*ಇಂತಹ ಸಮಿತಿ ಸ್ಥಾಪಿಸಿ ಪಾಕಿಸ್ತಾನದಲ್ಲಿರುವ ಹಿಂದೂಗಳ ಮಂದಿರಗಳ ಮೇಲೆ ಜಿಹಾದಿಗಳು ನಡೆಸುತ್ತಿರುವ ಆಕ್ರಮಣಗಳು ಸ್ಥಗಿತಗೊಳ್ಳುವುದೇ ? ‘ನಾವೂ ಅಲ್ಪಸಂಖ್ಯಾತ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ, ಎಂದು ಆಂತರರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಪಾಕಿಸ್ತಾನ ಇಂತಹ ಸಮಿತಿಯನ್ನು ಸ್ಥಾಪಿಸುತ್ತಿದೆ, ಎಂಬುದನ್ನು ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ‘ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧನ ಸಮಿತಿಯಂತೆಯೇ ‘ಪಾಕಿಸ್ತಾನ ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ. ಪಾಕಿಸ್ತಾನ ಸರಕಾರದಿಂದ ಪ್ರಥಮ ಬಾರಿಗೆ ಈ ರೀತಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ಇಂತಹ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಭೆಯ ಮೊದಲ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಧಾರ್ಮಿಕ ಪ್ರಕರಣಗಳ ಸಚಿವ ಪೀರ ನೂರ-ಉಲ್-ಹಕ್ ಕಾದರಿ ನೆರವೇರಿಸಿದರು. ಈ ಸಮಿತಿಯಲ್ಲಿ ಚಂದ ಚಾವಲಾ, ಹಾರೂನ ಸರಬ ದಯಾಲ, ಮೋಹನದಾಸ, ನಾರಂಜನ ಕುಮಾರ, ಮೇಘಾ ಅರೋರಾ, ಅಮಿತ ಶದಾನಿ, ಅಶೋಕ ಕುಮಾರ, ವರ್ಸಿ ಮಿಲ್ ದೀವಾನಿ ಮತ್ತು ಅಮರ ನಾಥ ರಂಧಾವಾ ಇವರು ಸದಸ್ಯರಾಗಿದ್ದಾರೆ ಹಾಗೂ ಅಧ್ಯಕ್ಷ ಸ್ಥಾನದಲ್ಲಿ ಕೃಷ್ಣ ಶರ್ಮಾ ಇರಲಿದ್ದಾರೆ.
#Pakistan on December 29 announced that it has set up a first-ever body of Hindu leaders to take care of the minority community’s temples in the Muslim-majority country.https://t.co/UmgvrypDBf
— The Hindu (@the_hindu) December 30, 2021
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara