|
| ಗೋವಂಶದ ಕಳ್ಳಸಾಗಾಣಿಕೆ ಮಾಡುವವರು ನಿನ್ನೆಯವರೆಗೆ ಗೋರಕ್ಷಕ ಮತ್ತು ಪೊಲೀಸರ ಮೇಲೆ ದಾಳಿ ಮಾಡುತ್ತಿದ್ದರು, ಈಗ ಅವರು ಸೈನಿಕರ ಮೇಲೆ ದಾಳಿ ಮಾಡುವ ಧೈರ್ಯ ತೋರುತ್ತಿದ್ದಾರೆ. ಇದನ್ನು ನೋಡಿದರೆ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿವುದು ಆವಶ್ಯಕವಾಗಿದೆ ! |

ಗುಹಾಟಿ (ಅಸ್ಸಾಂ) – ಅಸ್ಸಾಂನ ಮಾನಕಾಚರದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಭದ್ರತಾ ಪಡೆಯು ನಡೆಸಿರುವ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶಿ ಕಳ್ಳಸಾಗಾಣಿಕೆಯೊಬ್ಬ ಹತನಾಗಿದ್ದಾನೆ. ಅಲ್ಲಿ ಕೆಲವು ಕಳ್ಳಸಾಗಾಣಿಕೆದಾರರು ಗಡಿಯಲ್ಲಿರುವ ಬೇಲಿಯಿಂದ ಹಸುಗಳನ್ನು ಕ್ರೆನಗಳ ಸಹಾಯದಿಂದ ಎತ್ತಿ ಬಾಂಗ್ಲಾದೇಶದ ಗಡಿಯಲ್ಲಿ ಸಾಗಿಸುತ್ತಿದ್ದರು. ಆ ಸಮಯದಲ್ಲಿ ಸೈನಿಕರು ಕಳ್ಳಸಾಗಾಣಿಕೆದಾರರ ತಡೆಯಲು ಪ್ರಯತ್ನ ಮಾಡುವಾಗ ಅವರು ಸೈನಿಕರ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ಅಲ್ಲಿಂದ ೩ ಹಸುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಡಿ ಭದ್ರತಾ ಪಡೆಯ ಅಧಿಕಾರಿಯು, ಭಾರತದಿಂದ ೨೦ ರಿಂದ ೨೫ ಕಳ್ಳಸಾಗಾಣಿಕೆದಾರರು ಹಸುಗಳನ್ನು ಗಡಿಯಲ್ಲಿನ ಬೇಲಿಯಿಂದ ಬಾಂಗ್ಲಾದೇಶದ ಗಡಿಯಿಂದ ಸಾಗಿಸುತ್ತಿದ್ದರು. ಆ ಸಮಯದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿಯೂ ಕೆಲವು ಕಳ್ಳಸಾಗಾಣಿಕೆದಾರರ ಉಪಸ್ಥಿತರಿದ್ದರು ಎಂದು ಹೇಳಿದರು.
Assam | Cattle smugglers from both sides were trying to smuggle across Indo-Bangladesh border. BSF forces challenged smugglers but they tried to overpower us. Later, we fired at them & a Bangladeshi smuggler was killed and 3 cattle were recovered: JC Nayak, BSF DIG Dhurbi Sector pic.twitter.com/zfc4NpX8t8
— ANI (@ANI) February 13, 2022
೨೦೨೧ ರಲ್ಲಿ ೮ ಸಾವಿರ ಗೋವಂಶ ವಶಕ್ಕೆ
ಗಡಿ ಭದ್ರತಾ ದಳದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ೨೦೨೧ ರಲ್ಲಿ ೧೧ ಕೋಟಿ ರೂಪಾಯಿಯ ಮಾದಕ ಪದಾರ್ಥಗಳ ಸಹಿತ ೮ ಸಾವಿರ ಗೋವಂಶಗಳನ್ನು ವಶಪಡಿಸಿಕೊಳ್ಳಲಾಗಿತ್ತು ಹಾಗೂ ೧೧೭ ಬಾಂಗ್ಲಾದೇಶದ ನಾಗರಿಕರನ್ನು ಬಂಧಿಸಲಾಗಿತ್ತು.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಬಾಂಗ್ಲಾದೇಶ: ಭಾರತದ ತಪ್ಪಾದ ನಕ್ಷೆ ಪ್ರದರ್ಶನ!
ಬಾಂಗ್ಲಾದೇಶ: ಶೇಖ್ ಹಸೀನಾ ವಿರೋಧಿ ಸಭೆಯಲ್ಲಿ ಸ್ಫೋಟ: ಮೂವರಿಗೆ ಗಾಯ
ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನ ಧ್ವಂಸ : Bangladesh Temple Attack
10 ಜನ ಅಕ್ರಮ ವಲಸಿಗರನ್ನು ಗಡಿಯೊಳಗೆ ಸೇರಿಸಿಕೊಳ್ಳಲು ಬಾಂಗ್ಲಾದೇಶದ ವಿರೋಧ
ಬಂಗಾಳ: ೯ ಬಾಂಗ್ಲಾದೇಶಿ ವಲಸಿಗರ ಬಂಧನ !