‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಅವರಿಂದ ‘ಜಾಗತಿಕ ಆನಂದ ಸೂಚ್ಯಂಕ’ದ ಬಗ್ಗೆ ಪ್ರಶ್ನೆ ಎತ್ತಿದರು
ವಾಷಿಂಗ್ಟನ್ (ಅಮೆರಿಕ) – ಜಾಗತಿಕ ಆನಂದ ಸೂಚ್ಯಂಕದಲ್ಲಿ ಭಾರತವನ್ನು 118 ನೇ ಸ್ಥಾನದಲ್ಲಿ ತೋರಿಸಲಾಗಿದೆ. ಯಾವ ದೇಶಗಳು ಅಥವಾ ಪ್ರದೇಶಗಳಲ್ಲಿ ಸಂಘರ್ಷ ನಡೆಯುತ್ತಿದೆಯೋ, ಅವುಗಳಲ್ಲಿ ಅನೇಕ ದೇಶಗಳು ಅಥವಾ ಪ್ರದೇಶಗಳು ಭಾರತಕ್ಕಿಂತ ಬಹಳ ಮುಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಸೂಚ್ಯಂಕವು ತುಂಬಾ ಆಶ್ಚರ್ಯಕರವಾಗಿದೆ ಎಂದು ‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಹೇಳಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಪ್ರಕಟಿಸಿದ ಈ ಸೂಚ್ಯಂಕದಲ್ಲಿ, ಭಾರತವನ್ನು ಪಾಕಿಸ್ತಾನ, ಯುದ್ಧ-ಪೀಡಿತ ಉಕ್ರೇನ್ ಮತ್ತು ಪ್ಯಾಲೆಸ್ಟೈನ್ ಗಿಂತ ಹೆಚ್ಚು ಹತಾಶೆ ಮತ್ತು ಅತೃಪ್ತ ದೇಶ ಎಂದು ವಿವರಿಸಲಾಗಿದೆ. ‘ಇಂತಹ ಜಾಗತಿಕ ಸೂಚ್ಯಂಕಗಳು ನಿಜವಾಗಿಯೂ ಸತ್ಯಗಳ ಮೇಲೆ ಆಧಾರಿತವಾಗಿವೆಯೇ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಕಳೆದ ವರ್ಷ 79 ನೇ ಸ್ಥಾನದಲ್ಲಿದ್ದ ಭೂತಾನ್ ಈ ವರ್ಷ ಯಾವುದೇ ಸ್ಥಾನವನ್ನು ಪಡೆದಿಲ್ಲ.
ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಶ್ರೀ ಶ್ರೀ ರವಿಶಂಕರ್ ವಾಷಿಂಗ್ಟನ್ನಲ್ಲಿ ಮಾತನಾಡುತ್ತಾ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಮಾನವ ಮೌಲ್ಯಗಳು, ಜೀವನಶೈಲಿ ಮತ್ತು ಭಾರತದ ಸಮಸ್ಯೆಗಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅವರು, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಸಂಘಟಿತರಾಗಿದ್ದಾರೆ ಎಂಬ ವಾದವನ್ನು ಮಾಡಲಾಗಿದೆ; ಆದರೆ ಆನಂದ ಸೂಚ್ಯಂಕಕ್ಕೆ ಕೇವಲ ಸಂಘಟಿತತೆ ಸಾಲದು. ಇಂದು ಭಾರತದ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಕಳೆದ ದಶಕದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ, ಎಂದು ಹೇಳಿದರು.
ಭಾರತದಲ್ಲಿ ಮಾನವ ಮೌಲ್ಯಗಳು ತುಂಬಾ ಉನ್ನತವಾಗಿವೆ !
ಶ್ರೀ ಶ್ರೀ ರವಿಶಂಕರ್ ಮಾತು ಮುಂದುವರೆಸಿ, ನಾನು ಜಗತ್ತಿನಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಭಾರತದಲ್ಲಿ ಮಾನವ ಮೌಲ್ಯಗಳು ತುಂಬಾ ಉನ್ನತವಾಗಿವೆ ಎಂದು ನೋಡಿದ್ದೇನೆ. ಅದು ಕರುಣೆಯೇ ಆಗಿರಲಿ, ಅತಿಥಿಗಳನ್ನು ತಲುಪುವ ವಿಧಾನವೇ ಆಗಿರಲಿ, ಜನರು ತಮ್ಮ ಸಂಪನ್ಮೂಲಗಳನ್ನು ಹೇಗೆ ಹಂಚಿಕೊಳ್ಳುತ್ತಾರೆ, ಇವೆಲ್ಲವೂ ಕಲ್ಪನಾತೀತವಾಗಿದೆ. ಭಾರತದಲ್ಲಿ ನಿಮ್ಮ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ, ಇಡೀ ಗ್ರಾಮವು ನಿಮ್ಮ ಸಹಾಯಕ್ಕೆ ಬರುತ್ತದೆ. ಇಂತಹ ಸಾಮಾಜಿಕ ಬಾಂಧವ್ಯ ದೇಶದಲ್ಲಿ ತುಂಬಾ ಪ್ರಚಲಿತವಾಗಿದೆ. ಸಹಜವಾಗಿ, ದೇಶದಲ್ಲಿ ಸಮಸ್ಯೆಗಳಿವೆ; ಆದರೆ ಕಳೆದ ದಶಕದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ವಾಸ್ತವವಾಗಿ, ಆನಂದ ಅಥವಾ ದುಃಖವು ಬಡತನಕ್ಕೆ ಸಂಬಂಧಿಸಿಲ್ಲ, ಎಂದು ಹೇಳಿದರು.
"Claiming that war-stricken nations are happier than India is astonishing!"
— Sri Sri Ravi Shankar @Gurudev the founder of 'Art of Living' @ArtofLiving, raises concerns about the credibility of the ‘World Happiness Index.’👉While saints recognise certain truths and take a… pic.twitter.com/lGFFBLBhll
— Sanatan Prabhat (@SanatanPrabhat) March 22, 2025
ಸಂಪಾದಕೀಯ ನಿಲುವು
|