್ರೀಚಿತ್‌ಶಕ್ತಿ ಇದು ಭಗವಂತನ ವೈಶ್ವಿಕಜ್ಞಾನದೊಂದಿಗೆ ಸಂಬಂಧಿಸಿದ್ದು (ಸೌ.) ಅಂಜಲಿ ಗಾಡಗೀಳ ಇವರ ಸಾಧನೆಯಲ್ಲಿನ ‘ವಿಶ್ವಕಾರ್ಯ’ದ ಹಂತವು ನಡೆಯುತ್ತಿರುವುದು

೨೩.೫.೨೦೨೦ ರಂದು ‘ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಮಹರ್ಷಿಗಳು, ‘ಶ್ರೀಚಿತ್‌ಶಕ್ತಿ’ (ಸೌ.) ಅಂಜಲಿ ಗಾಡಗೀಳ, ಹೀಗೆ ಕರೆಯಬೇಕು’, ಎಂದು ಹೇಳಿದರು. ‘ಶ್ರೀಚಿತ್‌ಶಕ್ತಿ’ ಇದು ಭಗವಂತನ ವೈಶ್ವಿಕ ಜ್ಞಾನದೊಂದಿಗೆ ಸಂಬಂಧಿಸಿದ್ದು ಅವರ ಸಾಧನೆಯಲ್ಲಿನ ‘ವಿಶ್ವಕಾರ್ಯ’ದ ಹಂತವು ಈಗ ನಡೆಯುತ್ತಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಜನ್ಮದಿನದ  ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಶರಣಾಗತದಿಂದ ವಂದಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೨೦೧೯)

೧. ಕೇವಲ ೨೦-೨೧ ವರ್ಷಗಳಲ್ಲಿ ಅಧ್ಯಾತ್ಮದಲ್ಲಿನ ಬಹುದೊಡ್ಡ ಹಂತವನ್ನು ದಾಟುವ ಏಕಮೇವಾದ್ವಿತೀಯ ‘ಗಾಡಗೀಳ ದಂಪತಿ’ !

‘ಸನಾತನಕ್ಕೆ ಲಭಿಸಿದ ಒಂದು ಅಮೂಲ್ಯ ಕೊಡುಗೆಯೆಂದರೆ ಗಾಡಗೀಳ ದಂಪತಿಗಳು ! ಈ ದಂಪತಿಗಳ ಸಾಧನಾಪ್ರವಾಸವನ್ನು ನೋಡಿದರೆ, ಉನ್ನತ ಶಿಕ್ಷಣವನ್ನು ಪಡೆದಿದ್ದರೂ ಇಬ್ಬರೂ ವಿರಕ್ತ ವೃತ್ತಿಯ, ಉಚ್ಚ ಕೋಟಿಯ ಭಾವ ಮತ್ತು ದೇವರ ಮೇಲಿನ ದೃಢ ಶ್ರದ್ಧೆಯಿಂದ ಸಮರ್ಪಿಸಿಕೊಂಡು ಅಹಂಭಾವವಿಲ್ಲದೇ ಸಾಧನೆಯನ್ನು ಮಾಡುತ್ತಿದ್ದಾರೆ. ಇಬ್ಬರ ಪ್ರಕೃತಿ ಮತ್ತು ಸಾಧನಾಮಾರ್ಗಗಳು ಬೇರೆ ಬೇರೆಯಾಗಿದ್ದರೂ, ಆ ಮಾರ್ಗವು ಪರಸ್ಪರರಿಗೆ ಪೂರಕವಾಗಿದ್ದು ಇಂದು ಸಾಧನೆಯಲ್ಲಿ ಇಬ್ಬರೂ ಉಚ್ಚ ಆಧ್ಯಾತ್ಮಿಕ ಪದವಿಯಲ್ಲಿ ಆರೂಢರಾಗಿದ್ದಾರೆ. ಸೌ. ಅಂಜಲಿ ಗಾಡಗೀಳ ಇವರು ‘ಶ್ರೀಚಿತ್‌ಶಕ್ತಿ’ ಮತ್ತು ಡಾ. ಮುಕುಲ ಗಾಡಗೀಳ ಇವರು ‘ಸದ್ಗುರು’ ಪದವಿಯಲ್ಲಿದ್ದಾರೆ. ಕೇವಲ ೨೦-೨೧ ವರ್ಷಗಳ ಅವಧಿಯಲ್ಲಿ ಅವರು ಅಧ್ಯಾತ್ಮದಲ್ಲಿನ ಬಹುದೊಡ್ಡ ಹಂತವನ್ನು ದಾಟಿದ್ದಾರೆ. ಇದು ಅತ್ಯಂತ ಪ್ರಶಂಸನೀಯವಾಗಿದೆ.

೨. ಸ್ಥೂಲ ಮತ್ತು ಸೂಕ್ಷ್ಮ, ಹೀಗೆ ಎರಡೂ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡುವ ಹಾಗೂ ಮನುಕುಲಕ್ಕೆ ದುರ್ಲಭ ಜ್ಞಾನವನ್ನು ದೊರಕಿಸಿ ಕೊಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮವಾಗಿರುವ ಯಾವುದೇ ರೀತಿಯ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಯಾವುದೇ ವಿಷಯಲ್ಲಿಯೂ ಕಡಿಮೆ ಇಲ್ಲ. ಇದುವರೆಗೆ ಅವರು ಎಲ್ಲ ವಿಷಯಗಳಲ್ಲಿ ಜ್ಞಾನವನ್ನು ಗ್ರಹಿಸಿದ್ದಾರೆ. ಅವರು ಬರೆದ ಜ್ಞಾನದ ಬಗೆಗಿನ ಬರವಣಿಗೆ, ಆ ಬರವಣಿಗೆಯಲ್ಲಿನ ಅವರ ಸಹಜತೆಯ (ಸರಳತೆಯ) ಭಾಷೆ ಮತ್ತು ಜ್ಞಾನದ ಮಟ್ಟವನ್ನು ನೋಡಿದರೆ, ಅವರ ಜ್ಞಾನಶಕ್ತಿಯನ್ನು ಊಹಿಸಬಹುದು. ಸದ್ಯದ ಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲದಿರುವ ಜ್ಞಾನವನ್ನು ಅವರು ಸಂಪೂರ್ಣ ಮನುಕುಲಕ್ಕೆ ದೊರಕಿಸಿಕೊಟ್ಟಿದ್ದಾರೆ. ವಿಶೇಷವೆಂದರೆ ಅವರಿಗೆ ಈ ಯಾವುದರ ಬಗ್ಗೆ ಅಹಂಕಾರವಿಲ್ಲ.

೩. ನಿರಂತರ ಪ್ರವಾಸವನ್ನು ಮಾಡಿ ಸಪ್ತರ್ಷಿಗಳ ಮನಸ್ಸನ್ನು ಗೆಲ್ಲುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ !

ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದೈವೀ ಪ್ರವಾಸವು ನಿರಂತರವಾಗಿ ನಡೆದಿದ್ದು ಇದುವರೆಗೆ ಅವರು ನೂರಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಅವರ ಪ್ರವಾಸವು ತುಂಬಾ ಕಠಿಣವಾಗಿರುತ್ತದೆ; ಆದರೂ ‘ಸಪ್ತರ್ಷಿಗಳ ಆಜ್ಞಾಪಾಲನೆ ಮಾಡಬೇಕು’, ಎಂಬ ಒಂದೇ ಹಂಬಲದಿಂದ ಅವರು ನಿರಂತರ ಪ್ರವಾಸವನ್ನು ಮಾಡಿ ಬಹುದೊಡ್ಡ ಸಮಷ್ಟಿಯ ಕಾರ್ಯ ಮಾಡುತ್ತಿದ್ದಾರೆ. ‘ಸಪ್ತರ್ಷಿಗಳಿಗೆ ಏನು ಅಪೇಕ್ಷಿತವಿದೆ ?’, ಎಂಬುದನ್ನು ತಿಳಿದುಕೊಂಡು ಪ್ರತಿಯೊಂದು ಕೃತಿಯನ್ನು ಭಾವಪೂರ್ಣ ರೀತಿಯಲ್ಲಿ ಮತ್ತು ಪೂರ್ಣ ಶ್ರದ್ಧೆಯಿಂದ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ತಮ್ಮ ಭಕ್ತಿಭಾವದಿಂದ ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸಿದ್ದಾರೆ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಆಯಾ ಸಮಯಕ್ಕೆ ತಮ್ಮ ದೈವೀ ಪ್ರವಾಸದ ಬಗ್ಗೆ ಬರೆಯುತ್ತಾರೆ. ಈ ಬರವಣಿಗೆಯ ವೈಶಿಷ್ಟ್ಯವೆಂದರೆ, ಅದರಲ್ಲಿ ಸ್ಥೂಲದಲ್ಲಿನ, ಎಂದರೆ ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಮಟ್ಟದಲ್ಲಿನ ಬರವಣಿಗೆಯೊಂದಿಗೆ ಅಗತ್ಯವಿದ್ದಲ್ಲಿ ಅವುಗಳ ಆಚೆಗಿನ ಸೂಕ್ಷ್ಮದಲ್ಲಿನ, ಎಂದರೆ ಆಧ್ಯಾತ್ಮಿಕ ಮಟ್ಟದಲ್ಲಿನ ಪರೀಕ್ಷಣೆಗಳಿರುತ್ತವೆ ಹಾಗೂ ಚೈತನ್ಯವೂ ಇರುತ್ತದೆ. ಆದ್ದರಿಂದ ಈ ಲೇಖನವನ್ನು ಓದುವಾಗ ವಾಚಕರಿಗೂ ಅನುಭೂತಿಗಳು ಬರುತ್ತವೆ.

೪. ಸಮಾಜದಲ್ಲಿನ ಜನರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರತ್ತ ಆಕರ್ಷಿತರಾಗುವುದು

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿನ ಶಕ್ತಿತತ್ತ್ವ ಮತ್ತು ಚೈತನ್ಯದಲ್ಲಿ ಹೆಚ್ಚಾಗುತ್ತಿದ್ದು ಅವರ ದೈವತ್ವವು ಈಗ ಬೆಳಕಿಗೆ ಬಂದಿದೆ. ಸಮಾಜದಲ್ಲಿನ ಅಪರಿಚಿತ ಜನರು ಸಹ ಅವರಲ್ಲಿನ ಶಕ್ತಿರೂಪದ ಅರಿವಾಗಿ ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಡೆಗೆ ಆಕರ್ಷಿತರಾಗುತ್ತಾರೆ. ಈಶ್ವರನು ಸನಾತನಕ್ಕೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಂತಹ ಅಮೂಲ್ಯ ರತ್ನವನ್ನು ನೀಡಿ ಮನುಕುಲಕ್ಕೆ ದೊಡ್ಡ ಕೃಪೆಯನ್ನು ಮಾಡಿದ್ದಾನೆ. ಇಂದು ಅವರು ೫೩ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಇನ್ನು ಮುಂದೆಯೂ ಅವರಿಂದ ದೊಡ್ಡ ಅದ್ವಿತೀಯ ಮತ್ತು ದೈವೀ ಕಾರ್ಯವಾಗಲಿದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಇಡೀ ಕುಟುಂಬವೇ ಸಾಧನೆ ಮಾಡುತ್ತಿದ್ದು ಅವರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಿಂದ ಆಗುತ್ತಿದೆ.

‘ಸಪ್ತರ್ಷಿಗಳ ಆಜ್ಞೆಯಂತೆ ಮತ್ತು ಭಗವಾನ ಶ್ರಿಕೃಷ್ಣನ ಕೃಪಾಶೀರ್ವಾದದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಇದೇ ರೀತಿ ಶೀಘ್ರಗತಿಯಿಂದ ವಿಶ್ವಕಾರ್ಯವಾಗಲಿ, ಎಂದು ಸಪ್ತರ್ಷಿಗಳ ಚರಣಗಳಲ್ಲಿ ಪ್ರಾರ್ಥನೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೬.೧೨.೨೦೨೨)

ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.