ದೇವದ (ಪನವೆಲ್) ಇಲ್ಲಿನ ಸನಾತನ ಆಶ್ರಮದಲ್ಲಿರುವ ಅನೇಕ ಗುಣರತ್ನಗಳ ಗಣಿಯಾದ ಸುಶ್ರೀ (ಕು.) ರತ್ನಮಾಲಾ ದಳವಿ (೪೫ ವರ್ಷ) ಸನಾತನದ ೧೧೮ ನೇ ಸಮಷ್ಟಿ ಸಂತರೆಂದು ಘೋಷಣೆ !

ಪೂ. (ಸುಶ್ರೀ) ರತ್ನಮಾಲಾ ದಳವಿ

ಪನವೆಲ್ – ತತ್ತ್ವನಿಷ್ಠ, ಆಜ್ಞಾಪಾಲನೆ, ಸ್ಥಿರತೆ, ನಮ್ರತೆ, ಅಂತರ್ಮುಖತೆ, ಸಮರ್ಪಣಾ ಭಾವದಿಂದ ಸೇವೆ ಮಾಡುವುದು ಹೀಗೆ ಅನೇಕ ಗುಣರತ್ನಗಳ ಗಣಿಯಾಗಿರುವ ತಿವರೆ (ರಾಜಾಪುರ ತಾಲೂಕು, ರತ್ನಾಗಿರಿ ಜಿಲ್ಲೆ)ಯಲ್ಲಿನ ಹಾಗೂ ಪ್ರಸ್ತುತ ಸನಾತನದ ದೇವದ ಆಶ್ರಮದಲ್ಲಿ ವಾಸವಾಗಿರುವ ಪೂ. (ಸುಶ್ರೀ) ರತ್ನಮಾಲಾ ದಳವಿ (೪೫ ವರ್ಷ) ಇವರು ಮಾರ್ಚ್ ೬ ರಂದು ಸನಾತನದ ೧೧೮ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು. ಸನಾತನದ ದೇವದ ಆಶ್ರಮದಲ್ಲಿ ನೆರವೇರಿದ ಭಾವ ಸಮಾರಂಭದಲ್ಲಿ ಸನಾತನದ ೬೯ ನೇ ಸಂತ ಪೂ. (ಸೌ.) ಅಶ್ವಿನಿ ಪವಾರ ಇವರು ಈ ಆನಂದವಾರ್ತೆಯನ್ನು ಘೋಷಿಸಿದರು. ಇದನ್ನು ಕೇಳಿ ಎಲ್ಲರಿಗೂ ಆನಂದವಾಯಿತು ಮತ್ತು ಗುರುಗಳ (ಪರಾತ್ಪರ ಗುರು ಡಾ. ಆಠವಲೆ) ಬಗ್ಗೆ ಕೃತಜ್ಞತೆ ವ್ಯಕ್ತವಾಯಿತು.

ಪೂ. (ಸೌ.) ಅಶ್ವಿನಿ ಪವಾರ ಇವರು ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಈ ಭಾವ ಸಮಾರಂಭದಲ್ಲಿ ಪೂ. (ಸುಶ್ರೀ) ರತ್ನಮಾಲಾ ದಳವಿ ಇವರ ಸಂಬಂಧಿಕರು ‘ಆನ್‌ಲೈನ್’ ಮೂಲಕ ಪಾಲ್ಗೊಂಡಿದ್ದರು.