ಮಳೆಗಾಲದಲ್ಲಿನ ನೆಗಡಿ, ಕೆಮ್ಮು, ಜ್ವರ, ಹಾಗೆಯೇ ಕೊರೊನಾಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು

ವೈದ್ಯ ಮೇಘರಾಜ ಪರಾಡಕರ್

೧. ಕಾರಣಗಳಿಗನುಸಾರ ಉಪಚಾರ

ಮಳೆಗಾಲದಲ್ಲಿ ಸತತ ಮಳೆಯಿಂದ ವಾತಾವರಣದಲ್ಲಿ ಹರಡಿದ ಶೀತಲತೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ.

ಅ. ಜ್ವರ ಇದ್ದರೆ ಸ್ವೆಟರ್‌ನಂತಿರುವ ಬೆಚ್ಚಗಿನ ಬಟ್ಟೆಯನ್ನು ಧರಿಸಬೇಕು. ಕಿವಿ ಮುಚ್ಚುವ ಟೊಪ್ಪಿಗೆ (ಮಫ್ಲರು) ಹಾಕಬೇಕು. ಇದರಿಂದ ಬೆವರು ಬಂದು ಜ್ವರ ಇಳಿಯುತ್ತದೆ.

ಆ. ಕುಡಿಯುವ ನೀರನ್ನು ಕುದಿಸಿ ಉಗುರುಬೆಚ್ಚ ಮಾಡಿ ಕುಡಿಯಬೇಕು. ಈ ದಿನಗಳಲ್ಲಿ ಆರೋಗ್ಯವಂತ ವ್ಯಕ್ತಿಗಳೂ ಬಿಸಿ ಅಥವಾ ಉಗುರುಬೆಚ್ಚಗಿರುವ ನೀರನ್ನು ಕುಡಿದರೆ ಚೆನ್ನಾಗಿ ಆಹಾರ ಪಚನವಾಗಿ ಆರೋಗ್ಯವು ಚೆನ್ನಾಗಿರುತ್ತದೆ.

ಇ. ಗಂಟಲು ಕಡುಗೆಂಪಾಗುವುದು, ಗಂಟಲು ಕೆರೆತ ಅಥವಾ ನೋವು ಇವುಗಳಿಗೆ ಉಗುರುಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ತ್ರಿಫಲಾ ಚೂರ್ಣ ಅಥವಾ ಅರಿಸಿಣ ಮತ್ತು ಉಪ್ಪನ್ನು ಹಾಕಿ ಮುಕ್ಕಳಿಸಬೇಕು.

ಈ. ತಲೆ ಭಾರವಾಗುವುದು, ನೆಗಡಿಯಿಂದ ಮೂಗು ತುಂಬು ವುದು, ದವಡೆಗಳ ಮೂಲದಲ್ಲಿ ಒತ್ತಿದರೆ ನೋಯುವುದು ಇಂತಹ ಲಕ್ಷಣಗಳಿರುವಾಗ ಬಟ್ಟೆಯನ್ನು ಬಿಸಿ ಮಾಡಿ ಹೊರಗಿನಿಂದ ಶಾಖ ನೀಡಬೇಕು. ಬಿಸಿನೀರನ್ನು ಕುಡಿದ ನಂತರ ಲೋಟ ಬಿಸಿಯಾಗಿರುತ್ತದೆ. ಅದರಿಂದಲೂ ಶಾಖ ಕೊಟ್ಟುಕೊಳ್ಳಬೇಕು. ಹೊರಗಿನಿಂದ ಶಾಖ ನೀಡುವುದು ಇದು ಆವಿ(ವಾಫ್) ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚು ಲಾಭದಾಯಕವಾಗಿದೆ. ದಿನಕ್ಕೆ ೪-೫ ಬಾರಿ ಶಾಖ ನೀಡಬೇಕು.

ಉ. ರಾತ್ರಿ ಪಂಖ (ಫ್ಯಾನ್) ಹಚ್ಚಿ ಮಲಗುವುದರಿಂದ ತಂಪು ಗಾಳಿ ಮೂಗುಬಾಯಿಯಲ್ಲಿ ಹೋಗುತ್ತದೆ. ಗಂಟಲು ಒಳಗಿನಿಂದ ಒಣಗುತ್ತದೆ ಮತ್ತು ಶೀತದಿಂದ ಗಂಟಲಿನಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಗಂಟಲು ಕಡುಗೆಂಪಾಗುತ್ತದೆ. ಇದನ್ನು ತಡೆಯಲು ತಿರುಗುವ ಟೇಬಲ್ ಫ್ಯಾನ್ ಉಪಯೋಗಿಸಬೇಕು ಅಥವಾ ಪಂಖವನ್ನು ಹಚ್ಚದೇ ಮಲಗಬೇಕು. ಈಗಿನ ಕಾಲದಲ್ಲಿ ‘ಟೈಮರ್’ನ ಫ್ಯಾನಗಳು ಬಂದಿವೆ. ಅದರಲ್ಲಿ ನಾವು ಮಲಗುವಾಗ ನಿಶ್ಚಿತ ಸಮಯದಲ್ಲಿ ಫ್ಯಾನ್ ಬಂದ್ ಮಾಡುವ ಸೌಲಭ್ಯವಿರುತ್ತದೆ. ಅದನ್ನು ಉಪಯೋಗಿಸಬೇಕು. ಮಲಗಿದ ನಂತರ ತಂಪು ಗಾಳಿ ಮೂಗುಬಾಯಿಯಲ್ಲಿ ಹೋಗಬಾರದೆಂದು ಕಿವಿಮುಚ್ಚುವ ಟೊಪ್ಪಿ(ಮಫ್ಲರ್)ಯನ್ನು ಹಾಕಿ ಸರಿಯಾಗಿ ಹೊದ್ದು ಕೊಂಡು ಮಲಗಬೇಕು.  ಯಾವುದೇ ಉಪಚಾರಪದ್ಧತಿಗಳಿಗನುಸಾರ ಔಷಧಿಗಳನ್ನು ತೆಗೆದುಕೊಂಡರೂ ಮೇಲಿನ ಕಾರಣಗಳಿಗನುಸಾರ ಉಪಚಾರವನ್ನು ಮಾಡಿದರೆ ಬೇಗ ಗುಣವಾಗಲು ಸಹಾಯವಾಗುತ್ತದೆ.

ಲಕ್ಷಣಗಳಿಗನುಸಾರ ಆಯುರ್ವೇದದ ಔಷಧಿಗಳು

ಔಷಧಿಗಳನ್ನು ವೈದ್ಯರ ಮಾರ್ಗದರ್ಶನಕ್ಕನುಸಾರವೇ ತೆಗೆದು ಕೊಳ್ಳಬೇಕು; ಆದರೆ ಕೆಲವು ಸಮಯದಲ್ಲಿ ವೈದ್ಯರ ಬಳಿಗೆ ಬೇಗ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಔಷಧಿಯನ್ನು ಸೇವಿಸಿದರೆ ವೈದ್ಯರ ಬಳಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಆದುದರಿಂದ ‘ಪ್ರಥಮೋಪಚಾರ’ವೆಂದು ಇಲ್ಲಿ ಕೆಲವು ಔಷಧಿಗಳನ್ನು ಕೊಡಲಾಗಿವೆ. ಔಷಧಿಗಳನ್ನು ಸೇವಿಸಿದರೂ ಗುಣವಾಗದಿದ್ದರೆ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡದೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿರಿ.

೨ ಅ. ಗಂಟಲು ಕೆರೆಯುವುದು ಅಥವಾ ಗಂಟಲು ಕಡು ಗೆಂಪಾಗುವುದು : ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ‘ಚಂದ್ರಾಮೃತ ರಸ’ ೧-೨ ಮಾತ್ರೆಗಳನ್ನು ಚೀಪಿ ತಿನ್ನಬೇಕು. ತಕ್ಷಣ ಗುಣವೆನಿಸತೊಡಗುತ್ತದೆ. ಕೆಮ್ಮಿಗೆ ಚಂದ್ರಾಮೃತರಸ ಉಪಯುಕ್ತವಾಗಿದ್ದು ದಿನಕ್ಕೆ ೫-೬ ಮಾತ್ರೆಗಳನ್ನು ಸೇವಿಸಬಹುದು.

೨ ಆ. ನೆಗಡಿ, ಕೆಮ್ಮು ಮತ್ತು ಕಫವಾಗುವುದು : ೧ ಚಮಚ ‘ಸಿತೋಪಲಾದಿ ಚೂರ್ಣ’ ಮತ್ತು ೧ ಚಮಚ ಜೇನುತುಪ್ಪವನ್ನು ಸೇರಿಸಿ ಇಡಬೇಕು. ದಿನವಿಡಿ ಮಧ್ಯಮಧ್ಯದಲ್ಲಿ ಈ ಮಿಶ್ರಣವನ್ನು ಆಗಾಗ ನೆಕ್ಕಬೇಕು. ಸಿತೋಪಲಾದಿ ಚೂರ್ಣವನ್ನು ದಿನಕ್ಕೆ ೩ ಚಮಚದ ತನಕ ಉಪಯೋಗಿಸಬಹುದು. ಈ ಚೂರ್ಣದಿಂದ ಶ್ವಸನನಾಳದಲ್ಲಿರುವ ವಿಕೃತ(ದಪ್ಪ) ಕಫವನ್ನು ಹೊರಗೆ ತೆಗೆಯಲು ಸಹಾಯವಾಗುತ್ತದೆ, ಹಾಗೆಯೇ ಆವಶ್ಯಕವಾಗಿರುವ ಒಳ್ಳೆಯ ಕಫ ತಯಾರಾಗುತ್ತದೆ. ಇದರಿಂದಾಗಿ ಶ್ವಾಸನಾಳದ ಬಲ ಹೆಚ್ಚಾಗುತ್ತದೆ.

೨ ಇ. ಜ್ವರ : ‘ತ್ರಿಭುವನಕೀರ್ತಿ ರಸ’ ೧ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಜ್ವರ ಹೆಚ್ಚಾಗಿದ್ದರೆ ಪ್ರತಿ ೨ ಗಂಟೆಗೊಮ್ಮೆ ೧ ಮಾತ್ರೆ ತೆಗೆದುಕೊಳ್ಳಬೇಕು. ದಿನಕ್ಕೆ ೫-೬ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಒಂದು ದಿನದಲ್ಲಿ ಜ್ವರದ ತೀವ್ರತೆ ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರಲ್ಲಿಗೆ ಹೋಗಬೇಕು.

೨ ಈ. ಮಲಬದ್ಧತೆ : ‘ಗಂಧರ್ವ ಹರಿತಕಿ ವಟಿ’ ೨ ಮಾತ್ರೆಗಳನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಎರಡು ಹೊತ್ತು ಊಟದ ಮೊದಲು ತೆಗೆದುಕೊಳ್ಳಬೇಕು.

೨ ಉ. ಪರೀಕ್ಷೆಯಲ್ಲಿ ಕೊರೊನಾ ಇರುವುದು ಸಿದ್ಧವಾಗುವುದು : ‘ಸುವರ್ಣಮಾಲಿನಿ ವಸಂತ’ ಅಥವಾ ‘ಮಹಾಲಕ್ಷ್ಮಿವಿಲಾಸ ರಸ’ ಇವುಗಳಲ್ಲಿ ಯಾವುದೇ ಒಂದು ಮಾತ್ರೆಯನ್ನು ಪುಡಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ೨ ರಿಂದ ೪ ಹನಿಗಳಷ್ಟು ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಸುಮಾರು ೭ ರಿಂದ ೧೫ ದಿನಗಳವರೆಗೆ ಈ ಔಷಧಿಗಳನ್ನು ಸೇವಿಸಿದರೆ ಬೇಗ ಗುಣವಾಗಲು ಸಹಾಯವಾಗುತ್ತದೆ. ಈ ಎರಡೂ ಔಷಧಗಳು ಸುವರ್ಣಯುಕ್ತ (ಚಿನ್ನದ ಭಸ್ಮವಿರುವ)ವಾಗಿದೆ. ಆದ್ದರಿಂದ ಇವು ದುಬಾರಿ ಆಗಿರುತ್ತವೆ. ಆಯುರ್ವೇದಕ್ಕನುಸಾರ ಸುವರ್ಣಮಾಲಿನಿಯು ಉತ್ತಮ ವಿಷಹಾರಿ ಔಷಧಿಯಾಗಿದ್ದು ಒಂದು ಉತ್ಕೃಷ್ಟ ರಸಾಯನ ವಾಗಿದೆ. ವಿವಿಧ ಬ್ಯಾಕ್ಟೀರಿಯಾ ಅಥವಾ ವಿಷಾಣುಗಳ ಸೊಂಕು ಆಗಿರುವುದರಿಂದ ಅವುಗಳ ವಿಷ ಶರೀರದಲ್ಲಿ ಹರಡುತ್ತದೆ. ಸುವರ್ಣಯುಕ್ತ ಔಷಧಗಳ ಸೇವನೆಯಿಂದ ಈ ವಿಷಕಾರಗಳನ್ನು ನಿರೋಧಿಸುವ ಶಕ್ತಿ ಬರುತ್ತದೆ. ‘ರಸಾಯನ’ ಎಂದರೆ  ಶರೀರವನ್ನು ಉತ್ತಮವನ್ನಾಗಿಸಲು ಸಹಾಯ ಮಾಡುವ ಔಷಧಿಯಾಗಿದೆ.

೨ ಊ. ಕಾಯಿಲೆಯಿಂದ ಗುಣವಾದ ನಂತರ ಬಂದ ದಣಿವು : ‘ಸಂಶಮನಿ ವಟಿ’, ‘ಪ್ರಭಾಕರ ವಟಿ’ ಅಥವಾ ‘ಲಕ್ಷ್ಮಿವಿಲಾಸ ರಸ’ ಇವುಗಳಲ್ಲಿ ಯಾವುದಾದರೊಂದು ಔಷಧಿಯ ೧-೧ ಮಾತ್ರೆಯನ್ನು ಪುಡಿ ಮಾಡಿ ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ೨ ರಿಂದ ೪ ಹನಿಗಳಷ್ಟು ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಈ ಔಷಧಗಳಲ್ಲಿ ಅಭ್ರಕ ಭಸ್ಮ, ಲೋಹಭಸ್ಮ, ಸುವರ್ಣಮಾಕ್ಷಿಕ ಭಸ್ಮ ಇವುಗಳಂತೆ ರಕ್ತವನ್ನು ಪುಷ್ಟಿಕರವನ್ನಾಗಿಸುವ, ಹಾಗೆಯೇ ಶರೀರಕ್ಕೆ ಶಕ್ತಿ ನೀಡುವ ಘಟಕಗಳಿರುತ್ತವೆ. ಕಾಯಿಲೆ ಇದ್ದಾಗ ರೋಗದೊಂದಿಗೆ ಹೋರಾಡುವುದರಲ್ಲಿ ಶರೀರದ ಶಕ್ತಿಯು ಖರ್ಚಾಗುತ್ತದೆ, ಆಗ ಈ ಔಷಧಗಳಿಂದ ಶಕ್ತಿ ಬರುತ್ತದೆ.

(ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಇದೆ. ಹೆಚ್ಚಿನ ಮಾಹಿತಿಗಾಗಿ ತಾವು ತಮ್ಮ ವೈದ್ಯರೊಂದಿಗೆ ಅಥವಾ ಆಧುನಿಕ ವೈದ್ಯರ (ಡಾಕ್ಟರರ) ಸಲಹೆ ಪಡೆದು ಔಷಧೋಪಚಾರವನ್ನು ಮಾಡಬೇಕು. – ಸಂಕಲಕರು)

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೭.೨೦೨೨)