ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ಬಳಿಕ ಹುಸೇನ್ ಶೇಖ್ ಕ್ಷಮೆಯಾಚನೆ : Hussain Sheikh Apology

‘ಸಕಲ ಹಿಂದೂ ಸಮಾಜ’ದ ಆಕ್ರಮಣಕಾರಿ ನಿಲುವಿನ ಪರಿಣಾಮ

ಜಯಸಿಂಗಪುರ (ಕೊಲ್ಲಾಪುರ ಜಿಲ್ಲೆ) – ಇಲ್ಲಿನ ದೈನಿಕವೊಂದರ ವರದಿಗಾರ ಹುಸೇನ್ ಶೇಖ್ ಅವರು ಹಿಂದೂ ಧರ್ಮದ ದೇವತೆಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರು ‘ಹಿಂದೂಗಳ ದೇವತೆಗಳು ಕಲ್ಲುಗಳಾಗಿವೆ. ಅವರು ದೇವಸ್ಥಾನಕ್ಕೆ ಏಕೆ ಹೋಗುತ್ತಾರೆ?, ದಾನ ಏಕೆ ಮಾಡುತ್ತಾರೆ?, ಅದಕ್ಕಿಂತ ಹೆಚ್ಚಾಗಿ ಜೀವಂತ ಮನುಷ್ಯನಿಗೆ ಸಹಾಯ ಮಾಡಿ’, ಎಂದು ಹಿಂದೂದ್ವೇಷದ ಹೇಳಿಕೆ ನೀಡಿದ್ದರು. ಇದರ ವಿರುದ್ಧ ‘ಸಕಲ ಹಿಂದೂ ಸಮಾಜ’ವು ತಕ್ಷಣವೇ ಪತ್ರಕರ್ತ ಹುಸೇನ್ ಶೇಖ್ ವಿರುದ್ಧ ಜಯಸಿಂಗಪುರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ಸಕಲ ಹಿಂದೂ ಸಮಾಜದ ಆಕ್ರಮಣಕಾರಿ ನಿಲುವಿನಿಂದಾಗಿ ಹುಸೇನ್ ಶೇಖ್ ಅವರು ಲಿಖಿತ ವಿವರಣೆ ನೀಡಿ ಹಿಂದೂಗಳ ಕ್ಷಮೆಯಾಚಿಸಬೇಕಾಯಿತು.

ಪೊಲೀಸ್ ಠಾಣೆಗೆ ದೂರು ಸಲ್ಲಿಸುವಾಗ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ಧಾರಕರಿಗಳಾದ ಶ್ರೀ. ರಾಜೇಂದ್ರ ಗಾಡಿವಡರ್, ಶ್ರೀ. ಶೈಲೇಂದ್ರ ಲೋಹಿಯಾ, ನಗರಸಭಾ ಸದಸ್ಯ ಶ್ರೀ. ಸಂತೋಷ್ ಜಾಧವ್, ಭಾಜಪದ ಶ್ರೀ. ಮಹೇಂದ್ರ ದಾಯಿಂಗಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಮಹೇಂದ್ರ ರಜಪೂತ್, ಶ್ರೀ. ಸುನಿಲ್ ಭೋರೆ, ಶ್ರೀ. ಧೀರಜ್‌ಲಾಲ್ ಪಟೇಲ್, ಶ್ರೀ. ಕೈಲಾಸ್ ದೇಶ್‌ಮುಖ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸಂಜಯ್ ಘಾಟ್ಗೆ ಉಪಸ್ಥಿತರಿದ್ದರು. ಹುಸೇನ್ ಶೇಖ್ ಅವರು ನೀಡಿದ ಕ್ಷಮಾಪಣಾ ಪತ್ರದಲ್ಲಿ, ‘ನಾನು ನನ್ನ ಹಿಂದೂ ಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯಿಂದ ಸಕಲ ಹಿಂದೂ ಸಮಾಜದ ಮನಸ್ಸಿಗೆ ನೋವಾಗದಂತೆ ನಾನು ಇನ್ನು ಮುಂದೆ ಎಚ್ಚರ ವಹಿಸುತ್ತೇನೆ’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಟೀಕೆಯನ್ನು ಯಾರಾದರೂ ಮುಸ್ಲಿಮರ ನಂಬಿಕೆಗಳ ಮೇಲೆ ಮಾಡಿದ್ದರೆ, ಹುಸೇನ್ ಶೇಖ್ ಅವರ ಧರ್ಮಬಾಂಧವರು ಇಷ್ಟರಲ್ಲೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದನ) ಫತ್ವಾ ಹೊರಡಿಸುತ್ತಿದ್ದರು! ಹಿಂದೂಗಳು ಸಹಿಷ್ಣುಗಳಾಗಿರುವುದರಿಂದಲೇ ಶೇಖ್ ಅವರಂತಹವರಿಗೆ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಟೀಕಿಸುವ ಧೈರ್ಯ ಬರುತ್ತದೆ!
  • ಮುಸ್ಲಿಮರು ಎಷ್ಟೇ ಉನ್ನತ ಹುದ್ದೆಗೆ ಹೋದರೂ, ಅವರು ತಮ್ಮೊಳಗಿನ ಹಿಂದೂದ್ವೇಷವನ್ನು ಪ್ರಕಟಿಸುತ್ತಾರೆ ಎಂಬುದು ಇದರಿಂದ ಸಾಬೀತಾಗುತ್ತದೆ!
  • ಹಿಂದೂ ಧರ್ಮದ ಮೇಲಿನ ಆಘಾತದ ವಿರುದ್ಧ ತಕ್ಷಣವೇ ಧ್ವನಿ ಎತ್ತಿದ ‘ಸಕಲ ಹಿಂದೂ ಸಮಾಜ’ಕ್ಕೆ ಅಭಿನಂದನೆಗಳು!