‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ? ಈ ಕುರಿತು ‘ಆನ್‌ಲೈನ್ ವಿಶೇಷ ಸಂವಾದ ಹಿಜಾಬ್‌ನ ಮೂಲಕ ಶಾಲೆಗಳ ಇಸ್ಲಾಮೀಕರಣದ ಅಪಾಯಕಾರಿ ಸಂಚನ್ನು ವಿಫಲಗೊಳಿಸಿ ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಪ್ರಮೋದ ಮುತಾಲಿಕ

ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆ ಇರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಸಾಮ್ಯವಾದಿಗಳಿದ್ದಾರೆ. ಮಹಾರಾಷ್ಟ್ರದಲ್ಲಿ ಮುಸಲ್ಮಾನ ಪಕ್ಷಗಳು ಮತ್ತು ಸಂಘಟನೆಗಳು ‘ಪಹಿಲೆ ಹಿಜಾಬ್-ಫಿರ್ ಕಿತಾಬ್ ಪೋಸ್ಟರ್‌ಗಳನ್ನು ಹಾಕಿದ್ದು, ಇದರಿಂದ ಅವರಿಗೆ ಮೊದಲು ಇಸ್ಲಾಂ, ನಂತರ ಶಿಕ್ಷಣ ಬೇಕಾಗಿದೆ, ಎಂದು ಸ್ಪಷ್ಟವಾಗುತ್ತಿದೆ. ‘ಹಿಜಾಬ್ ನೆಪದಲ್ಲಿ ಎಲ್ಲೆಡೆ ನಡೆಯುತ್ತಿರುವ ‘ಇಸ್ಲಾಮೀಕರಣದ ಪ್ರಯತ್ನವನ್ನು ನಿಲ್ಲಿಸಲು ಹಿಂದೂಗಳು ಮುಂದಾಗಬೇಕು. ಇಂದು ಶಾಲೆಯ ಮುಸಲ್ಮಾನ ಹುಡುಗಿಯರನ್ನು ಮುಂದೆ ಮಾಡಿ ಮುಸಲ್ಮಾನ ಸಂಘಟನೆಗಳು ಇಂದು ‘ಹಿಜಾಬ್ ಮುಂದಿನ ದಿನಗಳಲ್ಲಿ ಬುರ್ಖಾ ತೊಟ್ಟು ಬರಲು ಹೇಳಬಹುದು. ನಂತರ ಆ ಸಂಘಟನೆಗಳು ಶಾಲೆಗಳಲ್ಲಿ ನಮಾಜುಪಠಣ ಮತ್ತು ನಂತರ ಅದಕ್ಕಾಗಿ ಮಸೀದಿಗಾಗಿಯೂ ಆಗ್ರಹಿಸುವರು. ಶಾಲೆಗಳನ್ನು ಇಸ್ಲಾಮೀಕರಣ ಗೊಳಿಸುವ ಈ ಅಪಾಯಕಾರಿ ಸಂಚನ್ನು ವಿಫಲಗೊಳಿಸಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ೯ ಫೆಬ್ರವರಿ ೨೦೨೨ ರಂದು ಆಯೋಜಿಸಿದ್ದ ‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ? ಎಂಬ ‘ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಂವಾದದಲ್ಲಿ ಕರ್ನಾಟಕದ ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತಾ ರಾಘವ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ಪಾಲ್ಗೊಂಡಿದ್ದರು.

ಜಗತ್ತಿನಾದ್ಯಂತ ಅನೇಕ ಇಸ್ಲಾಮಿ ದೇಶಗಳಲ್ಲಿ ಹಿಜಾಬ್, ಬುರಖಾ ಇವುಗಳನ್ನು ನಿಷೇಧಿಸಿರುವಾಗ ಭಾರತದಲ್ಲಿ ಅದರ ಆಗ್ರಹ ಏತಕ್ಕಾಗಿ ? – ಪ್ರಶಾಂತ ಸಂಬರಗಿ, ಉದ್ಯಮಿ

ಪ್ರಶಾಂತ ಸಂಬರಗಿ

ಹಿಜಾಬ್ ವಿಚಾರವು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಪೂರ್ವಯೋಜಿತ ಅಂತರರಾಷ್ಟ್ರೀಯ ಸಂಚಾಗಿದೆ. ರೈತರ ತಥಾಕಥಿತ ಆಂದೋಲನ, ಪ್ರಶಸ್ತಿ ಹಿಂತಿರುಗಿಸುವಿಕೆಯಂತೆಯೆ ಪ್ರಸ್ತುತ ‘ಹಿಜಾಬ್ನ ಬಗ್ಗೆ ಟ್ವಿಟರ್‌ನಲ್ಲಿ ಲಕ್ಷಗಟ್ಟಲೆ ಟ್ವೀಟ್ಸ್ ಮಾಡಿ ಅದರಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ, ಪರಿಸರವಾದಿ ಗ್ರೇಟಾ ಥನ್‌ಬರ್ಗ್‌ನಂತಹವರು ಸಮವಸ್ತ್ರ ಹಾಗೂ ಸಮಾನತೆಯ ಅರ್ಥ ತಿಳಿಯದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಪಾಲ್ಗೊಳ್ಳುವುದು. ಇವೆಲ್ಲದರಿಂದ ಇದೊಂದು ‘ಅಂತಾರಾಷ್ಟ್ರೀಯ ಅಜೆಂಡಾ (ಕಾರ್ಯಸೂಚಿ) ಎಂಬುದು ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಶಾಲೆಗಳು, ಮಹಾವಿದ್ಯಾಲಯಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಬುರ್ಖಾಗಳನ್ನು ನಿಷೇಧಿಸಲಾಗಿದೆ; ಆದರೆ ಭಾರತದಲ್ಲಿ ಹಿಜಾಬ್‌ನ ಬಗ್ಗೆ ಏಕೆ ಬೇಡಿಕೆ ಮಾಡಲಾಗುತ್ತದೆ ?

ಭಾರತವನ್ನು ಇಸ್ಲಾಮೀಕರಣ ಮಾಡುವ ಸಂಚನ್ನು ವಿಫಲಗೊಳಿಸಬೇಕಿದೆ ! – ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ಕರ್ನಾಟಕದಲ್ಲಿ ಶಾಲೆಯಲ್ಲಿ ಸಮವಸ್ತ್ರ ಹಾಕಿಕೊಳ್ಳದೇ ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಹಾಕುವುದನ್ನು ಆರಂಭಿಸಿದ ನಂತರ ಹಿಂದೂ ಹೆಣ್ಣುಮಕ್ಕಳು ಅದನ್ನು ಕಾನೂನುರೀತಿಯಲ್ಲಿ ವಿರೋಧಿಸಿದರು. ಆ ಬಳಿಕ ಹಿಂದೂ ಹೆಣ್ಣು ಮಕ್ಕಳ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಕೆಲವು ಹಿಂದೂ ಸಂಘಟನೆಗಳನ್ನು ಹೊರತು ಪಡಿಸಿ, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೂ ಈ ಘಟನೆಯ ಬಗ್ಗೆ ಮೌನವಾಗಿದ್ದಾರೆ. ಇಂತಹ ಘಟನೆಗಳಿಂದ ಭಾರತವನ್ನು ಇಸ್ಲಾಮೀಕರಣಗೊಳಿಸುವ ಬಯಲಾಗುತ್ತಿರುವ ಸಂಚನ್ನು ವಿಫಲಗೊಳಿಸಬೇಕು.

ನ್ಯಾಯವಾದಿ ವಿನಿತಾ ರಾಘವ್

ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತಾ ರಾಘವ್ ಇವರು ಮಾತನಾಡುತ್ತಾ, ಹಿಜಾಬ್‌ನ ವಿಷಯ ಈಗ ನ್ಯಾಯಾಲಯದ ತನಕ ತಲುಪಿದೆ. ಹೀಗಿದ್ದರೂ ನ್ಯಾಯಾಲಯದ ತೀರ್ಪಿಗೆ ಕಾಯದೆ ಮುಸಲ್ಮಾನರು ಆಂದೋಲನ ನಡೆಸುತ್ತಿದ್ದಾರೆ. ಇದು ನ್ಯಾಯಾಲಯ ಸೇರಿದಂತೆ ಎಲ್ಲರ ಮೇಲೂ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.