ಧಾರ್ಮಿಕ ಗ್ರಂಥಗಳನ್ನು ಕೇವಲ ಓದದೆ ಅಥವಾ ಪಠಿಸದೆ ಅವುಗಳಲ್ಲಿ ಬೋಧಿಸಲಾದ ಸಾಧನೆಯನ್ನು ಆಚರಣೆಯಲ್ಲಿ ತನ್ನಿರಿ !

ಪರಾತ್ಪರ ಗುರು ಡಾ. ಆಠವಲೆ

‘ಹಲವು ವರ್ಷಗಳಿಂದ ವಿವಿಧ ಧಾರ್ಮಿಕ ಗ್ರಂಥಗಳನ್ನು ಲಕ್ಷಾಂತರ ಬಾರಿ ಓದಿರುವವರು ಸಾಧನೆಯಲ್ಲಿ ವಿಶೇಷ ಪ್ರಗತಿ ಸಾಧಿಸಿದಂತೆ ಕಾಣುವುದಿಲ್ಲ. ಇದಕ್ಕೆ ಕಾರಣ ಅವರು ಓದುವುದು ಮಾತ್ರ. ಅದರಲ್ಲಿ ಕಲಿಸಿದ ಸಾಧನೆಗಳು ಕಾರ್ಯರೂಪಕ್ಕೆ ತರುವುದಿಲ್ಲ. ಸಾಧನೆ ಮಾಡಲು ನಿಜವಾದ ಇಚ್ಛೆಯುಳ್ಳವರು ‘ತಮ್ಮಿಂದ ಈ ತಪ್ಪು ಆಗುತ್ತಿಲ್ಲವಲ್ಲ’ ಎಂಬುದರತ್ತ ಗಮನ ಹರಿಸಬೇಕು.

– (ಪರಾತ್ಪರ ಗುರು) ಡಾ. ಆಠವಲೆ (೧೯.೩.೨೦೨೨)

ಸಂತರು ಸಮಷ್ಟಿ ಪ್ರಸಾರಕಾರ್ಯ ಮಾಡುವುದರ ಹಿಂದಿನ ಕಾರಣ !

‘ಹಿಂದಿನ ಯುಗಗಳಲ್ಲಿ ಪ್ರಜೆಗಳು ಸಾತ್ತ್ವಿಕವಾಗಿದ್ದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರಕಾರ್ಯ ಮಾಡಬೇಕಾಗುತ್ತಿರಲಿಲ್ಲ. ಈಗ ಕಲಿಯುಗದಲ್ಲಿ ಹೆಚ್ಚಿನವರು ಸಾಧನೆ ಮಾಡದ ಕಾರಣ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗುತ್ತದೆ !’

– ಪರಾತ್ಪರ ಗುರು ಡಾ. ಆಠವಲೆ