
ರಾಮನಾಥಿ (ಗೋವಾ) – ಹಿಂದೂ ಹೊಸ ವರ್ಷದ ಆರಂಭದ ಸಂದರ್ಭದಲ್ಲಿ, ಅಂದರೆ ಯುಗಾದಿ ಸಂದರ್ಭದಲ್ಲಿ, ಇಲ್ಲಿನ ಸನಾತನದ ಆಶ್ರಮದಲ್ಲಿ ಮಾರ್ಚ್ 30 ರಂದು ಬ್ರಹ್ಮಧ್ವಜ ಪೂಜೆಯನ್ನು ಮಾಡಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಸೂರ್ಯೋದಯದ ಸಮಯದಲ್ಲಿ, ಮಂಗಳಕರ ವಾತಾವರಣದಲ್ಲಿ, ವಿಧಿ ವಿಧಾನಗಳ ಪ್ರಕಾರ ಬ್ರಹ್ಮಧ್ವಜ ಪೂಜೆಯ ನಂತರ ಪಂಚಾಂಗಸ್ಥ ಗಣಪತಿ ಪೂಜೆ ಮತ್ತು ನೂತನ ಸಂವತ್ಸರ ಫಲಶ್ರವಣ (ಹೊಸ ವರ್ಷವು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಗೆ ಇರುತ್ತದೆ ಎಂಬುದರ ಮಾಹಿತಿಯನ್ನು ಆಲಿಸುವುದು) ಮಾಡಲಾಯಿತು. ಸನಾತನದ ಪುರೋಹಿತ ಪಾಠಶಾಲೆಯ ಪುರೋಹಿತರಾದ ಶ್ರೀ ಸಿದ್ದೇಶ ಕರಂದೀಕರ ಅವರು ಬ್ರಹ್ಮಧ್ವಜವನ್ನು ಪೂಜಿಸಿದರು. ಈ ಸಂದರ್ಭದಲ್ಲಿ, ‘ಹೇ ಬ್ರಹ್ಮದೇವ, ನೀನು ನಮ್ಮೆಲ್ಲಾ ಸಾಧಕರಿಗೆ ಸಾಧನೆ ಮಾಡಲು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಶಕ್ತಿ, ಬುದ್ಧಿ, ಚೈತನ್ಯ ಮತ್ತು ಆಧ್ಯಾತ್ಮಿಕ ಬಲವನ್ನು ನೀಡಬೇಕು’ ಎಂದು ಪ್ರಾರ್ಥಿಸಲಾಯಿತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ