ಕರಾಚೀ (ಪಾಕಿಸ್ತಾನ)ದಲ್ಲಿ ಮತಾಂಧರಿಂದ ಹಿಂದೂಗಳ ದೇವಾಲಯ ಹಾಗೂ ಮೂರ್ತಿಗಳ ಧ್ವಂಸ

  • ಕಳೆದ ೨೨ ತಿಂಗಳಿನಲ್ಲಿ ೯ ದೇವಾಲಯಗಳ ಮೇಲೆ ದಾಳಿ

  • ವಿದೇಶಾಂಗ ಮಂತ್ರಿ ಎಸ್.ಜಯಶಂಕರರವರು ಈ ವಿಷಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು, ಎಂದು ಭಾಜಪದ ಮುಖಂಡ ಮನಜಿಂದರ ಸಿಂಗ್ ಸಿರಸಾರವರ ಬೇಡಿಕೆ

  • ಪಾಕನಲ್ಲಿ ಕುರಾನ ಹಾಗೂ ಮಹಂಮದ ಪೈಗಂಬರರವರ ಅವಮಾನವಾದ್ದರಿಂದ ಈಶನಿಂದೆಯೆಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ; ಆದರೆ ಹಿಂದೂಗಳ ಸಂದರ್ಭದಲ್ಲಿ ಆ ರೀತಿಯ ಘಟನೆಗಳು ನಡೆದರೆ ಏನೂ ಆಗುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
  • ಪಾಕನಲ್ಲಿ ಹಿಂದೂಗಳ ವಂಶಸಂಹಾರವಾಗುತ್ತಿರುವಾಗ ಮಾನವಾಧಿಕಾರ ಸಂಘಟನೆಗಳು, ಜಾತ್ಯಾತೀತರು ಹಾಗೂ ಪುರೋ(ಅಧೋ)ಗಾಮೀ ಏನೂ ಕೂಡ ಮಾಡುವುದಿಲ್ಲ. ಇದರಿಂದ ಅವರು ಎಷ್ಟು ಡೋಂಗಿಗಳಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ !
  • ಕಳೆದ ಅನೇಕ ವರ್ಷಗಳಿಂದ ಪಾಕನಲ್ಲಿ ಹಿಂದೂಗಳು ಹಾಗೂ ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತದೆ. ಆದ್ದರಿಂದ ಈ ಅಂಶವನ್ನು ಭಾರತ ಸರಕಾರವು ಈ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವುದು ಅಗತ್ಯವಾಗಿತ್ತು. ಅದಕ್ಕಾಗಿ ಈಗಲೂ ಕೂಡ ಈ ರೀತಿ ಬೇಡಿಕೆ ಮಾಡಬೇಕಾಗುತ್ತದೆ, ಎಂಬುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !


ಕರಾಚೀ (ಪಾಕಿಸ್ತಾನ) – ಇಬ್ಬರು ಮತಾಂಧರು ಇಲ್ಲಿನ ನಾರಾಯಣ ಪುರದಲ್ಲಿ ರಣಛೋಡ ಲಾಯಿನ ವಿಭಾಗದಲ್ಲಿ ಒಂದು ಹಿಂದೂ ದೇವಾಲಯದೊಳಗೆ ಪ್ರವೇಶಿಸಿ ಸುತ್ತಿಗೆಯಿಂದ ಶ್ರೀ ದುರ್ಗಾದೇವಿಯ ಎರಡು ಮೂರ್ತಿಗಳನ್ನು ಧ್ವಂಸ ಮಾಡಿದರು, ಹಾಗೂ ದೇವಾಲಯಕ್ಕೂ ಕೂಡ ಹಾನಿಯುಂಟು ಮಾಡಿದರು. ಹಿಂದೂಗಳು ಘಟನಾಸ್ಥಳದಲ್ಲಿಯೇ ಇಬ್ಬರು ಮತಾಂಧರ ಪೈಕಿ ಮಹಂಮದ ವಲಿದ ಎಂಬುವವನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದರು. ಅವರ ವಿರುದ್ಧ ಈಶನಿಂದೆಯ ಅಪರಾಧವನ್ನು ನೋಂದಾಯಿಸಲಾಗಿದೆ. ಧ್ವಂಸ ಮಾಡಿದ ಮಾಹಿತಿ ಸಿಕ್ಕಿದ ತಕ್ಷಣ ಅಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಯಿತು. ಧ್ವಂಸದ ಬಳಿಕ ಆಂದೋಲನ ನಡೆಸಲಾಯಿತು. ಹಿಂದೂಗಳು ದೋಷಿಗಳಿಗೂ ಗಲ್ಲು ಶಿಕ್ಷೆ ನೀಡಬೇಕು ಎಂಬ ಬೇಡಿಕೆ ಮಾಡಿದರು. ಆಗ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸು ಬಂದೋಬಸ್ತು ಮಾಡಲಾಯಿತು. ಈ ಘಟನೆಯ ಮೊದಲು ಕೆಲವು ವಾರಗಳ ಹಿಂದೆ ಸಿಂಧನಲ್ಲಿ ಒಂದು ದೇವಾಲಯವನ್ನು ಧ್ವಂಸ ಮಾಡಿ ಅಲ್ಲಿನ ಸಂಪತ್ತನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಲಾಯಿತು. ಪಾಕನಲ್ಲಿ ಕಳೆದ ೨೨ ತಿಂಗಳಿನಲ್ಲಿ ದೇವಾಲಯಗಳ ಮೇಲೆ ದಾಳಿಯಾದ ೯ನೇಯ ಘಟನೆ ಇದಾಗಿದೆ.

ಭಾಜಪದ ಮುಖಂಡರಾದ ಮನಜಿಂದರ ಸಿಂಹ ಸಿರಸಾರವರು ದೇವಾಲಯದ ಘಟನೆಯ ವ್ಹಿಡಿಯೋ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು ಹಾಗೂ ‘ಕರಾಚಿಯಲ್ಲಿ ದೇವಾಲಯಗಳ ಧ್ವಂಸ ಮಾಡಲಾಗಿದೆ. ‘ದೇವಾಲಯಗಳು ಪ್ರಾರ್ಥನಾಸ್ಥಳಗಳಾಗಲು ಪಾತ್ರವಿಲ್ಲ’, ಎಂದು ಹೇಳಿ ದಾಳಿ ಮಾಡಿದವರು ಧ್ವಂಸಕ್ಕೆ ಬೆಂಬಲಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ರಾಜ್ಯ-ಬೆಂಬಲಿತ ಉಗ್ರಗಾಮೀ ಕೃತ್ಯವಾಗಿದೆ.’ ಹಾಗೂ ಸಿರಸಾರವರು ವಿದೇಶಾಂಗ ಮಂತ್ರಿಗಳಾದ ಎಸ್. ಜಯಶಂಕರರಿಗೆ ಗಡಿಯ ಆಚೆಗೆ ಹಿಂದೂ ಹಾಗೂ ಸಿಕ್ಖರ ಧರ್ಮಸ್ವಾತಂತ್ರ್ಯಕ್ಕೆ ಬೆಂಬಲ ನೀಡಲು ಜಾಗತಿಕ ಮಟ್ಟದಲ್ಲಿ ಈ ಅಂಶಗಳನ್ನು ಉಪಸ್ಥಿತಗೊಳಿಸುವ ಬೇಡಿಕೆ ಮಾಡಿದ್ದಾರೆ.

ಈ ಮೇಲಿನ ಚಿತ್ರ ಪ್ರಸಿದ್ಧಿ ಮಾಡುವ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೆ ನಿಜ ಸ್ಥಿತಿಯನ್ನು ತಿಳಿಸುವುದಾಗಿದೆ.