
೧. ಮದುವೆಯಾಗದ (ಅವಿವಾಹಿತ)ವಯಸ್ಕರ ಮಹಿಳೆಯರ ಹೆಸರುಗಳ ಮುಂದೆ ‘ಕುಮಾರಿ’ ಎಂಬ ಉಪಾಧಿ ಬರೆಯುವುದು ಸೂಕ್ತವಲ್ಲ
ಪ್ರಸ್ತುತ, ಕನ್ನಡ ಭಾಷೆಯಲ್ಲಿ, ಮದುವೆಯಾಗದ (ಅವಿವಾಹಿತ) ಹುಡುಗಿಯರ ಹೆಸರುಗಳ ಮುಂದೆ ‘ಕುಮಾರಿ’ ಮತ್ತು ಮದುವೆಯಾದ ಮಹಿಳೆಯರ ಹೆಸರುಗಳ ಹಿಂದೆ ‘ಸೌಭಾಗ್ಯವತಿ’ ಅಥವಾ ‘ಶ್ರೀಮತಿ’ ಎಂಬ ಉಪಾಧಿಗಳನ್ನು ಅವರ ವೈವಾಹಿಕ ಸ್ಥಿತಿಗೆ ಅನುಗುಣವಾಗಿ ಬರೆಯಲಾಗುತ್ತದೆ. ಮದುವೆಯಾಗದ ವಯಸ್ಕರ ಮಹಿಳೆಯರ ಹೆಸರುಗಳ ಮೊದಲು ಏನು ಬರೆಯಬೇಕೆಂಬ ಬಗ್ಗೆ ಭಾಷೆಗಳಲ್ಲಿ ಪ್ರತ್ಯೇಕ ಉಪಾಧಿ ಇಲ್ಲ. ಆದ್ದರಿಂದ ನಿರ್ದಿಷ್ಟ ವಯಸ್ಸಿನ ನಂತರ, ವಿಶೇಷವಾಗಿ ವಯಸ್ಸು ನಲವತ್ತು ದಾಟಿದ ನಂತರ, ಅಂತಹ ಮಹಿಳೆಯರಿಗೆ ಯಾವ ಉಪಾಧಿ ನೀಡಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ. ಅವರಿಗೆ ‘ಕುಮಾರಿ’ ಉಪಾಧಿ ನೀಡುವುದು ಉಚಿತವೆನಿಸುವುದಿಲ್ಲ.
೨. ವಯಸ್ಕರ ಕನ್ಯೆಯರ ಹೆಸರಿನ ಮೊದಲು ‘ಶ್ರೀಮತಿ’ ಎಂದು ಬರೆಯುವುದು ಸೂಕ್ತವಲ್ಲ
ಪ್ರಸ್ತುತ, ಕೆಲವು ವಯಸ್ಕರ ಕನ್ಯೆಯರನ್ನು ‘ಶ್ರೀಮತಿ’ ಎಂದು ಕರೆಯಲಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ವಿಧವೆಯರ ಹೆಸರಿನ ಮುಂದೆ ಶ್ರೀಮತಿ ಎಂದು ಬರೆಯುವ ಪದ್ಧತಿ ರೂಢಿಯಲ್ಲಿದೆ. ಈ ರೂಢಿಯು ಹಿಂದಿಯಿಂದ ಬಂದಿತು. ಈ ಅಭ್ಯಾಸದಿಂದಾಗಿ ವಯಸ್ಕರ ಕನ್ಯೆಯರ ಹೆಸರಿನ ಮೊದಲು ‘ಶ್ರೀಮತಿ’ ಎಂದು ಬರೆದರೆ ಓದುಗರಿಗೆ ತಪ್ಪು ತಿಳುವಳಿಕೆಯಾಗುವ ಸಾಧ್ಯತೆಗಳಿರುತ್ತವೆ.
೩. ಮದುವೆಯಾಗದ (ಅವಿವಾಹಿತ) ವಯಸ್ಕರ ಮಹಿಳೆಯರಿಗೆ ಸಂಸ್ಕೃತದಲ್ಲಿ ‘ಸುಶ್ರೀ’ ಎಂಬ ಉಪಾಧಿ ನೀಡಿರುವುದು
‘ಸುಶ್ರೀ’ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಇದರರ್ಥ ‘ಸುಂದರ ಮತ್ತು ಸದ್ಗುಣಶೀಲ ಮಹಿಳೆ’ ಎಂದಾಗಿದೆ. ಸಂಸ್ಕೃತದಲ್ಲಿ ಕುಮಾರಿಕಾ, ಸೌಭಾಗ್ಯವತಿ ಮೊದಲಾದ ಎಲ್ಲ ಸ್ತ್ರೀಯರನ್ನು ಗೌರವದಿಂದ ಸಂಬೋಧಿಸಲು ಈ ಪದ ಬಳಕೆಯಾಗುತ್ತದೆ. ಹಿಂದಿ ಭಾಷೆಯು ಈಗಾಗಲೇ ಮದುವೆಯಾಗದ (ಅವಿವಾಹಿತ) ಮಹಿಳೆಯರಿಗೆ ಈ ಉಪಾಧಿಯನ್ನು ನೀಡಲು ಪ್ರಾರಂಭಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಕನ್ನಡದಲ್ಲಿ ಲಭ್ಯವಿರುವ ಉಪಾಧಿಗಳನ್ನು ಅಧ್ಯಯನ ಮಾಡುವ ಮೂಲಕ, ಸಂಸ್ಕೃತ ಭಾಷೆಯಲ್ಲಿ ಮದುವೆಯಾಗದ(ಅವಿವಾಹಿತ) ವಯಸ್ಕರ (೪೦ ವರ್ಷಕ್ಕಿಂತ ಮೇಲ್ಪಟ್ಟ) ಕನ್ಯೆಯರಿಗೆ (ಮಹಿಳೆಯರಿಗೆ) ‘ಸುಶ್ರೀ’ ಎಂಬ ಶೀರ್ಷಿಕೆಯನ್ನು ನೀಡುವುದು ಸೂಕ್ತವೆಂದು ತೋರುತ್ತದೆ.
ಟಿಪ್ಪಣಿ – ಮರಾಠಿ ಅಥವಾ ಕನ್ನಡ ಮಾತನಾಡುವ ಓದುಗರು ‘ಸುಶ್ರೀ’ ಉಪಾಧಿಗೆ ಹೊಂದಿಕೊಳ್ಳುವ ತನಕ ‘ಸುಶ್ರೀ’ ಉಪಾಧಿಯ ಬಳಿ ‘ಕುಮಾರಿ’ ಎಂದು ಕಂಸದಲ್ಲಿ ಬರೆಯಲಾಗುವುದು.
– ಸುಶ್ರೀ (ಕು.) ಸುಪ್ರಿಯಾ ಶರದ ನವರಂಗೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೧೧.೨೦೨೧)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !