ಸನಾತನದ ಆಯುರ್ವೇದಿಕ ಔಷಧಗಳು

ಸನಾತನ ಯಷ್ಟಿಮಧು (ಜೇಷ್ಠಮಧ) ಚೂರ್ಣದ ಔಷಧಿ ಉಪಯೋಗ

ವೈದ್ಯ ಮೇಘರಾಜ ಪರಾಡಕರ

೧. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಧ್ವನಿ ಕೂಡುವುದು, ಗಂಟಲಿನಿಂದ ಕಫ ಹೊರಗೆ ಬರದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧ ಚೂರ್ಣವನ್ನು ದಿನದಲ್ಲಿ ೩-೪ ಬಾರಿ ಜಗಿದು ತಿನ್ನಬೇಕು. (೫ ದಿನ)

೨. ಮಲಬದ್ಧತೆ : ಎರಡೂ ಊಟಗಳ ಮೊದಲು ೧ ಚಮಚ ಜೇಷ್ಠಮಧ ಚೂರ್ಣ ಮತ್ತು ೧ ಚಿಟಿಕೆ ಉಪ್ಪನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು. (೧೫ ದಿನ)

೩. ಉಷ್ಣತೆಯ ರೋಗಗಳು (ಉಷ್ಣ ಪದಾರ್ಥಗಳನ್ನು ತಿಂದರೆ ತೊಂದರೆಯಾಗುವುದು, ಬಾಯಿ ಹುಣ್ಣು, ಮೈ ಉರಿಯುವುದು, ಮೂತ್ರಮಾರ್ಗ ಉರಿಯುವುದು, ಮೈ ಮೇಲೆ ಬೊಕ್ಕೆಗಳೇಳುವುದು, ತಲೆ ಸುತ್ತುವುದು ಇತ್ಯಾದಿ) : ದಿನದಲ್ಲಿ ೨-೩ ಬಾರಿ ೧ ಚಮಚ ಜೇಷ್ಠಮಧ ಚೂರ್ಣ ೧ ಚಮಚ ತುಪ್ಪದಲ್ಲಿ ಸೇರಿಸಿ ತಿನ್ನಬೇಕು. (೧೫ ದಿನ)

. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.

. ಇಲ್ಲಿ ಪ್ರಾಥಮಿಕ ಉಪಚಾರವನ್ನು ಕೊಟ್ಟಿದೆ. ೭ ದಿನಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

. ಸನಾತನ ಸಂಸ್ಥೆಯ ಯಷ್ಟಿಮಧ (ಜೇಷ್ಠ ಮಧ) ಚೂರ್ಣ ಲಭ್ಯವಿದೆ. ಇದರ ಇತರ ರೋಗಗಳ ಮೇಲಿನ ಉಪಯೋಗವನ್ನು ಆ ಡಬ್ಬಿಯ ಜೊತೆಗಿರುವ ಚೀಟಿಯಲ್ಲಿ ಕೊಡಲಾಗಿದೆ.

. ಇಲ್ಲಿ ನೀಡಿದ ಮಾಹಿತಿ ಮತ್ತು ಚೀಟಿಯಲ್ಲಿ ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಇರಬಹುದು. ಎರಡರಲ್ಲಿನ ಯಾವುದೇ ಪದ್ದತಿಯಿಂದ ಔಷಧಿಯನ್ನು ಉಪಯೋಗಿಸಬಹುದು.

– ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೮.೨೦೨೨)