ಜ್ಞಾನವಾಪಿ ಗುಮ್ಮಟದ ಕೆಳಗೆ ಮಂದಿರದ ಮೂಲ ಗುಮ್ಮಟ ! – ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ ಜೈನ

ಪೂ. (ನ್ಯಾಯವಾದಿ) ಹರಿಶಂಕರ  ಜೈನ

ವಾರಾಣಸಿ (ಉತ್ತರಪ್ರದೇಶ) – ನ್ಯಾಯಾಲಯದ ಆದೇಶದಿಂದ ನಡೆಸಲಾಗಿರುವ ಸಮೀಕ್ಷೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಜ್ಞಾನವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು  ಕಟ್ಟಲಾಗಿತ್ತು. ಅಲ್ಲಿಯ ಶಿವಲಿಂಗದ ಸತ್ಯಾಸತ್ಯತೆ ೩೫೨ ವರ್ಷಗಳ ನಂತರ ಜನರೆದುರು ಬಂದಿದೆ. ಯಾರು ಅದನ್ನು ಕಾರಂಜಿ ಎಂದು ಹೇಳುತ್ತಿದ್ದಾರೆಯೋ ಅದು ಕಾರಂಜಿಯಲ್ಲ, ಕೇವಲ ಶಿವಲಿಂಗವೇ ಆಗಿದೆ ಮತ್ತು ಅದರ ಎತ್ತರ ಮತ್ತು ಆಳ ಹೆಚ್ಚಾಗಿರಬಹುದು. ೩೫೩ ವರ್ಷಗಳ ಮೊದಲು ಕಾರಂಜಿಗಳು ಎಲ್ಲಿ ಇದ್ದವು ? ಅದಕ್ಕೆ ಎಲ್ಲಿಯೂ ಛಿದ್ರವಿಲ್ಲ. ನೀರು ಬರಲು ಸಹ ಎಲ್ಲಿಯೂ ಜಾಗವಿಲ್ಲ. ಪೈಪ್ ಲೈನ್ ಇಲ್ಲ. ದೇವಸ್ಥಾನದ ಶಿಖರದ ಮೇಲೆ ತಥಾಕಥಿತ ಗುಮ್ಮಟ ಇದೆ. ಅದರ ಕೆಳಗೆ ದೇವಸ್ಥಾನದ ನಿಜವಾದ ಗುಮ್ಮಟವಿದೆ. ಅದರ ಛಾಯಾಚಿತ್ರಗಳು ಸಹ ಬೆಳಕಿಗೆ ಬಂದಿದೆ, ಎಂದು ಹಿಂದೂ ಪಕ್ಷದ (ಪೂ.) ನ್ಯಾಯವಾದಿ ಹರಿಶಂಕರ  ಜೈನ ಇವರು ತಮ್ಮ ಪಕ್ಷವನ್ನು ಒಂದು ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಂಡಿಸಿದರು.

ಜ್ಞಾನವಾಪಿ ಮಸೀದಿಯ ಪರಿಸರದ ಚಿತ್ರ

ಜ್ಞಾನವಾಪಿಯಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ಬಳಸಿ ಅನೇಕ ವಿಷಯಗಳನ್ನು ಮುಚ್ಚಿಡುವ ಪ್ರಯತ್ನ !

  (ಪೂ.) ನ್ಯಾಯವಾದಿ ಹರಿಶಂಕರ  ಜೈನ  ಮುಂದೆ ಮಾತನಾಡುತ್ತಾ, ‘ಇಂದಿನ ಸಮೀಕ್ಷೆಯಲ್ಲಿ ಪ್ರಸ್ತುತಪಡಿಸಲಾದ ವರದಿಯಲ್ಲಿ, ಜ್ಞಾನವಾಪಿಯಲ್ಲಿ ಅನೇಕ ಕಡೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಮುಚ್ಚಿಡಲು ಪ್ರಯತ್ನಿಸಲಾಗಿದೆ’, ಎನ್ನಲಾಗಿದೆ. ಅಲ್ಲಿ ಭಗ್ನವಾಗಿರುವ ಮೂರ್ತಿಗಳು ಸಿಕ್ಕಿವೆ. ಪಿಓಪಿಗೆ ಕೈ ತಗಲಿಸಿದರೆ ಅದು ಈಗಷ್ಟೇ ಹಚ್ಚಲಾಗಿರುವ ಹಾಗೆ ಕಾಣುತ್ತದೆ.

ಕೇಂದ್ರ ಸರಕಾರವು ರಾಷ್ಟ್ರೀಯ ಮತಾಂತರ ತಡೆ ಕಾನೂನು ರೂಪಿಸಿ ಮತಾಂತರವನ್ನು ಕಾನೂನುಬಾಹಿರ ಎಂದು ನಿರ್ಧರಿಸಬೇಕು ! – ಮಹಾಮಂಡಲೇಶ್ವರ ಆಚಾರ್ಯಸ್ವಾಮಿ ಶ್ರೀ ಪ್ರಣವಾನಂದ ಸರಸ್ವತೀಜಿ ಮಹಾರಾಜರು

ಸನಾತನ ಧರ್ಮವು ಶ್ರೇಷ್ಠ ಧರ್ಮವಾಗಿದೆ. ಅದಕ್ಕೆ ಜಗತ್ತಿನಲ್ಲಿ ಯಾವುದೇ ಪರ್ಯಾಯವಿಲ್ಲ. ಕ್ರೈಸ್ತ ಮಿಷನರಿಗಳು ಮತ್ತು ಮುಸ್ಲಿಮರು ಮತಾಂತರದ ಮೂಲಕ ಸನಾತನ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ಇತರ ಧರ್ಮಗಳು ನಮ್ಮ ಸಿದ್ಧಾಂತ, ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ನಾಶ ಮಾಡಲು ಕಾರ್ಯನಿರತವಾಗಿವೆ. ಈ ವಿಚಾರವು ಮತಾಂತರಕ್ಕೆ ಮಾತ್ರ ಸೀಮಿತವಾಗದೆ ಇಡೀ ಭಾರತವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಷಡ್ಯಂತ್ರವಾಗಿದೆ. ನಮ್ಮ ಪೂರ್ವಜರು ತುಂಬಾ ಧಾರ್ಮಿಕರಾಗಿದ್ದರು. ಎಷ್ಟೇ ದಾಳಿ ಮಾಡಿದರೂ ಮತಾಂತರವಾಗಲು ಬಿಡಲಿಲ್ಲ. ಹಿಂದೂಗಳು ಈ ಆದರ್ಶವನ್ನು ಅನುಸರಿಸಬೇಕು ಮತ್ತು ಧರ್ಮಶಿಕ್ಷಣವನ್ನು ತೆಗೆದುಕೊಳ್ಳಬೇಕು. ಈ ಮತಾಂತರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಯಬೇಕು ಮತ್ತು ಭಾರತವನ್ನು ರಕ್ಷಿಸಲು ಸರಕಾರವು ಮತಾಂತರದ ವಿರುದ್ಧ ರಾಷ್ಟ್ರೀಯ ಕಾನೂನನ್ನು ತರಬೇಕು ಮತ್ತು ಯಾವುದೇ ರೀತಿಯ ಮತಾಂತರವನ್ನು ಕಾನೂನುಬಾಹಿರಗೊಳಿಸಬೇಕು.