ಜನರಲ್ ಬಿಪಿನ್ ರಾವತ್ ನಂತರ ದೇಶಕ್ಕೆ ಅದೇ ಸಾಮರ್ಥ್ಯದ ಹೊಸ ನಾಯಕತ್ವ ಸಿಗಲಿದೆ ! – ಬ್ರಿಗೇಡಿಯರ್ ಹೇಮಂತ ಮಹಾಜನ

ಭಾರತದ ಭದ್ರತೆ ?: ಬಾಹ್ಯ ಶತ್ರುಗಳು ಮತ್ತು ಆಂತರಿಕ ದೇಶದ್ರೋಹಿಗಳಿಂದ’ ಈ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಭಾರತದ ಚೀಫ್ ಆಫ್ ಡಿಫೆಂಸ್ ಸ್ಟಾಫ್ (ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಅವರು ಮೂರು ಸೇನಾಪಡೆಗಳನ್ನು ಒಟ್ಟಾಗಿಸಿ ದೇಶದ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಪರಿಣಾಮಕಾರಿ ಕಾರ್ಯತಂತ್ರವನ್ನು ನಿರ್ಮಿಸಿದ್ದರು. ಉರಿ, ಮ್ಯಾನ್ಮಾರ್ ಮತ್ತು ಡೋಕ್ಲಾಮ್‌ನಲ್ಲಿ ಯಶಸ್ವಿ ಸೇನಾ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಅವರ ನಿರಂತರ ಪ್ರಯತ್ನಗಳಿಂದಾಗಿ ಮುಂದಿನ ಎರಡೂವರೆ ವರ್ಷಗಳಲ್ಲಿ ದೇಶದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಿದ್ದವು; ಆದರೆ ಅವರ ಅಕಾಲಿಕ ನಿರ್ಗಮನವು ಅದರ ಮೇಲೆ ಪರಿಣಾಮ ಬೀರಬಹುದು, ಆದರೆ ಸಿ.ಡಿ.ಎಸ್ ರಾವತ್ ನಂತರ, ಅದೇ ಸಾಮರ್ಥ್ಯದ, ಅಗಾಧ ಆಧ್ಯಯನವಿರುವ, ನಿಪುಣ, ಅನುಭವಿ ಮತ್ತು ನುರಿತ ನೂತನ ಸಿ.ಡಿ.ಎಸ್. ಆಯ್ಕೆಯಾಗುತ್ತಾರೆ ಮತ್ತು ಅವರು ಅವರ ಉಳಿದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಭಾರತದ ಭವಿಷ್ಯದ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಯುದ್ಧ ಸೇವಾ ಮೆಡಲ್ ಪುರಸ್ಕೃತ (ನಿವೃತ್ತ) ಬ್ರಿಗೇಡಿಯರ್ ಹೇಮಂತ್ ಮಹಾಜನ್ ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಭಾರತದ ಭದ್ರತೆ : ಬಾಹ್ಯ ಶತ್ರುಗಳು ಮತ್ತು ಆಂತರಿಕ ದೇಶದ್ರೋಹಿಗಳಿಂದ’ ಕುರಿತ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೃಥ್ವಿ ಚೌಹಾಣ್ ಇವರು, ಸಿ.ಡಿ.ಎಸ್. ಬಿಪಿನ್ ರಾವತ್ ಅವರು ‘ಆತ್ಮನಿರ್ಭರ್ ಭಾರತ್’ ಯೋಜನೆಯಡಿ ಮೂರು ಸೇನಾಪಡೆಗಳನ್ನು ಸಬಲಗೊಳಿಸುತ್ತಿದ್ದರು. ಎರಡೂವರೆ ಕಡೆಗಳಲ್ಲಿ ಅಂದರೆ ಪಾಕಿಸ್ತಾನದ ವಿರುದ್ಧ, ಚೀನಾ ವಿರುದ್ಧ ಮತ್ತು ಅರ್ಧದಷ್ಟು (ಆಂತರಿಕ) ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದ್ದರು. ಜಿಹಾದ್ ಪ್ರತಿಪಾದಿಸುವವರ ಮನೆಗೆ ನುಗ್ಗಿ ಹತ್ಯೆ ಮಾಡಲಾಗುತ್ತಿತ್ತು. ಇದರಿಂದಾಗಿ ರಾವತ್ ಸಾವಿನಿಂದ ಜಿಹಾದಿಗಳು ಸಂಭ್ರಮಿಸುತ್ತಿದ್ದಾರೆ; ಆದರೆ ದೇಶಭಕ್ತರು ಒಗ್ಗೂಡಿ ಅವರಿಗೆ ಉತ್ತರ ನೀಡಬೇಕು ಎಂದು ಹೇಳಿದರು.

‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಅನಿಲ್ ಧೀರ್ ಅವರು ಮಾತನಾಡಿ, ಸಿ.ಡಿ.ಎಸ್. ಬಿಪಿನ್ ರಾವತ್ ಇವರ ನಿಧನದಿಂದ ಸಂತಸಗೊಂಡಿರುವವರು ಜಿಹಾದಿ ಮಾನಸಿಕತೆಯವರು. ಈ ಮೊದಲು ಅತ್ಯಾಚಾರವೆಸಗುತ್ತಾರೆ, ಕಾಶ್ಮೀರದಲ್ಲಿ ದಾರಿತಪ್ಪಿದ ಯುವಕರನ್ನು ಕೊಲ್ಲುತ್ತಿದ್ದಾರೆ ಎಂದು ಸೈನ್ಯದ ಮೇಲೆ ಆರೋಪ ಹೊರಿಸಿ ಅವರನ್ನು ದುರ್ಬಲಗೊಳಿಸುತ್ತಿದ್ದರು. ಜೊತೆಗೆ ಕಮ್ಯುನಿಸ್ಟರು, ಚೀನಾ-ಪರ ಹಿತಶತ್ರುಗಳು, ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ವಿವಿಧ ವಾರ್ತಾವಾಹಿನಿಗಳಲ್ಲಿ ಚರ್ಚಿಸುವ ಮೂಲಕ ಮಿಲಿಟರಿಯ ಧೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದರು. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುತ್ತಿರುವ ಸೈನಿಕನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪಾಗಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಮಾತನಾಡಿ, ಈಗ ಯುದ್ಧದಲ್ಲಿ ಬದಲಾವಣೆಯಾಗಿದೆ ಆದ್ದರಿಂದ ಗಡಿಯಲ್ಲಿನ ಶತ್ರುಗಳ ಸಹಿತ ಆಂತರಿಕ ದೇಶದ್ರೋಹಿಗಳ ವಿರುದ್ಧ ಸೇನೆ ಹೋರಾಡಬೇಕಿದೆ. ತ್ರಿಪುರಾದ ಘಟನೆಗಳಿಂದಾಗಿ ಮಹಾರಾಷ್ಟ್ರದ 6 ಸ್ಥಳಗಳಲ್ಲಿ ಮತಾಂಧರು ಗಲಭೆ ನಡೆಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಅರಾಜಕತೆ ಹೆಚ್ಚಾಗುವುದರ ಜೊತೆಗೆ ನಾಗರಿಕರು ಮಹಾ ಸಂಘವನ್ನೇ ಎದುರಿಸಬೇಕಾಗಬಹುದು. ದೇಶದ ವಿರುದ್ಧ ಹೋರಾಡುತ್ತಿರುವ ಮತ್ತು ಸೇನೆಗೆ ಅವಮಾನ ಮಾಡುತ್ತಿರುವ ಆಂತರಿಕ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಹೊಸ ಕಾನೂನನ್ನು ಜಾರಿಗೊಳಿಸಬೇಕು. ಅಲ್ಲದೆ ದೇಶಭಕ್ತರೆಲ್ಲರೂ ಒಗ್ಗೂಡಿ ಈ ದೇಶದ್ರೋಹಿಗಳಿಗೆ ದಿಟ್ಟ ಉತ್ತರ ನೀಡಬೇಕು ಎಂದು ಸಹ ಶ್ರೀ. ಜಾಖೋಟಿಯಾ ಹೇಳಿದರು.