‘ಭಾರತದಲ್ಲಿ ಮತಾಂತರ ಜಿಹಾದ್ !’ ಈ ಕುರಿತು ‘ಆನ್‌ಲೈನ್’ನಲ್ಲಿ ವಿಶೇಷ ಸಂವಾದ !

ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್

ಕಟ್ಟರ ಮುಸಲ್ಮಾನರು ದೇಶದ ಆಡಳಿತಶಾಹಿಯ ಮೇಲೆ ತಮ್ಮ ಹಿಡಿತ ಸಾಧಿಸಲು ‘ಯು.ಪಿ.ಎಸ್.ಸಿ. ಜಿಹಾದ್’ ಎಂದರೆ ‘ಅಧಿಕಾರಶಾಹಿ ಜಿಹಾದ್’ ನಡೆಸುತ್ತಿದ್ದಾರೆ. ಭಾರತದ ‘ಯು.ಪಿ.ಎಸ್.ಸಿ.’ ಪರೀಕ್ಷೆಯಲ್ಲಿ ‘ಜಕಾತ್ ಫೌಂಡೇಶನ್’ ಈ ಸಂಸ್ಥೆಯ ಮುಸಲ್ಮಾನ ವಿದ್ಯಾರ್ಥಿಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಇದಕ್ಕಾಗಿ ಸಂಘಟನೆಗಳಿಗೆ ಅನೇಕ ಭಯೋತ್ಪಾದಕ ಸಂಘಟನೆಗಳಿಂದ ಹಣ ಪೂರೈಕೆಯಾಗುತ್ತಿವೆ. ‘ಜಕಾತ್ ಫೌಂಡೇಶನ್’ನ ‘ಶರಿಯತ್ ಪರಿಷದ್’ನ ಹಿರಿಯ ಸಲಹೆಗಾರ ಮೌಲಾನಾ ಕಲೀಂ ಸಿದ್ದಿಕಿ ಈತನನ್ನು ಇತ್ತೀಚೆಗೆ ಉತ್ತರಪ್ರದೇಶದ ಪೊಲೀಸರು ಮತಾಂತರ ಸೇರಿದಂತೆ ಆರ್ಥಿಕ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದರು. ಸಿದ್ದಿಕಿ ಕೇವಲ ಪ್ಯಾದೆಯಾಗಿದ್ದು, ಇದರ ಹಿಂದೆ ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಗೊಳಿಸಲು ಜಾಗತಿಕ ಪಿತೂರಿ ಇದೆ ಎಂದು ‘ಸುದರ್ಶನ್ ನ್ಯೂಸ್’ನ ಮುಖ್ಯ ಸಂಪಾದಕರಾದ ಶ್ರೀ. ಸುರೇಶ ಚೌವ್ಹಾಣಕೆ ಇವರು ಖಂಡತುಂಡವಾಗಿ ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಭಾರತದಲ್ಲಿ ಮತಾಂತರ ಜಿಹಾದ್ !’ ಕುರಿತು ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ವಾಸ್ತವಿಕತೆಯನ್ನು ಪ್ರಸ್ತುತಪಡಿಸಿದ, ಶ್ರೀ. ಚವ್ಹಾಣಕೆ ಇವರು, ಸರಕಾರವು ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿದ್ದರೂ, ಈ ‘ಜಿಹಾದ್’ ಅನ್ನು ಅನೇಕ ಮೌಲಾನರು ನಡೆಸುತ್ತಿದ್ದಾರೆ ಮತ್ತು ಅವರು ಇಂದಿಗೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲ ಅಥವಾ ಅಂಗವಿಕಲ ವ್ಯಕ್ತಿಗಳು, ದೂರದ ಪ್ರದೇಶಗಳಲ್ಲಿ ವಾಸಿಸುವ ಹಿಂದೂಗಳನ್ನು ಮೊದಲು ಗುರಿಯಾಗಿಸಿಕೊಂಡು ಅವರನ್ನು ಮತಾಂತರಗೊಳಿಸಲಾಗುತ್ತಿದೆ. ಕಳೆದ 15 ತಿಂಗಳಲ್ಲಿ, ಬಿಹಾರವೊಂದರಲ್ಲೇ 10 ಲಕ್ಷ ಹಿಂದೂಗಳು ಮತಾಂತರಗೊಂಡಿದ್ದಾರೆ ಮತ್ತು ಈಗ ಕ್ರೈಸ್ತರಾಗಿದ್ದಾರೆ. ಭಾರತದ ಇತರ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದ ಮತಾಂತರಗಳು ನಡೆಯುತ್ತಿವೆ ಎಂದು ಹೇಳಿದರು.

‘ಟೈಮ್ಸ್’ನ ಸಂಪಾದಕರಾದ ಶ್ರೀ. ಅನುಪಮ್ ಮಿಶ್ರಾ ಇವರು ಈ ಸಮಯದಲ್ಲಿ ಮಾತನಾಡುತ್ತಾ, ಹಿಂದೂಗಳನ್ನು ಮತಾಂತರ ಮಾಡಲು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ದೇಶದಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಭಾರತದಲ್ಲಿ ಮದರಸಾಗಳಿಗೆ ಆರ್ಥಿಕ ನೆರವು ನೀಡದ ಮತ್ತು ಇಮಾಮ್‌ಗಳಿಗೆ ಸಂಬಳ ನೀಡದ ಯಾವುದಾದರೂ ರಾಜ್ಯವಿದೆಯೇ ? ‘ಜಮಾತ್-ಎ-ಇಸ್ಲಾಮಿ’ಯಂತಹ ಸಂಘಟನೆಗಳು ತಮ್ಮ ಜಾಲತಾಣಗಳಲ್ಲಿ, ‘ಮತಾಂತರವೇ ನಮ್ಮ ಅಸ್ತಿತ್ವದ ಮುಖ್ಯ ಉದ್ದೇಶವಾಗಿದೆ’ ಎಂದು ಬಹಿರಂಗವಾಗಿ ಘೋಷಿಸುತ್ತವೆ, ಸರಕಾರದಿಂದ ವಿವಿಧ ಸ್ಥಳಗಳಲ್ಲಿ ಹಿಂದೂಗಳ ದಮನ ಆಗುತ್ತಿರುವಾಗ ಮತಾಂತರ ಮಾಡುವ ಮಿಶನರಿ, ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸುವ ಕಟ್ಟರವಾದಿಗಳಿಗೆ ಇನ್ನು ಹಿಂದೂಗಳು ಸಂಘಟಿತರಾಗಿ ವಿರೋಧಿಸಬೇಕಾಗಿದೆ, ಇದೊಂದೇ ಆಶಾಕಿರಣವಾಗಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಂಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಮಾತನಾಡುತ್ತಾ, ಇಲ್ಲಿಯವರೆಗೆ ಆಮಿಷ ತೋರಿಸಿ ಅಥವಾ ಬಲವಂತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಾಂತರವನ್ನು ಮಾಡಿದ್ದಾರೆ. ಮತಾಂತರವೆಂದರೆ ರಾಷ್ಟ್ರಾಂತರ’ವಾಗಿದೆ. ಧರ್ಮ ಮತ್ತು ಸಂಸ್ಕೃತಿ ನಾಶ ಮಾಡಿ ಇಲ್ಲಿಯವರೆಗೆ ಮೊಘಲರು ಸೇರಿದಂತೆ ಇತರ ವಿದೇಶಿ ಆಕ್ರಮಣಕಾರರು ಹೇಗೆ ನಮ್ಮ ದೇಶವನ್ನು ವಿಭಜಿಸಿದ್ದಾರೆ, ಎಂಬ ನಿಜವಾದ ಇತಿಹಾಸವನ್ನು ಹೇಳುವ ಮೂಲಕ ಹಿಂದೂಗಳಲ್ಲಿ ಜಾಗೃತಿ ಮೂಡಿಸಬೇಕು. ಹಿಂದೂ ಸಹೋದರರು ತಮ್ಮ ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸಿ ಹೇಳುವ ಅವಶ್ಯಕತೆ ಇದೆ. ದೇಶದಲ್ಲಿ ‘ಮತಾಂತರ ನಿಷೇಧ ಕಾನೂನು’ ತರುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ. ಹಿಂದೂಗಳು ತಾವು ಧರ್ಮಪಾಲನೆ ಮಾಡಿದರೆ, ನಮಗೆ ಧರ್ಮದ ಬಗ್ಗೆ ಹೆಮ್ಮೆ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.