ಗೋವಾದ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇವರಿಗೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಆಮಂತ್ರಣ !

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೩ ನೇ ಜನ್ಮೋತ್ಸವದ ಪ್ರಯುಕ್ತ…

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರಿಗೆ ಆಮಂತ್ರಣ ನೀಡುವಾಗ ನ್ಯಾಯವಾದಿ ರಾಜೇಶ್ ಗಾವಕಾರ, ಪಕ್ಕದಲ್ಲಿ ಎಡದಿಂದ ಸರ್ವಶ್ರೀ ತುಳಸಿದಾಸ ಗಾಂಜೆಕರ, ನಾರಾಯಣ ನಾಡಕರ್ಣಿ ಮತ್ತು ರಮೇಶ ಶಿಂದೆ

ಪಣಜಿ /ಮುಂಬಯಿ , ಮಾರ್ಚ್ ೨೨ (ವಾರ್ತೆ) – ರಾಮರಾಜ್ಯದ ಅನುಭೂತಿ ನೀಡುವ ‘ಸನಾತನ ರಾಷ್ಟ್ರ’ದ ಸಂಕಲ್ಪದ ಶಂಖನಾದ ಮಾಡಿ ಧರ್ಮ ಸಂಸ್ಥಾಪನೆಯ ಕಾರ್ಯಕ್ಕೆ ಗತಿ ನೀಡುವ ಉದ್ದೇಶದಿಂದ ಸನಾತನ ಸಂಸ್ಥೆ ಆಯೋಜಿಸಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಏಕನಾಥ ಶಿಂದೆ ಇವರಿಗೆ ನೀಡಲಾಯಿತು.

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರನ್ನು ಭೇಟಿ ಮಾಡಿ ಅವರಿಗೆ ಈ ಮಹೋತ್ಸವಕ್ಕೆ ಆಮಂತ್ರಿಸಲಾಯಿತು. ಆ ಸಮಯದಲ್ಲಿ ನ್ಯಾಯವಾದಿ ರಾಜೇಶ ಗಾವಕರ, ಸನಾತನ ಸಂಸ್ಥೆಯ ತುಳಸಿದಾಸ ಗಾಂಜೇಕರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಶ್ರೀ. ನಾರಾಯಣ ನಾಡಕರ್ಣೆ ಉಪಸ್ಥಿತರಿದ್ದರು.

೧. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಇವರಿಗೆ ಆಮಂತ್ರಣ ನೀಡುವಾಗ ಶ್ರೀ. ಅಭಯ ವರ್ತಕ, ಅವರ ಪಕ್ಕದಲ್ಲಿ ಸಚಿವ ಭರತಶೇಠ ಗೋಗಾವಲೆ ಮತ್ತು ಶ್ರೀ. ಸುನಿಲ ಘನವಟ

ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡನವೀಸ ಇವರನ್ನು ಕೂಡ ಭೇಟಿ ಮಾಡಿ ಅವರಿಗೆ ಮಹೋತ್ಸವದ ಆಮಂತ್ರಣ ನೀಡಿದರು. ಆ ಸಮಯದಲ್ಲಿ ಮಹಾರಾಷ್ಟ್ರದ ಉದ್ಯೋಗ ಸಚಿವ ಭರತಶೇಠ ಗೋಗಾವಲೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸ್ಗಡ್ ರಾಜ್ಯದ ಸಮನ್ವಯಕ ಶ್ರೀ. ಸುನೀಲ ಘನವಟ ಮುಂತಾದವರು ಉಪಸ್ಥಿತರಿದ್ದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೂ ಕೂಡ ಶ್ರೀ. ವರ್ತಕ ಇವರು ಆಮಂತ್ರಣ ನೀಡಿದರು.

೧. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಆಮಂತ್ರಣ ನೀಡುವಾಗ ಶ್ರೀ. ಅಭಯ ವರ್ತಕ, ಮತ್ತು ೩. ಸಚಿವ ಭರತಶೇಠ ಗೋವಾಗಲೆ

ವಿಶ್ವ ಕಲ್ಯಾಣಕ್ಕಾಗಿ ರಾಮರಾಜ್ಯ ಸಮಾನ ‘ಸನಾತನ ರಾಷ್ಟ್ರ’ದ ಗುರಿ ನಿರ್ಧರಿಸುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರ ೮೩ ನೇ ಜನ್ಮೋತ್ಸವ ಸಮಾರಂಭ ಈ ಸಾರಿ ಗೋವಾದಲ್ಲಿ ಭವ್ಯವಾಗಿ ಆಚರಿಸಲಾಗುವುದು. ಅದರ ಪ್ರಯುಕ್ತ ೧೭ ರಿಂದ ೧೯ ರ ಕಾಲಾವಧಿಯಲ್ಲಿ ಫೊಂಡಾದ ಫರ್ಮಾಗುಡಿ ಇಲ್ಲಿಯ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ. ಈ ಮಹೋತ್ಸವದಲ್ಲಿ ಸಂತ ಮಹಂತರು, ಸಚಿವರು ಮತ್ತು ಗಣ್ಯರ ಜೊತೆಗೆ ೨೦ ಸಾವಿರಗಿಂತಲೂ ಹೆಚ್ಚಿನ ಸಾಧಕರು ಮತ್ತು ಧರ್ಮಪ್ರೇಮಿಗಳು ಉಪಸ್ಥಿತರಾಗುವರು.