ಚಿಕಿತ್ಸೆಯ ಸಮಯದಲ್ಲಿ ಕೊರೊನಾ ಪೀಡಿತನು ಸಾವನ್ನಪ್ಪಿದ್ದರಿಂದ ಮತಾಂಧ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ !

೨೪ ಜನರ ಬಂಧನ ಓರ್ವ ಮಹಿಳೆಯೂ ಸಹಭಾಗ

  • ಬಿಜೆಪಿಯ ರಾಜ್ಯದಲ್ಲಿ ಇಂತಹ ಮತಾಂಧರು ಮತ್ತೊಮ್ಮೆ ಇಂತಹ ಉದ್ಧಟತನ ತೋರಿಸಬಾರದು; ಆದ್ದರಿಂದ, ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕು !
  • ಈ ಘಟನೆಯ ಬಗ್ಗೆ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್, ಕಮ್ಯುನಿಸ್ಟ ಪಕ್ಷ, ಸಮಾಜವಾದಿ ಪಕ್ಷ, ಬಿಎಸ್ಪಿ ಮುಂತಾದ ರಾಜಕೀಯ ಪಕ್ಷಗಳು ಹಾಗೂ ಪ್ರಗತಿ(ಅಧೋಗತಿ)ಪರರು ಏಕೆ ಮೌನವಾಗಿದ್ದಾರೆ ?

ಗೌಹಟಿ (ಅಸ್ಸಾಂ) – ಅಸ್ಸಾಂನ ಹೊಜೈ ಜಿಲ್ಲೆಯ ಒಂದು ಕೋವಿಡ್ ಆರೈಕೆ ಕೇಂದ್ರದಲ್ಲಿ ಕೊರೋನಾ ಪೀಡಿತ ರೋಗಿಯೊಬ್ಬರು ಮೃತನಾದಾಗ ಆತನ ಮತಾಂಧ ಕುಟುಂಬಸ್ಥರು ಅಲ್ಲಿಯ ಡಾ. ಸೆಜುಕುಮಾರ ಸೇನಾಪತಿಯವರ ಕೇಂದ್ರಕ್ಕೆ ನುಗ್ಗಿ ಥಳಿಸಿ ಕೇಂದ್ರವನ್ನು ಧ್ವಂಸಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಹಮ್ಮದ್ ಕಮರುದ್ದೀನ್, ಮೊಹಮ್ಮದ್ ಜೈನಲುದ್ದೀನ್, ರೆಹನುದ್ದೀನ್, ಸೈದುಲ್ ಆಲಂ, ರಹೀಮುದ್ದೀನ್, ರಾಜುಲ್ ಇಸ್ಲಾಂ, ತೈಬರ್ ರೆಹಮಾನ್ ಮತ್ತು ಸಾಹಿಲ್ ಇಸ್ಲಾಂ ಸೇರಿದಂತೆ ೨೪ ಮಂದಿ ಮತಾಂಧರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾಳೆ. ಈ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಘಟನೆಯ ನಂತರ, ಇಂಡಿಯನ ಮೆಡಿಕಲ ಅಸೋಸಿಯೇಶನ ಇದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದು, ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಗಮನ ಹರಿಸಿ ಜೊತೆಗೆ ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದೆ.