ಕೇರಳದಲ್ಲಿ ಹಿಂದೂದ್ವೇಷಿ ಮಾಕ್ರ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಇರುವುದರಿಂದ ಹಿಂದೂಗಳ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಭವಿಷ್ಯದಲ್ಲಿ ಈ ರೀತಿಯ ಹತ್ಯೆಯಾಗಬಾರದೆಂದು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಅಲ್ಲಿಯ ಹಿಂದುತ್ವನಿಷ್ಠರ ರಕ್ಷಣೆಗಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

ತಿರುವನಂತಪುರಂ (ಕೇರಳ) – ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ 27 ವರ್ಷದ ಸ್ವಯಂಸೇವಕ ಸಂಜಿತ ಇವರನ್ನು 4 ದುಷ್ಕರ್ಮಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ 15 ನವೆಂಬರ್ 2021 ರಂದು ನಡೆದಿದೆ. ಈ ಹತ್ಯೆಗೆ `ಸೋಶಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಈ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಪಕ್ಷವೇ ಕಾರಣ ಎಂದು ಭಾಜಪ ಆರೋಪಿಸಿದೆ. ಪೊಲೀಸರು ಈ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ.
Kerala: RSS worker hacked to death in Palakkad, state BJP president calls attack ‘planned’ https://t.co/ZdpsaYMWHb
— Republic (@republic) November 15, 2021
ಪೊಲೀಸರು ನೀಡಿರುವ ಮಾಹಿತಿಗನುಸಾರ, ಸಂಜಿತ ಹೆಂಡತಿಯ ಜೊತೆ ಮೋಟರ್ ಸೈಕಲ್.ನಿಂದ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೊರಟಿದ್ದರು. ದಾರಿಯಲ್ಲಿ ಹೋಗುವಾಗ ದುಷ್ಕರ್ಮಿಗಳು ಚತುಷ್ಚಕ್ರ ವಾಹನದಿಂದ ಅವರನ್ನು `ಓವರ್.ಟೇಕ್’ ಮಾಡಿ ಅವರ ಮೋಟರ್ ಸೈಕಲ್ನ ಎದುರು ನಿಲ್ಲಿಸಿದರು. ಅನಂತರ ಚತುಷ್ಚಕ್ರದಲ್ಲಿದ್ದ ನಾಲ್ಕು ಜನರು ಹೊರಗೆ ಬಂದು ಸಂಜಿತ ಅವರನ್ನು ಮೋಟರ ಸೈಕಲ್ನಿಂದ ಕೆಳಗೆ ಬೀಳಿಸಿದರು. ಅನಂತರ ಅವರನ್ನು ಬರ್ಬರವಾಗಿ ಥಳಿಸಿದರು. ಆ ಸಮಯದಲ್ಲಿ ಅವರ ಪತ್ನಿ ಸಂಜಿತ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆಕೆ ರಸ್ತೆಯಲ್ಲಿ ಓಡಾಡುವವರ ಕಡೆಗೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದರು. ಆದರೆ ಆಕೆಗೆ ಯಾರೂ ಸಹಾಯ ಮಾಡಲಿಲ್ಲ. ಥಳಿತಕ್ಕೊಳಗಾದ ಸಂಜಿತ ಪ್ರಜ್ಞೆ ತಪ್ಪಿ ಬಿದ್ದ ನಂತರ ಹಂತಕರು ಓಡಿಹೋದರು.
ದೆಹಲಿ: ಹಳೇ ವೈಷಮ್ಯದ ಹಿನ್ನೆಲೆ: ೧೭ ವರ್ಷದ ಹಿಂದೂ ಹುಡುಗನ ಹತ್ಯೆ
ಜೈಪುರದಲ್ಲಿ ಭಾಜಪ ನಾಯಕನ ಶಿರಚ್ಛೇದ ಮಾಡಿ ಬರ್ಬರ ಹತ್ಯೆ
ನಲಬಾಡಿ (ಅಸ್ಸಾಂ) ದಲ್ಲಿ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ!
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
”ವಂದೇ ಮಾತರಂ” ಅನ್ನು ಪೂರ್ಣವಾಗಿ ಹಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿಯ ಭಾಗ! (ವಂತೆ)