ಕಾಂಗ್ರೆಸ್ನ ಶಾಸಕ ತನ್ವೀರ ಸೇಠರ ಬೇಡಿಕೆಗೆ ವಿರೋಧ

ಹುಬ್ಬಳ್ಳಿ – ಕಾಂಗ್ರೆಸ್ ಶಾಸಕ ತನ್ವೀರ ಸೇಠ ಇವರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನನ ೧೦೦ ಅಡಿ ಎತ್ತರದ ಪುತ್ತಳಿಯನ್ನು ಸ್ಥಾಪಿಸುವಂತೆ ಬೇಡಿಕೆ ಮಾಡಿದ್ದಾರೆ. ಇದಕ್ಕೆ ಶ್ರೀರಾಮ ಸೇನೆಯ ಮುಖಂಡ ಶ್ರೀ. ಪ್ರಮೋದ ಮುತಾಲಿಕ ಇವರು ‘ಟಿಪ್ಪು ಸುಲ್ತಾನನ ಪುತ್ತಳಿಯನ್ನು ಸ್ಥಾಪಿಸಿದರೆ ನಾವು ಅದನ್ನು ಕಿತ್ತು ಎಸೆಯುತ್ತೇವೆ. ಅಯೋಧ್ಯೆಯಲ್ಲಿ ಬಾಬರಿಯನ್ನು ಯಾವ ರೀತಿ ಕೆಡವಲಾಯಿತೋ, ಅದೇ ರೀತಿ ಆ ಪ್ರತಿಮೆಯನ್ನು ಕೂಡ ಕೆಡವಲಾಗುವುದು’, ಎಂದು ಎಚ್ಚರಿಕೆಯನ್ನು ನೀಡಿದರು. ಅವರು ಅಲ್ಲಿಯ ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಟಿಪ್ಪು ಮೂರ್ತಿಯನ್ನು ಬಾಬರಿ ಮಸೀದಿಯಂತೆಯೇ ಧ್ವಂಸ ಮಾಡುತ್ತೇವೆ: ಮುತಾಲಿಕ್ https://t.co/kEyYJB4MuR #TippuSultan #pramodmuthalik
— Prajavani (@prajavani) November 11, 2022
ಶ್ರೀ ಮುತಾಲಿಕರು ತಮ್ಮ ಮಾತನ್ನು ಮುಂದುವರಿಸುತ್ತಾ, ಟಿಪ್ಪು ಒಬ್ಬ ಮತಾಂಧ ರಾಜನಾಗಿದ್ದನು. ಆತ ಹಿಂದೂಗಳ ಸಾವಿರಾರು ಮಂದಿರಗಳನ್ನು ಧ್ವಂಸಗೊಳಿಸಿದನು. ಕರ್ನಾಟಕಕ್ಕಾಗಿ ಆತ ಕಪ್ಪು ಚುಕ್ಕೆಯಾಗಿದ್ದನು. ಮೈಸೂರಿನ ರಾಜರುಗಳ ಅಪಮಾನವಾಗುವಂತೆ ಆ ಪುತ್ತಳಿಯನ್ನು ಆ ನಗರದಲ್ಲಿ ನಿರ್ಮಿಸಬಾರದು. ಸರಕಾರವು ಟಿಪ್ಪುವಿನ ಪುತ್ತಳಿಯ ವಿಚಾರ ಮಾಡಬಾರದು. ಅದಕ್ಕಿಂತ ಭಾರತೀಯ ತತ್ವಜ್ಞ ಶಿಶುನಾಳ ಶರೀಫ ಮತ್ತು ಮಾಜಿ ರಾಷ್ಟ್ರಪತಿ ಅಬ್ದುಲ ಕಲಾಮ ಇವರ ಪುತ್ತಳಿಯನ್ನು ನಿರ್ಮಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮುಂತಾದ ರಾಷ್ಟ್ರಪುರುಷರ ಪುತ್ತಳಿಯನ್ನು ಸ್ಥಾಪಿಸುವ ಬೇಡಿಕೆಯನ್ನು ಮಾಡಿದ್ದಾರೆಯೇ ? |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ