ಲೋಹ ಮತ್ತು ಸಾತ್ತ್ವಿಕ ಆಕಾರದ ಆಭರಣಗಳು ಮಹಿಳೆಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ! – ಕು. ಮಿಲ್ಕಿ ಅಗರ್ವಾಲ್, ಪೋಂಡಾ, ಗೋವಾ

‘ಆಭರಣದಿಂದ ವ್ಯಕ್ತಿಯ ಮೇಲಾಗುವ ಪರಿಣಾಮ’ ಎಂಬ ವಿಷಯದ ಕುರಿತು ಫ್ರಾನ್ಸ್‍ನಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ !

ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ.

ಪೋಂಡಾ (ಗೋವಾ) – ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ವಿನ್ಯಾಸದ ಆಭರಣಗಳು ಸಕಾರಾತ್ಮಕ (ಸಾತ್ತ್ವಿಕ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಹಾಯಕವಾಗಬಲ್ಲವು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ವಿನ್ಯಾಸದ ಆಭರಣಗಳು ನಕಾರಾತ್ಮಕ (ರಜ-ತಮ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆಭರಣ ಧರಿಸುವ ವ್ಯಕ್ತಿ, ಆಭರಣವನ್ನು ತಯಾರಿಸುವ ಕುಶಲಕರ್ಮಿಗಳ ಆಧ್ಯಾತ್ಮಿಕ ಸ್ಥಿತಿ, ಆಭರಣವನ್ನು ತಯಾರಿಸಲು ಬಳಸುವ ಲೋಹ ಮತ್ತು ಆಭರಣದ ವಿನ್ಯಾಸ ಈ ಅಂಶಗಳ ಮೇಲೆ ಆಭರಣಗಳ ಸಕರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆಯು ಅವಲಂಬಿಸಿರುತ್ತದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಕು. ಮಿಲ್ಕಿ ಅಗರ್ವಾಲ್ ಇವರು ಪ್ರತಿಪಾಧಿಸಿದರು. ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ ಸಂಶೋಧನೆಯ ನಿಷ್ಕರ್ಷವನ್ನು ಪ್ರಸ್ತುತಪಡಿಸುತ್ತಿದ್ದರು. ಅವರು ಫ್ರಾನ್ಸ್‍ನ ‘ಐಕಾನ್ ಎಲ್‍ಎಲ್‍ಸಿ’ ಈ ಸಮೂಹವು ಪ್ರತ್ಯಕ್ಷವಾಗಿ ಮತ್ತು ಆನ್‍ಲೈನ್‍ನಲ್ಲಿ ಮೂಲಕ ಆಯೋಜಿಸಿದ್ದ ‘ಫ್ಯಾಷನ್, ಬ್ಯೂಟಿ ಮತ್ತು ಕಾಸ್ಮೆಟಾಲಜಿ ಎಕ್ಸ್‍ಪೋ (ಎಫ್‍ಬಿಸಿ 2022)’ ಕುರಿತ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ‘ಆಭರಣ ನಮ್ಮ ಪ್ರಭಾವಳಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು. ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ.

ಕು. ಮಿಲ್ಕಿ ಅಗರ್ವಾಲ್

ಕು. ಮಿಲ್ಕಿ ಅಗರ್ವಾಲ್ ಅವರು ಮಾತನ್ನು ಮುಂದುವರೆಸುತ್ತಾ, ‘ಚಿನ್ನ’ ಇದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಅತ್ಯಂತ ಅಮೂಲ್ಯವಾದ ಲೋಹವಾಗಿದೆ; ಆದರೆ ಅದರ ಆಧ್ಯಾತ್ಮಿಕ ಮೌಲ್ಯವು ಅದರ ಆಧ್ಯಾತ್ಮಿಕ ದೃಷ್ಟಿಯಲ್ಲಿ ನಕಾರಾತ್ಮಕ ವಿನ್ಯಾಸದಿಂದ ಅನಾಯಾಸವಾಗಿ ಕಡಿಮೆಯಾಗಬಹುದು. ಒಂದು ವೇಳೆ ಆಭರಣ ತಯಾರಕರು ಮತ್ತು ಆಭರಣಗಳನ್ನು ಧರಿಸಿರುವ ವ್ಯಕ್ತಿ ನಕಾರಾತ್ಮಕ ಶಕ್ತಿಗಳಿಂದ ಪ್ರಭಾವಿತರಾಗಿದ್ದರೆ, ಅದು ಆಭರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇಂದು ಆಭರಣಗಳನ್ನು ಕೇವಲ ಮಾನಸಿಕ ಮಟ್ಟದಲ್ಲಿ ಮಾತ್ರ ನೋಡಲಾಗುತ್ತದೆ ಮತ್ತು ಆದ್ದರಿಂದ ಆಧ್ಯಾತ್ಮಿಕ ದೃಷ್ಟಿಕೋನದಿಂದ ಆಭರಣದ ನಿಜವಾದ ಉದ್ದೇಶವು ಸಾಧ್ಯವಾಗುವುದಿಲ್ಲ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.), ‘ಪಾಲಿಕಾಂಟ್ರಾಸ್ಟ್ ಇಂಟರ್‍ಫರೆನ್ಸ್ ಫೋಟೋಗ್ರಫಿ’ (ಪಿಐಪಿ) ಬಳಸಿ ಸಿದ್ಧಪಡಿಸಿದ ಸಂಶೋಧನೆಯನ್ನು ಈ ಪರಿಷತ್ತಿನಲ್ಲಿ ಕು. ಮಿಲ್ಕಿ ಅಗರ್ವಾಲ್ ಇವರು ಮಂಡಿಸಿದರು.

ಈ ಸಂಶೋಧನೆಯಲ್ಲಿ 3 ಬಗೆಯ ಆಭರಣಗಳ ಸೂಕ್ಷ್ಮ ಉರ್ಜೆ ಮತ್ತು ಅದನ್ನು ಧರಿಸಿದ ಮಹಿಳೆಯ ಪ್ರಭಾವಲಯದ ಮೇಲೆ ಬೀರುವ ಪರಿಣಾಮವನ್ನು ಪರೀಕ್ಷಿಸಲಾಯಿತು. ಈ ಆಭರಣಗಳಲ್ಲಿ ಮೊದಲನೆಯದು ‘ಫ್ಯಾಶನ್’ ಆಭರಣ’ ವರ್ಗಕ್ಕೆ ಸೇರಿದ್ದು, ಎರಡನೆಯ ಆಭರಣವು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯ ವಿನ್ಯಾಸದ 22 ಕ್ಯಾರೆಟ್ ಚಿನ್ನ ಮತ್ತು ಮೂರನೇ ಆಭರಣವು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯ ವಿನ್ಯಾಸದ 22 ಕ್ಯಾರೆಟ್ ಚಿನ್ನದ್ದಾಗಿತ್ತು. ಈ ಪರೀಕ್ಷೆಯಲ್ಲಿ, ಮೊದಲ ಮತ್ತು ಎರಡನೆಯ ಸರಗಳಿಂದ ಮುಖ್ಯವಾಗಿ ರಜ-ತಮ ಸ್ಪಂದನಗಳು ಪಸರಿಸಿದವು ಮತ್ತು ಅದರಿಂದ ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮವಾಯಿತು ಹಾಗೂ ಮೂರನೇ ಆಭರಣದಿಂದ ಸಾತ್ವಿಕ ಸ್ಪಂದನಗಳು ಪಸರಿಸಿದವು ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಕು. ಮಿಲ್ಕಿ ಅಗರ್ವಾಲ ಇವರು ಸಾರಾಂಶ ಹೇಳುತ್ತಾ, ಆಭರಣಗಳ ಕುರಿತು ಮೂಲಭೂತ ಆಧ್ಯಾತ್ಮಿಕ ಪರಿಕಲ್ಪನೆಯನ್ನು ಕುಶಲಕರ್ಮಿಗಳು ಮತ್ತು ಖರೀದಿದಾರರು ಪಾಲಿಸಿದರೆ, ಆಭರಣದ ನೈಜ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.