
ಕಂದಹಾರ (ಅಫ್ಘಾನಿಸ್ತಾನ) – ಭಾರತೀಯ ವಾರ್ತಾಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿಯ ಸಾವಿಗೆ ನಾವು ಕಾರಣಕರ್ತರಲ್ಲ, ಎಂದು ಅಫ್ಘಾನಿಸ್ತಾನದ ತಾಲಿಬಾನ್ (‘ತಾಲಿಬ’ನ ಬಹುವಚನ ‘ತಾಲಿಬಾನ.’ ‘ತಾಲಿಬ’ನ ಅರ್ಥ ‘ಜ್ಞಾನ ಸಿಗಲು ಅಪೇಕ್ಷೆ ಪಡುವ ಹಾಗೂ ಇಸ್ಲಾಮಿ ಕಟ್ಟರವಾದಿಗಳ ಮೇಲೆ ನಂಬಿಕೆ ಇಡುವ ವಿದ್ಯಾರ್ಥಿ’, ಎಂದಾಗಿದೆ.) ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ವಕ್ತಾರ ಜಬಿಉಲ್ಲಾಹ ಮುಜಾಹಿದ್ ಇವನು ಹೇಳಿದ್ದಾನೆ. ಜುಲೈ ೧೬ ರಂದು ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರದ ವಾರ್ತಾಛಾಯಾಚಿತ್ರವನ್ನು ಮಾಡುತ್ತಿರುವಾಗ ತಾಲಿಬಾನಿಗಳಿಂದ ಆತನ ಹತ್ಯೆಯಾಗಿತ್ತು. ಈ ಆರೋಪವನ್ನು ತಾಲಿಬಾನ್ ಅಲ್ಲಗಳೆದಿದೆ. ದಾನಿಶ ಅವರ ಶವವನ್ನು ಜುಲೈ ೧೬ ರಂದು ಸಂಜೆ ೫ ಗಂಟೆ ಸುಮಾರಿಗೆ ‘ಇಂಟರನ್ಯಾಶನಲ್ ಕಮಿಟಿ ಆಫ್ ರೆಡ ಕ್ರಾಸ್’ಗೆ ಒಪ್ಪಿಸಲಾಯಿತು.
#Taliban denies role in death of Indian photojournalist #DanishSiddiqui: Reporthttps://t.co/xqNizmBXSA
— Zee News English (@ZeeNewsEnglish) July 17, 2021
ಮುಜಾಹಿದನು ತನ್ನ ಮಾತನ್ನು ಮುಂದುವರೆಸುತ್ತಾ, ಸಿದ್ಧಿಕಿಯು ನಮ್ಮ ಪ್ರದೇಶಕ್ಕೆ ಬಂದಿರುವ ಮಾಹಿತಿಯನ್ನು ನಮಗೆ ನೀಡಿರಲಿಲ್ಲ. ಆತ ಯಾರ ಗುಂಡೇಟಿನಿಂದ ಮೃತಪಟ್ಟಿದ್ದಾನೆಂಬ ಬಗ್ಗೆ ನಮಲ್ಲಿ ಮಾಹಿತಿ ಇಲ್ಲ. ಯುದ್ದ ನಡೆಯುತ್ತಿರುವ ಪ್ರದೇಶದಲ್ಲಿ ಓರ್ವ ಪತ್ರಕರ್ತ ಬಂದರೆ ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅವರ ಸಾವಿನ ಬಗ್ಗೆ ನಮಗೆ ಸಂತಾಪವಿದೆ ಎಂದು ಹೇಳಿದ್ದಾನೆ. ಸಿದ್ಧಿಕಿಯು ಅಫ್ಘಾನಿಸ್ತಾನೀ ಸೈನಿಕರ ಹಾಗೂ ತಾಲಿಬಾನಿ ಭಯೋತ್ಪಾದಕರ ಚಕಮಕಿಯಲ್ಲಿ ಸಾವನ್ನಪ್ಪಿದನು ಎಂದು ಹೇಳಲಾಗುತ್ತಿದೆ; ಆದರೆ ಕೆಲವರು ‘ಆತನನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ’, ಎಂದು ಹೇಳುತ್ತಿದ್ದಾರೆ.
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು
ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ