- ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
- ಬಡಜನರು ಗುಡಿ ಗೋಪುರ ಕಟ್ಟುವರು !

ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿ (ನಿಪ್ಪಾಣಿ ತಾಲುಕು, ಬೆಳಗಾವಿ ಜಿಲ್ಲೆ) – ಕೊರೊನಾ ರೋಗಾಣುವನ್ನು ನಾನೇ ನಾಶ ಮಾಡಿದ್ದೇನೆ, ಹಾಗೂ ಭಾರತದಲ್ಲಿ ಸಮಾನ ನಾಗರೀಕ ಕಾನೂನು ಬರುವುದು ಮತ್ತು ಬಡಜನರು ಗುಡಿ ಗೋಪುರ ಕಟ್ಟುವರು ಎಂದು ಇಲ್ಲಿಯ ಶ್ರೀ ಕ್ಷೇತ್ರ ಅಪ್ಪಾಚಿಮಾಡಿ ಇಲ್ಲಿಯ ಶ್ರೀ ಹಾಲಸಿದ್ಧನಾಥ ದೇವರು ಭಕ್ತರಿಗೆ ಭವಿಷ್ಯವಾಣಿ ನುಡಿದರು. ಇದರ ಜೊತೆಗೆ ‘ಜಗತ್ತಿನ ತಾಪಮಾನದಲ್ಲಿ ಹೆಚ್ಚಳದ ಅಪಾಯ ಕಾಡುವುದು. ಕಾಡಲ್ಲಿ ಕಾಡ್ಗಿಚ್ಚು ಹತ್ತಿ ಪೃಥ್ವಿಯ ಮೇಲಿನ ವನ್ಯಜೀವಿ ವನ್ಯ ಔಷಧಿ ನಾಶವಾಗುವುದು’, ಎಂದು ಹೇಳಿ ಬರುವ ಆಪತ್ಕಾಲದ ಬಗ್ಗೆ ಕೂಡ ಸೂಚನೆ ನೀಡಿದರು.
ಈ ಭವಿಷ್ಯವಾಣಿಯನ್ನು ಅಕ್ಟೋಬರ್ ೧೪ ರಂದು ಬೆಳಿಗ್ಗೆನ ಜಾವ ೪.೧೫ ಗಂಟೆಗೆ ಪೂಜ್ಯ. ಸಿದ್ದಾರ್ಥ (ಪೂ. ಭಗವಾನ ಡೋಣೆ ಮಹಾರಾಜ ಇವರ ಚಿರಂಜೀವಿ) ಡೋಣೆ ಮಹಾರಾಜ (ಮಾಘಾಪುರೆ) ಇವರ ಮೂಲಕ ಹೇಳಲಾಯಿತು. ಈ ಭವಿಷ್ಯವಾಣಿಯಲ್ಲಿ, ‘ಮಹಾರಾಷ್ಟ್ರ ರಾಜ್ಯದಲ್ಲಿ ನದಿ ಜೋಡಣೆ ಪ್ರಕಲ್ಪ ಬರುವುದು. ಬರಗಾಲದ ಪ್ರದೇಶ ನೀರಿನ ಕೆಳಗೆ ಬರುವುದು. ನಂದನವನ ಆಗುವುದು, ಪಾಕಿಸ್ತಾನದ ನಾಲ್ಕನೇ ಒಂದು ಭಾಗ ಭಾರತದ ವಶಕ್ಕೆ ಬರುವುದು, ಕೇಸರಿ ಧ್ವಜ ರಾಜ್ಯ ಆಳುವುದು. ಶತ್ರು ರಾಷ್ಟ್ರ ಚೀನಾ ಭಾರತದ ಮೇಲೆ ದಾಳಿ ಮಾಡುವುದು, ಭಾರತ ಪಾಕಿಸ್ತಾನ ಗಡಿಯಲ್ಲಿ ಯುದ್ಧ ನಡೆಯುವುದು, ಸ್ತ್ರೀಯರು ರಾಜಕಾರಣದಲ್ಲಿ ಗೆಲ್ಲುವರು, ದೇಶದಲ್ಲಿ ಮುಷ್ಕರಗಳು ನಡೆಯುವುದು, ಮುಸಲ್ಮಾನ ರಾಷ್ಟ್ರಗಳು ನಾಶವಾಗುವುದು’, ಇದರ ಜೊತೆ ಅನೇಕ ವಿಷಯಗಳ ಭವಿಷ್ಯವಾಣಿ ಮಾಡಲಾಯಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ