
ಕೊರೊನಾದ ಮೂರನೆಯ ಅಲೆಯು ಚಿಕ್ಕ ಮಕ್ಕಳ ದೃಷ್ಟಿಯಿಂದ ಹೆಚ್ಚು ಅಪಾಯಕಾರಿಯಾಗಿರುವ ಸಾಧ್ಯತೆ ಇದೆ. ಈ ಕಾಲದಲ್ಲಿ ಚಿಕ್ಕ ಮಕ್ಕಳ ಕಾಳಜಿಯನ್ನು ಯಾವ ರೀತಿ ತೆಗೆದುಕೊಳ್ಳಬಹುದು, ಎಂದು ಕೋಟಾ (ರಾಜಸ್ಥಾನ)ದ ವೈದ್ಯರಾದ ಮನೋಜ ಶರ್ಮಾ ಇವರು ವಿಡಿಯೋದ ಮಾಧ್ಯಮದಿಂದ ಹೇಳಿದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
೧. ಬೆಳಗ್ಗೆ-ಸಾಯಂಕಾಲ ನಿಯಮಿತವಾಗಿ ದೇಶಿ ಹಸುವಿನ ತುಪ್ಪ ಅಥವಾ ಬಾದಾಮಿಯ ತೈಲವನ್ನು ಬೆಚ್ಚಗೆ ಮಾಡಿ ೨-೩ ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಮಕ್ಕಳ ಪ್ರಕೃತಿ ನಾಜೂಕಾಗಿರುವುದರಿಂದ ಅವರಿಗೆ ಅಣು ತೈಲ ಅಥವಾ ಸಾಸಿವೆ ಎಣ್ಣೆ ಇವುಗಳನ್ನು ಬಳಸಬಾರದು.
೨. ಎರಡು ಚಮಚ ಬೆಚ್ಚಗೆ ಮಾಡಿದ ಹಸುವಿನ ತುಪ್ಪದಲ್ಲಿ ೨ ಚಿಟಿಕೆಯಷ್ಟು ಸೈಂಧವ ಲವಣವನ್ನು ಹಾಕಿ ಅದರಿಂದ ಎದೆ ಮತ್ತು ಬೆನ್ನು ಇವುಗಳ ಮೇಲೆ ಹಗುರವಾಗಿ ಮಾಲೀಶ ಮಾಡಬೇಕು. ಇದರಿಂದ ಫುಫ್ಫಸಗಳ ಕ್ಷಮತೆಯು ಹೆಚ್ಚಾಗಿ ಕಫವಿದ್ದರೆ ಅದು ಕಡಿಮೆಯಾಗಲು ಸಹಾಯವಾಗುತ್ತದೆ. ಈ ಉಪಾಯವನ್ನು ರಾತ್ರಿ ಮಲಗುವಾಗ ಮಾಡಬೇಕು.
೩. ಚಿಕ್ಕ ಮಕ್ಕಳಿಗೆ ಬಿಸಿ ಹಾಲಿನಲ್ಲಿ ಅರಿಶಿಣ, ಹಸಿ ಶುಂಠಿ ಅಥವಾ ಒಣ ಶುಂಠಿಯನ್ನು ಹಾಕಿ ಸಾಧ್ಯವಾದರೆ ಹಗಲಿನಲ್ಲಿ ಕುಡಿಯಲು ಕೊಡಬೇಕು. ಈ ಘಟಕಗಳಿಂದ ಹಾಲು ಚೆನ್ನಾಗಿ ಜೀರ್ಣವಾಗಿ ಹೊಸ ಕಫವು ತಯಾರಾಗುವ ಪ್ರಕ್ರಿಯೆಯು ನಿಲ್ಲುತ್ತದೆ.
೪. ಮಕ್ಕಳಿಗೆ ಸ್ನಾನ ಮಾಡುವ ೩೦ ನಿಮಿಷಗಳ ಮೊದಲು ಸಾಸಿವೆ ಅಥವಾ ಎಳ್ಳೆಣ್ಣೆಯಿಂದ ಮಾಲೀಶ ಮಾಡಬೇಕು.
ಮೇಲಿನ ಉಪಾಯಗಳನ್ನು ಚಿಕ್ಕ ಮಕ್ಕಳೊಂದಿಗೆ ಇತರರೂ ಮಾಡಬಹುದು.
ಟಿಪ್ಪಣಿ : ಎಲ್ಲಿ ತುಪ್ಪ ಅಥವಾ ಸಾಸಿವೆ ಎಣ್ಣೆಯೆಂದು ಹೇಳಲಾಗಿದೆಯೋ, ಅಲ್ಲಿ ಅದು ಸಿಗದಿದ್ದರೆ, ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಬೇಸಿಗೆ ದಿನಗಳಲ್ಲಿ ಉಷ್ಣತೆಯು ಹೆಚ್ಚಾಗಿರುತ್ತದೆ, ಕೊಬ್ಬರಿ ಎಣ್ಣೆಯು ತಂಪಾಗಿರುವುದರಿಂದ ಅದನ್ನು ಬಳಸಬೇಕು. ಹಾಗೆಯೇ ಕೊಬ್ಬರಿ ಎಣ್ಣೆಯಿಂದ ಜಂತುಗಳು ಸಾಯುತ್ತವೆ, ಎಂದು ಸಾಬೀತಾಗಿದೆ.
– ವೈದ್ಯ ಮನೋಜ ಶರ್ಮಾ, ಕೋಟಾ, ರಾಜಸ್ಥಾನ.
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಹಂತಾ ವೈರಸ್ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಆತಂಕ!
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಲೋಕಸಭೆಯಲ್ಲಿ ‘ನಾರಿಶಕ್ತಿ ವಂದನ’ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಚರ್ಚೆ ಆರಂಭ