
ಪನವೆಲ್ – ತತ್ತ್ವನಿಷ್ಠ, ಆಜ್ಞಾಪಾಲನೆ, ಸ್ಥಿರತೆ, ನಮ್ರತೆ, ಅಂತರ್ಮುಖತೆ, ಸಮರ್ಪಣಾ ಭಾವದಿಂದ ಸೇವೆ ಮಾಡುವುದು ಹೀಗೆ ಅನೇಕ ಗುಣರತ್ನಗಳ ಗಣಿಯಾಗಿರುವ ತಿವರೆ (ರಾಜಾಪುರ ತಾಲೂಕು, ರತ್ನಾಗಿರಿ ಜಿಲ್ಲೆ)ಯಲ್ಲಿನ ಹಾಗೂ ಪ್ರಸ್ತುತ ಸನಾತನದ ದೇವದ ಆಶ್ರಮದಲ್ಲಿ ವಾಸವಾಗಿರುವ ಪೂ. (ಸುಶ್ರೀ) ರತ್ನಮಾಲಾ ದಳವಿ (೪೫ ವರ್ಷ) ಇವರು ಮಾರ್ಚ್ ೬ ರಂದು ಸನಾತನದ ೧೧೮ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು. ಸನಾತನದ ದೇವದ ಆಶ್ರಮದಲ್ಲಿ ನೆರವೇರಿದ ಭಾವ ಸಮಾರಂಭದಲ್ಲಿ ಸನಾತನದ ೬೯ ನೇ ಸಂತ ಪೂ. (ಸೌ.) ಅಶ್ವಿನಿ ಪವಾರ ಇವರು ಈ ಆನಂದವಾರ್ತೆಯನ್ನು ಘೋಷಿಸಿದರು. ಇದನ್ನು ಕೇಳಿ ಎಲ್ಲರಿಗೂ ಆನಂದವಾಯಿತು ಮತ್ತು ಗುರುಗಳ (ಪರಾತ್ಪರ ಗುರು ಡಾ. ಆಠವಲೆ) ಬಗ್ಗೆ ಕೃತಜ್ಞತೆ ವ್ಯಕ್ತವಾಯಿತು.

ಪೂ. (ಸೌ.) ಅಶ್ವಿನಿ ಪವಾರ ಇವರು ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಈ ಭಾವ ಸಮಾರಂಭದಲ್ಲಿ ಪೂ. (ಸುಶ್ರೀ) ರತ್ನಮಾಲಾ ದಳವಿ ಇವರ ಸಂಬಂಧಿಕರು ‘ಆನ್ಲೈನ್’ ಮೂಲಕ ಪಾಲ್ಗೊಂಡಿದ್ದರು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !