
ಉಜ್ಜೈನ್ (ಮಧ್ಯಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಇಲ್ಲಿಯ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ‘ಮಹಾಕಾಲ ಲೋಕ’ ಹೊಸ ಸಂಕಿರಣದ ಉದ್ಘಾಟನೆ ಮಾಡಲಾಯಿತು. ಈ ಸಮಯದಲ್ಲಿ ೧೫ ಅಡಿ ಎತ್ತರದ ಶಿವಲಿಂಗದ ಪ್ರತಿಕೃತಿಯ ತೆರೆಸರಿಸಿ ಉದ್ಘಾಟನೆ ಮಾಡಲಾಯಿತು. ಈ ಸಂಪೂರ್ಣ ಸಂಕಿರಣ ಆಧ್ಯಾತ್ಮಿಕ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಅಧ್ಯಾತ್ಮದ ಈ ಹೊಸ ಪ್ರಾಂಗಣ ಎಲ್ಲರಿಗಾಗಿ ತೆರೆಯಲಾಗಿದೆ. ಈ ಮೊದಲು ಪ್ರಧಾನಿ ಮೋದಿ ಇವರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹಾಗೂ ಕೆಲವು ನಿಮಿಷ ಧ್ಯಾನ ಮಾಡಿದರು. ಈ ಸಂಪೂರ್ಣ ಕಾರ್ಯಕ್ರಮದ ಪ್ರಕ್ಷೇಪಣೆ ಕ್ಷಿಪ್ರಾ ನದಿಯ ತೀರದಲ್ಲಿ ದೊಡ್ಡ ಪರದೆಯ ಮೇಲೆ ಮಾಡಲಾಯಿತು. ಸಾವಿರಾರು ಜನರು ಇದರ ಲಾಭ ಪಡೆದರು. ಹಾಗೂ ಕಾರ್ಯಕ್ರಮದ ನೇರ ಪ್ರಸಾರ ಜಗತ್ತಿನಾದ್ಯಂತ ೪೦ ದೇಶಗಳಲ್ಲಿ ಮಾಡಲಾಯಿತು.
ಮಹಾಕಾಲ ಲೋಕ ಸಂಕಿರಣಕ್ಕಾಗಿ ೮೫೬ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮೊದಲು ೨.೮ ಹೆಕ್ಟರ್ ನಲ್ಲಿ ಆವರಿಸಿರುವ ಮಹಾಕಾಲ ಸಂಕುಲ ಈಗ ೪೭ ಹೆಕ್ಟರ್ ಆಗಿದೆ. ಇದರಲ್ಲಿ ೯೪೬ ಮೀಟರ್ ಉದ್ದದ ಮಾರ್ಗ ಇರಲಿದೆ. ಅದರಿಂದ ಭಕ್ತರು ನೇರ ದೇವಸ್ಥಾನದ ಗರ್ಭಗೃಹಕ್ಕೆ ತಲುಪುವರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ