
ನವದೆಹಲಿ – ಭಾರತವು ಅಫಫಾನಿಸ್ತಾನದ ಸಮಸ್ಯೆಯ ಬಗ್ಗೆ ಅಮೇರಿಕಾ ಮತ್ತು ರಷ್ಯಾ ಇವರನ್ನು ಒಟ್ಟುಗೂಡಿಸಿದೆ. ಭಾರತದ ಪ್ರಯತ್ನದಿಂದ ಅಮೆರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ಮುಖ್ಯಸ್ಥ ವಿಲಿಯಂ ಬನ್ರ್ಸ ಮತ್ತು ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಇವರನ್ನು ಒಂದೇ ಸಮಯಕ್ಕೆ ನವದೆಹಲಿಯಲ್ಲಿ ಕರೆಯಲಾಗಿದೆ. ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ದೂರವಾಣಿ ಮುಖಾಂತರ ಚರ್ಚಿಸಿದ್ದರು. ಇದರ ಮುಂದಿನ ಚರ್ಚೆಗಾಗಿ ಪತ್ರುಶೇವ್ಹಾ ಇವರು ಭಾರತದ ಪ್ರವಾಸದಲ್ಲಿರುವರು, ಹೀಗೆಂದು ರಷ್ಯಾದ ರಾಯಭಾರಿ ಕಚೇರಿಯ ಮೂಲಗಳಿಂದ ಹೇಳಲಾಗಿದೆ. ಪತ್ರುಶೇವ್ಹಾ ಸೆಪ್ಟೆಂಬರ 8 ರಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ ಮತ್ತು ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ ಡೋವಾಲ ಇವರನ್ನು ಭೇಟಿಯಾದರು.
Focus on terror in United States, Russia talks with India https://t.co/Wjxf3JqjYz
— Hindustan Times (@HindustanTimes) September 9, 2021
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump