
ದಕ್ಷಿಣ ಆಫ್ರಿಕಾದಲ್ಲಿ ವಾಸ್ತವ್ಯಕ್ಕಿದ್ದಾಗ ಒಮ್ಮೆ ಮ. ಗಾಂಧಿಯವರಿಗೆ ಸ್ಥಳೀಯ ಗೂಂಡಾಗಳ ಒಂದು ಗುಂಪು ನಡುಬೀದಿಯಲ್ಲಿ ‘ಈ ಬೀದಿಯಲ್ಲಿ ಕರಿ ಜನರಿಗೆ ನಡೆಯುವ ಅಧಿಕಾರವಿಲ್ಲ’, ಎಂದು ಹೇಳುತ್ತಾ ಕೆಟ್ಟ (ಅಸಭ್ಯ) ಭಾಷೆಯಲ್ಲಿ ಅವಮಾನ ಮಾಡಿದ್ದರು. ಆ ಪ್ರಸಂಗವು ಹೇಗೋ ಮುಗಿಯಿತು; ಆದರೆ ಇದಕ್ಕೆ ಗಾಂಧೀಜಿಯವರ ಪ್ರತಿಕ್ರಿಯೆ ಬಹಳ ಸುಂದರವಾಗಿತ್ತು. ಅವರು ತಮ್ಮ ಜೊತೆಗಿದ್ದ ಮಿತ್ರನಿಗೆ, “ಯಾವುದಾದರೊಬ್ಬ ವ್ಯಕ್ತಿಯ ಅವಮಾನ ಇತರ ವ್ಯಕ್ತಿಯ ಸನ್ಮಾನ ಹೇಗಾಗುತ್ತದೆ ?” ಎಂಬುದು ನನಗೆ ತಿಳಿಯುವುದಿಲ್ಲ ಎಂದರು, ನಿಜವೇ ಆಗಿದೆ. ಎದುರಿನ ವ್ಯಕ್ತಿಯ ಅವಮಾನ ತನ್ನ ಸನ್ಮಾನವೆಂದು ತಿಳಿಯುವುದಕ್ಕೆ ‘ವಿಕೃತಿ’ ಅಲ್ಲದೇ ಇನ್ನೇನು ಹೇಳಬೇಕು ?
೧. ಜ್ಞಾನವಾಪಿ ಮಸೀದಿಯಲ್ಲಿ ಮಾಡಿದ ‘ವಜೂಕಾ ತಾಲಾಬ್’ ಇದು ಕೂಡ ಇಸ್ಲಾಮೀ ವಿಕೃತಿ !
ಕಾಶಿಯಲ್ಲಿ ಜ್ಞಾನವಾಪಿಯಿಂದ ಪುರಾತನ ಶಿವಲಿಂಗ ಪ್ರಕಟವಾದ ನಂತರ ಇಸ್ಲಾಂನ ಮೊದಲಿನಿಂದಲೇ ಇರುವ ಇಂತಹ ವಿಕೃತ ಮುಖವು ಮತ್ತೊಮ್ಮೆ ಸ್ಪಷ್ಟವಾಗಿ ಜಗತ್ತಿನ ಎದುರಿಗೆ ಬಂದಿದೆ. ಅದು ಹೇಗೆ ? ಈ ಶಿವಲಿಂಗ ಎಲ್ಲಿ ಸಿಕ್ಕಿದೆಯೋ, ಅದು ‘ವಜೂ ಕಾ ತಾಲಾಬ್’ ಆಗಿದೆ. ವಜೂ ಅಂದರೇನು ? ಮಸೀದಿಯಲ್ಲಿ ಪ್ರವೇಶ ಮಾಡುವ ಮೊದಲು ಶುಚಿರ್ಭೂತವಾಗುವ ವಿಧಿ. ಇದರಲ್ಲಿ ತಮ್ಮ ಕೈ-ಕಾಲುಗಳನ್ನು ಎರಡೆರಡು ಬಾರಿ ತೊಳೆಯುವುದು, ಬಾಯಿ ಮುಕ್ಕಳಿಸುವುದು, ಮೂಗನ್ನು ಸ್ವಚ್ಛ ಮಾಡುವುದು ಇಂತಹ ಕೃತಿಗಳಿವೆ. ಈಗ ಇದು ನಿಮ್ಮ ಗಮನಕ್ಕೆ ಬಂದಿರಬಹುದು, ಭೂತಕಾಲದಲ್ಲಿ ಕಾಶಿ ವಿಶ್ವೇಶ್ವರನ ಮಂದಿರವನ್ನು ಕೇವಲ ವಿಧ್ವಂಸ ಮಾಡಿ ಇಸ್ಲಾಮೀ ಆಕ್ರಮಕಾರರಿಗೆ ಸಮಾಧಾನವಾಗಿಲ್ಲ, ಹಿಂದೂಗಳಿಗೆ ಪೂಜನೀಯವಾಗಿರುವ ಸಂಕೇತ (ಶಿವಲಿಂಗ) ಮುಂದಿನ ಅನೇಕ ವರ್ಷಗಳ ವರೆಗೆ ಸಾಮಾನ್ಯ ಮುಸಲ್ಮಾನರ ಕಾಲಿನಡಿ ಬರುವಂತಹ ವ್ಯವಸ್ಥೆಯನ್ನು ಸರಿಯಾಗಿ ಅದೇ ಸ್ಥಳದಲ್ಲಿ ‘ವಜೂ ಕಾ ತಾಲಾಬ್’ನ ಸ್ವರೂಪದಲ್ಲಿ ಮಾಡಿಟ್ಟಿದ್ದಾರೆ. ಇದಾಗಿದೆ ಇಸ್ಲಾಮಿನ ವಿಕೃತಿ !
೨. ‘ಕಾಫೀರರ (ಮುಸಲ್ಮಾನೇತರರ)’ ಅವಮಾನವೇ ನಮ್ಮ ಸನ್ಮಾನ, ಇದು ಇಸ್ಲಾಂನ ನಿಲುವು !
ಜ್ಞಾನವಾಪಿ ಒಂದೇ ಉದಾಹರಣೆಯಾಗಿಲ್ಲ. ಕೇವಲ ಭಾರತದ ಇತಿಹಾಸದಲ್ಲಿಯೇ ಇಂತಹ ಸಾವಿರಾರು ಉದಾಹರಣೆಗಳು ನಮಗೆ ಅನೇಕ ಸ್ಥಳಗಳಲ್ಲಿ ನೋಡಲು ಸಿಗುತ್ತವೆ. ಹಿಂದೂ ವ್ಯಕ್ತಿಗಳಿಗೆ ಮರಣವೂ ಸನ್ಮಾನಪೂರ್ವಕ ಬರದಂತೆ ಪ್ರತಿಯೊಬ್ಬ ಇಸ್ಲಾಮೀ ಆಕ್ರಮಕನು ಜಾಗರೂಕತೆಯನ್ನು ವಹಿಸಿದ್ದಾನೆ. ಸಿಕ್ಖರ ೫ ನೇ ಗುರು ಅರ್ಜುನದೇವ ಇವರನ್ನು ಹಸುವಿನ ಚರ್ಮದಲ್ಲಿ ಹೊಲಿಯುವುದಾಗಿರಲಿ ಅಥವಾ ಗುರು ತೇಗಬಹಾದ್ದೂರ ಮತ್ತು ಅವರ ಸಹಪಾಠಿಗಳನ್ನು ನಡುಬೀದಿಯಲ್ಲಿ ಮಾಡಿರುವ ಕ್ರೂರ ಹತ್ಯೆಯಾಗಿರಲಿ; ಗುರುಪುತ್ರರಾದ ಫತ್ತೇಸಿಂಹ ಮತ್ತು ಜೋರಾವರಸಿಂಹ ಇವರನ್ನು ಎಳೆ ವಯಸ್ಸಿನಲ್ಲಿ ಗೋಡೆಯೊಳಗೆ ಹಾಕಿ ಗೋಡೆಯನ್ನು ಕಟ್ಟಿ ಹತ್ಯೆಗೊಳಿಸುವ ಕೃತ್ಯವಾಗಿರಲಿ ಅಥವಾ ಸ್ವರಾಜ್ಯದ ಛತ್ರಪತಿ ಸಂಭಾಜಿ ಮಹಾರಾಜರನ್ನು ನಿರಂತರವಾಗಿ ೨೦ ದಿನಗಳಿಗಿಂತಲೂ ಹೆಚ್ಚು ದಿನ ಶಾರೀರಿಕ ಚಿತ್ರಹಿಂಸೆ ನೀಡಿ ಕ್ರೌರ್ಯದಿಂದ ಮಾಡಿರುವ ಹತ್ಯೆಯಿರಲಿ, ಇಂತಹ ಎಲ್ಲ ಉದಾಹರಣೆಗಳಲ್ಲಿ ಒಂದೇ ಸಮಾನ ಅಂಶ ಕಾಣಿಸುತ್ತದೆ, ಇಸ್ಲಾಮ್ನ್ನು ಒಪ್ಪದಿರುವವರನ್ನು ಹೆಚ್ಚೆಚ್ಚು ಅವಮಾನ ಮಾಡುವುದು. ಇವು ಕೆಲವು ಮುಖ್ಯ ಉದಾಹರಣೆಗಳಾಗಿವೆ. ಘೋರಿ, ಐಬಕ, ತೈಮೂರ, ತುಘಲಕ, ಖಿಲ್ಜೀ, ಬಾಬರ, ಔರಂಗಜೇಬ, ಟಿಪೂ ಮುಂತಾದ ಎಲ್ಲ ಆಕ್ರಮಕರ ಕಾಲದಲ್ಲಿ ಅಕ್ಷರಶಃ ಲಕ್ಷಾವಧಿ ಹಿಂದೂಗಳು ಇಂತಹ ಅವಮಾನವನ್ನು ಸಹಿಸಿದ್ದಾರೆ. ಇದಲ್ಲದೆ ‘ಕಾಫೀರರ ಅವಮಾನವೇ ನಮ್ಮ ಸನ್ಮಾನ, ಎನ್ನುವ ಇಸ್ಲಾಂನ ನಿಲುವನ್ನು ಸ್ವತಃ ಮಹಮ್ಮದ ಪೈಗಂಬರನೇ ತನ್ನ ಕೃತಿಗಳಿಂದ ತೋರಿಸಿರುವುದರಿಂದ ‘ಮೂಲ ಇಸ್ಲಾಮ್ ಹೀಗಿಲ್ಲ’ ಎನ್ನುವ ಭ್ರಮೆಯಲ್ಲಿರುವುದಕ್ಕೆ ಯಾವುದೇ ಕಾರಣವಿಲ್ಲ.
೩. ಹಿಂದೂಗಳ ಪ್ರಭಾವೀ ಸಂಘಟನೆಯೇ, ದಾಳಿಕೋರರು ಪುನಃ ಧೈರ್ಯ ತೋರಿಸದಂತೆ ಮಾಡುವ ಸಾಹಸಿ ಉತ್ತರ !
ಇಂದು ಜ್ಞಾನವಾಪಿಯಲ್ಲಿ ಶಿವಲಿಂಗ ಸಿಕ್ಕಿರುವುದರ ಆನಂದವನ್ನು ಆಚರಿಸುವಾಗ, ಅನೇಕ ವರ್ಷಗಳ ವರೆಗೆ ನಮ್ಮ ಶ್ರದ್ಧಾಸ್ಥಾನಗಳನ್ನು ಉದ್ದೇಶಪೂರ್ವಕವಾಗಿ ಮಾಡಿರುವ ಅವಮಾನವನ್ನು ಹಿಂದೂಗಳು ಎಂದಿಗೂ ಮರೆಯುವಂತಿಲ್ಲ. ಇಂದಿನ ಈ ಕಾಲವು ಇಂತಹ ಅಪಮಾನಗಳ ನಷ್ಟಪರಿಹಾರವನ್ನು ಬಡ್ಡಿಸಮೇತ ಮಾಡಿಸಿಕೊಳ್ಳುವುದಾಗಿದೆ. ‘ಹಿಂದಿನ ವಿಷಯಗಳನ್ನು ಏಕೆ ಕೆದಕಿ ತೆಗೆಯುತ್ತಿದ್ದೀರಿ, ಇತ್ಯಾದಿ ಜ್ಞಾನವನ್ನು ಕುಡಿಸುವ ವಿದ್ವಾಂಸರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುವ ಆವಶ್ಯಕತೆ ಇಲ್ಲ. ನಮಗೆ ಕೇವಲ ಹಿಂದೂ ಐಕ್ಯತೆಯ ಬಗ್ಗೆ ಕಾಳಜಿ ಮಾಡುವುದಿದೆ. ಮುಂಬರುವ ಕಾಲದಲ್ಲಿ ಹಿಂದೂಗಳು ಹೀಗೆಯೇ ಸಂಘಟಿತರಾಗಿದ್ದರೆ, ಕಾಶಿಯಲ್ಲಿ ಶ್ರೀ ವಿಶ್ವನಾಥ ಮತ್ತು ಮಥುರೆಯಲ್ಲಿ ಭಗವಾನ ಶ್ರೀಕೃಷ್ಣ ಪುನಃ ಸುಪ್ರತಿಷ್ಠರಾಗುವರು; ಆದರೆ ಭವಿಷ್ಯದಲ್ಲಿ ನಮ್ಮ ಶ್ರದ್ಧಾಸ್ಥಾನಗಳನ್ನು ವಕ್ರದೃಷ್ಟಿಯಿಂದ ನೋಡುವ ಸಾಹಸ ಅವರಿಗೆ ಬರಬಾರದು, ಎನ್ನುವಂತಹ ಸಂಘಟನೆಯನ್ನು ನಾವು ಮಾಡಬೇಕು. ‘ಹಿಂದೂಗಳ ಅವಮಾನ ಯಾರಿಗೆ ತಮ್ಮ ಸನ್ಮಾನ ಎಂದು ಅನಿಸುತ್ತದೆಯೊ, ಅವರನ್ನು ಹಿಂದೂಗಳಾದರೂ ಏಕೆ ಗೌರವಿಸಬೇಕು ?’
– ಮಹೇಂದ್ರ ವಾಘ್ (ಕಳಿಸಿದವರು – ಶ್ರೀ. ವಿಜಯ ಅನಂತ ಆಠವಲೆ)
ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿನ ಬುದ್ಧೇಶ್ವರ ದೇವಸ್ಥಾನದ ಸೇವಕನೇ ಗಂಟೆಯ ಕಳ್ಳ !
ಬಾಂಗ್ಲಾದೇಶ: ಐತಿಹಾಸಿಕ ಶ್ರೀ ಕಾಳಿಮಾತಾ ಮಂದಿರದ ಮೇಲೆ ಮತಾಂಧ ಮುಸ್ಲಿಮರ ದಾಳಿ
ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನ ಧ್ವಂಸ : Bangladesh Temple Attack
‘ಗಜನಿ ಬಳಿಕ ದೇವಾಲಯ ಆಸ್ತಿ ಲೂಟಿ ಮಾಡಿದವರು ಬಿಜೆಪಿ-ಸಂಘ’: ವಿವಾದಾತ್ಮಕ ಆರೋಪ : BJP RSS Temple Property Claim
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂ ದೇವತೆಗಳ ಮೂರ್ತಿಗಳ ಧ್ವಂಸ!