ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‍ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ’, ಇತ್ಯಾದಿ ಅನೇಕ ಕೆಟ್ಟ ಅನುಭವಗಳನ್ನು ಅನೇಕ ಜನರು ಪಡೆದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ. ಈ ಔಷಧಿಗಳು ಬೇಗನೆ ಉಪಲಬ್ಧವಾಗಲಿದೆ. ಈ ಔಷಧಗಳ ಕುರಿತು ಮಾಹಿತಿಯನ್ನು ನಾವು ಒಂದೊಂದಾಗಿ ತಿಳಿದುಕೊಳ್ಳುವವರಿದ್ದೇವೆ.

ಸನಾತನದ ಪುನರ್ನವಾ ಚೂರ್ಣ

೯ ಅ. ಗುಣಧರ್ಮ ಮತ್ತು ಉಪಯೋಗ : ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ಅದಕ್ಕೆ ‘ಪುನರ್ನವಾ’ ಎಂದು ಹೇಳುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ. ರೋಗಗಳಿಗೆ ಇದರ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಗಳಿಗೆ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಯಂತೆ ಔಷಧವನ್ನು ತೆಗೆದುಕೊಳ್ಳಬೇಕು.

೧೦. ಸನಾತನ ಬ್ರಾಹ್ಮಿ ಚೂರ್ಣ

೧೦ ಅ. ಗುಣಧರ್ಮ ಮತ್ತು ಉಪಯೋಗ : ಈ ಔಷಧ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಿದೆ. ರೋಗಗಳಲ್ಲಿ ಇದರ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಯಿಂದಲೆ ಔಷಧವನ್ನು ತೆಗೆದುಕೊಳ್ಳಬೇಕು.

೧೧. ಸನಾತನ ಶತಾವರಿ ವಟಿ (ಮಾತ್ರೆ)

೧೧ ಅ. ಉಪಯೋಗ : ಇದು ಆಯುರ್ವೇದದಲ್ಲಿನ ಒಂದು ಉತ್ತಮವಾದ ಶಕ್ತಿವರ್ಧಕ (ಟಾನಿಕ್) ಔಷಧವಾಗಿದೆ. ರೋಗಗಳಲ್ಲಿ ಇದರ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಕ್ಕನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧವನ್ನು ವೈದ್ಯರ ಸಲಹೆಗನುಸಾರವೆ ತೆಗೆದುಕೊಳ್ಳಬೇಕು.

೧೧ ಆ. ಸೂಚನೆ : ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.

೧೨. ಸನಾತನ ತ್ರಿಫಲಾ ಗುಗ್ಗುಲು (ಮಾತ್ರೆ)

೧೨ ಅ. ಗುಣಧರ್ಮ ಮತ್ತು ಉಪಯೋಗ : ಈ ಔಷಧವು ಶರೀರದಲ್ಲಿನ ಬೆವರು ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ರೋಗಗಳಲ್ಲಿ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧವನ್ನು ವೈದ್ಯರ ಸಲಹೆಗನುಸಾರವೆ ತೆಗೆದುಕೊಳ್ಳಬೇಕು.

೧೨ ಆ. ಸೂಚನೆ : ಮಾತ್ರೆಗಳನ್ನು ಜಗಿದು ಸೇವಿಸಿದರೆ ಅಥವಾ ಪುಡಿ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುತ್ತದೆ.

ಮೇಲಿನ ಎಲ್ಲ ಔಷಧಗಳಿಗೆ ಸಾಮಾನ್ಯ ಸೂಚನೆ : ೩ ರಿಂದ ೭ ವರ್ಷದ ಮಕ್ಕಳಿಗೆ  ಹಿರಿಯರಿಗೆ ಹೇಳಿರುವುದರ ಕಾಲು ಭಾಗ ಮತ್ತು ೮ ರಿಂದ ೧೪ ವರ್ಷಗಳ ಮಕ್ಕಳಿಗೆ ಅರ್ಧ ಭಾಗ ಔಷಧವನ್ನು ನೀಡಬೇಕು.

-ವೈದ್ಯ ಮೇಘರಾಜ ಪರಾಡಕರ್, ಸನಾತನ ಆಶ್ರಮ, ರಾಮನಾಥ ಗೋವಾ. (೧೧.೬.೨೦೨೧ )

(ಮುಂದುವರಿಯುವುದು)