
‘ವ್ಯಾಯಾಮದ ಮಹತ್ವ ತಿಳಿದ ನಂತರ ಬಹಳಷ್ಟು ಜನರು ಉತ್ಸಾಹದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ; ಆದರೆ ಆ ಉತ್ಸಾಹ ೩-೪ ದಿನಗಳಲ್ಲಿ ಕಡಿಮೆಯಾಗತೊಡಗುತ್ತದೆ ಮತ್ತು ಉತ್ಸಾಹಕ್ಕಿಂತ ಆಲಸ್ಯ ಪ್ರಬಲವಾಗುತ್ತದೆ ಮತ್ತು ‘ಇಂದು ಇರಲಿ. ನಾಳೆ ಮಾಡೋಣ ಎಂಬ ವಿಚಾರ ಬರುತ್ತದೆ. ವ್ಯಾಯಾಮದಲ್ಲಿ ಸಾತತ್ಯವನ್ನಿಡಲು ಕೃತಿಯ ಸ್ತರದಲ್ಲಿ ಒಂದು ಸುಲಭವಾದ ಉಪಾಯವೆಂದರೆ ‘೫ ನಿಮಿಷಗಳ ನಿಯಮ’ವನ್ನು ಬಳಸುವುದು. ‘ಯಾವುದೇ ಕೃತಿಯನ್ನು ಸ್ವಲ್ಪವೂ ಮಾಡದೇ ಇರುವುದಕ್ಕಿಂತ ೫ ನಿಮಿಷಗಳ ವರೆಗೆ ಮಾಡೋಣ; ಎಂದು ಆರಂಭಿಸುವುದು’, ಅಂದರೆ ‘೫ ನಿಮಿಷಗಳ ನಿಯಮವನ್ನು ಬಳಸುವುದು’. ಯಾವಾಗ ಇಂದು ವ್ಯಾಯಾಮ ಮಾಡುವುದು ಬೇಡ ಎಂಬ ವಿಚಾರ ಮನಸ್ಸಿನಲ್ಲಿ ಬರುತ್ತದೆಯೋ, ಆಗ ೫ ನಿಮಿಷಗಳ ವ್ಯಾಯಾಮ ಮಾಡೋಣ ಎಂದು ವ್ಯಾಯಾಮವನ್ನು ಆರಂಭಿಸಬೇಕು. ವ್ಯಾಯಾಮವನ್ನು ಆರಂಭಿಸಿದ ನಂತರ ತಾನಾಗಿಯೇ ಉತ್ಸಾಹ ಬರುತ್ತದೆ ಮತ್ತು ಯಾವಾಗ ಅರ್ಧ ಗಂಟೆ ವ್ಯಾಯಾಮವಾಯಿತು ಎಂಬುದು ತಿಳಿಯುವುದೂ ಇಲ್ಲ. ಅದರಲ್ಲಿಯೂ ಆಲಸ್ಯ ಪ್ರಬಲವಾಗಿದ್ದರೆ ನಾವು ೫ ನಿಮಿಷಗಳ ನಂತರ ನಿಲ್ಲೋಣ; ಅಂದರೆ ನಾವು ಏನೂ ಮಾಡಿಯೇ ಇಲ್ಲ ಎಂದಾದರೂ ಆಗುವುದಿಲ್ಲ. ವ್ಯಾಯಾಮದ ಸುಪರಿಣಾಮಗಳು ಕಾಣಿಸತೊಡಗಿದ ನಂತರ ವ್ಯಾಯಾಮದ ಬಗ್ಗೆ ಆಸಕ್ತಿ ನಿರ್ಮಾಣವಾಗುವುದು ಮತ್ತು ನಂತರ ತಾನಾಗಿಯೇ ವ್ಯಾಯಾಮದಲ್ಲಿ ಸಾತತ್ಯ ಉಳಿಯುವುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೮.೨೦೨೨)
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
‘ಎನ್ಸಿಇಆರ್ಟಿ’ ಮೂರನೇ ತರಗತಿಯ ಪುಸ್ತಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿಜ್ಞಾನ ಪುಸ್ತಕಗಳಲ್ಲಿ ಆಯುರ್ವೇದ ಸೇರ್ಪಡೆ.