
ಕಂದಹಾರ (ಅಫ್ಘಾನಿಸ್ತಾನ) – ಭಾರತೀಯ ವಾರ್ತಾಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿಯ ಸಾವಿಗೆ ನಾವು ಕಾರಣಕರ್ತರಲ್ಲ, ಎಂದು ಅಫ್ಘಾನಿಸ್ತಾನದ ತಾಲಿಬಾನ್ (‘ತಾಲಿಬ’ನ ಬಹುವಚನ ‘ತಾಲಿಬಾನ.’ ‘ತಾಲಿಬ’ನ ಅರ್ಥ ‘ಜ್ಞಾನ ಸಿಗಲು ಅಪೇಕ್ಷೆ ಪಡುವ ಹಾಗೂ ಇಸ್ಲಾಮಿ ಕಟ್ಟರವಾದಿಗಳ ಮೇಲೆ ನಂಬಿಕೆ ಇಡುವ ವಿದ್ಯಾರ್ಥಿ’, ಎಂದಾಗಿದೆ.) ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ವಕ್ತಾರ ಜಬಿಉಲ್ಲಾಹ ಮುಜಾಹಿದ್ ಇವನು ಹೇಳಿದ್ದಾನೆ. ಜುಲೈ ೧೬ ರಂದು ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರದ ವಾರ್ತಾಛಾಯಾಚಿತ್ರವನ್ನು ಮಾಡುತ್ತಿರುವಾಗ ತಾಲಿಬಾನಿಗಳಿಂದ ಆತನ ಹತ್ಯೆಯಾಗಿತ್ತು. ಈ ಆರೋಪವನ್ನು ತಾಲಿಬಾನ್ ಅಲ್ಲಗಳೆದಿದೆ. ದಾನಿಶ ಅವರ ಶವವನ್ನು ಜುಲೈ ೧೬ ರಂದು ಸಂಜೆ ೫ ಗಂಟೆ ಸುಮಾರಿಗೆ ‘ಇಂಟರನ್ಯಾಶನಲ್ ಕಮಿಟಿ ಆಫ್ ರೆಡ ಕ್ರಾಸ್’ಗೆ ಒಪ್ಪಿಸಲಾಯಿತು.
#Taliban denies role in death of Indian photojournalist #DanishSiddiqui: Reporthttps://t.co/xqNizmBXSA
— Zee News English (@ZeeNewsEnglish) July 17, 2021
ಮುಜಾಹಿದನು ತನ್ನ ಮಾತನ್ನು ಮುಂದುವರೆಸುತ್ತಾ, ಸಿದ್ಧಿಕಿಯು ನಮ್ಮ ಪ್ರದೇಶಕ್ಕೆ ಬಂದಿರುವ ಮಾಹಿತಿಯನ್ನು ನಮಗೆ ನೀಡಿರಲಿಲ್ಲ. ಆತ ಯಾರ ಗುಂಡೇಟಿನಿಂದ ಮೃತಪಟ್ಟಿದ್ದಾನೆಂಬ ಬಗ್ಗೆ ನಮಲ್ಲಿ ಮಾಹಿತಿ ಇಲ್ಲ. ಯುದ್ದ ನಡೆಯುತ್ತಿರುವ ಪ್ರದೇಶದಲ್ಲಿ ಓರ್ವ ಪತ್ರಕರ್ತ ಬಂದರೆ ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅವರ ಸಾವಿನ ಬಗ್ಗೆ ನಮಗೆ ಸಂತಾಪವಿದೆ ಎಂದು ಹೇಳಿದ್ದಾನೆ. ಸಿದ್ಧಿಕಿಯು ಅಫ್ಘಾನಿಸ್ತಾನೀ ಸೈನಿಕರ ಹಾಗೂ ತಾಲಿಬಾನಿ ಭಯೋತ್ಪಾದಕರ ಚಕಮಕಿಯಲ್ಲಿ ಸಾವನ್ನಪ್ಪಿದನು ಎಂದು ಹೇಳಲಾಗುತ್ತಿದೆ; ಆದರೆ ಕೆಲವರು ‘ಆತನನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ’, ಎಂದು ಹೇಳುತ್ತಿದ್ದಾರೆ.
ದೆಹಲಿ: ಹಳೇ ವೈಷಮ್ಯದ ಹಿನ್ನೆಲೆ: ೧೭ ವರ್ಷದ ಹಿಂದೂ ಹುಡುಗನ ಹತ್ಯೆ
ಜೈಪುರದಲ್ಲಿ ಭಾಜಪ ನಾಯಕನ ಶಿರಚ್ಛೇದ ಮಾಡಿ ಬರ್ಬರ ಹತ್ಯೆ
ನಲಬಾಡಿ (ಅಸ್ಸಾಂ) ದಲ್ಲಿ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ!
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
ಸ್ವಿಟ್ಜರ್ಲ್ಯಾಂಡ್ ನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ಇರಿತದ ಮೂಲಕ ಭಯೋತ್ಪಾದಕ ದಾಳಿ: 3 ಜನರಿಗೆ ಗಾಯ