
ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.
ನವದೆಹಲಿ – ಭಾಜಪದ ನಾಯಕ ಮತ್ತು ಜೇಷ್ಠ ನ್ಯಾಯವಾದಿ ಶ್ರೀ ಅಶ್ವಿನ್ ಉಪಾಧ್ಯಾಯ ಅವರು ಜ್ಞಾನ ವಾಪಿ ಮಸೀದಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಸ್ತಕ್ಷೇಪ ಮನವಿ ದಾಖಲಿಸಿದ್ದಾರೆ. ಅವರು ಯಾವುದೇ ದೇವತೆಗಳ ಮೂರ್ತಿಯ ಪ್ರತಿಷ್ಠಾಪನೆ ಆದನಂತರ ಮಂದಿರ ಎಂದಿಗೂ ಮಂದಿರವಾಗಿ ಉಳಿಯುತ್ತದೆ. ಎಲ್ಲಿಯವರೆಗೆ ಮಂದಿರ ಬೇರೆ ಕಡೆಗೆ ಸ್ಥಳಾಂತರವಾಗುವುದಿಲ್ಲವೋ ಅಥವಾ ಮೂರ್ತಿಯ ವಿಧಿವತ್ತಾಗಿ ವಿಸರ್ಜನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಮಂದಿರ ಶಾಶ್ವತ ಉಳಿಯುತ್ತದೆ ಎಂದು ಹೇಳಿದರು.
मंदिर को पूजा स्थल कहते हैं और मस्जिद को प्रार्थना स्थल। जब पूजा और पूजा स्थल हराम और कुफ्र है तो पूजा स्थल कानून मस्जिद पर कैसे लागू हो सकता है? @blsanthosh pic.twitter.com/1JJcSwXtR9
— Ashwini Upadhyay (@AshwiniUpadhyay) May 23, 2022
ನ್ಯಾಯವಾದಿ ಶ್ರೀ ಅಶ್ವಿನ ಉಪಾಧ್ಯಾಯ ಇವರು ಮನವಿಯಲ್ಲಿ ಹೇಳಿರುವ ಅಂಶಗಳು
೧. ಮಂದಿರ ಮತ್ತು ಮಸೀದಿ ಇದರ ಧಾರ್ಮಿಕ ಸ್ವರೂಪ ಪೂರ್ಣವಾಗಿ ಭಿನ್ನವಾಗಿದೆ. ಅದರಿಂದ ಇಬ್ಬರಿಗೂ ಒಂದೇ ಕಾನೂನು ಜಾರಿ ಮಾಡಲಾಗುವುದಿಲ್ಲ. ಯಾವುದೇ ಮಂದಿರದ ಭೂಮಿಯಲ್ಲಿ ಮಸೀದಿ ಕಟ್ಟಿದ್ದರೆ ಅದನ್ನು ಇಸ್ಲಾಂನ ಪ್ರಕಾರ ಮಸೀದಿ ಎನ್ನಲಾಗುವುದಿಲ್ಲ.
೨. ಮಂದಿರದ ಮೇಲೆ ಅಲ್ಲಿಯ ದೇವತೆಗಳ ಅಧಿಕಾರ ಇರುತ್ತದೆ. ಎಷ್ಟೇ ಕಾಲಾವಧಿಯಿಂದ ಈ ರೀತಿಯ ಕಾನೂನುಬಾಹಿರ ನಿಯಂತ್ರಣ ಸಾಧಿಸಿದ್ದರೂ ದೇವತೆಗಳು ಮತ್ತು ಭಕ್ತರು ಎಂದಿಗೂ ನಾಶವಾಗುವುದಿಲ್ಲ. ಯಾವುದೇ ಮಂದಿರದ ಛಾವಣಿ ನಾಶಮಾಡಿ ಅಥವಾ ಗೋಡೆ ನಾಶಪಡಿಸಿ ಅದರ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ.
೩ . ಸಂವಿಧಾನದ ಕಲಂ ೧೩ ಇದು ಹಿಂದೂ, ಜೈ ನ, ಬೌದ್ಧ ಮತ್ತು ಸಿಕ್ಖ್ ಇವರಿಗೆ ತಮ್ಮ ತಮ್ಮ ಧರ್ಮದ ಪ್ರಸಾರ ಮತ್ತು ಧಾರ್ಮಿಕಸ್ಥಳಗಳ ರಕ್ಷಣೆ ಮಾಡುವ ಅಧಿಕಾರ ನೀಡಲಾಗಿದೆ. ಈ ಕಾಲಂನಲ್ಲಿ ಅವರ ಈ ಅಧಿಕಾರ ಕಸಿದುಕೊಳ್ಳಲು ಯಾವುದೇ ಹೊಸ ಕಾನೂನು ಮಾಡುವುದಕ್ಕೆ ನಿರ್ಬಂಧವಿದೆ. ಅದರ ಜೊತೆಗೆ ಇಸ್ಲಾಮಿ ಕಾನೂನಿನ ವಿರುದ್ಧ ಕಟ್ಟಲಾದ ಧಾರ್ಮಿಕಸ್ಥಳಕ್ಕೆ ಮಸೀದಿ ಎನ್ನಲಾಗುವುದಿಲ್ಲ.
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ