
ಕಳೆದ ವರ್ಷ ಕೊರೋನಾ ಮಹಾಮಾರಿಯಿಂದ ಅನೇಕ ತಿಂಗಳು ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಣ ಮಾಡಿರಲಿಲ್ಲ. ಆ ಸಮಯದಲ್ಲಿ ಸನಾತನದ ಗ್ರಂಥ, ಈ ಹಿಂದೆ ಪ್ರಕಾಶಿಸಲಾಗಿದ್ದ ‘ಸನಾತನ ಪ್ರಭಾತ ನಿಯತಕಾಲಿಕಗಳೇ ಸಾಧಕರಿಗೆ ಆಧಾರವಾಗಿತ್ತು. ಈಗಲೂ ಕೊರೋನಾ ಮಹಾಮಾರಿಯ ಭೀಕರತೆಯು ಹೆಚ್ಚಾಗುತ್ತಲೇ ಇದೆ. ಇದರಿಂದ ಮುಂದಿನ ಆಪತ್ಕಾಲ ಹೇಗಿರಬಹುದು ಎಂಬುದರ ಬಗ್ಗೆ ನಮಗೆ ಕಲ್ಪನೆ ಬರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ಬಣ್ಣದ ವಿಶೇಷಾಂಕವನ್ನು ಅತ್ಯುತ್ತಮ ದರ್ಜೆಯ ಕಾಗದದಲ್ಲಿ ಮುದ್ರಿಸಲಾಗಿದೆ. ಇದರಿಂದ ಆಪತ್ಕಾಲದ ಮುಂದಿನ ಕೆಲವು ವರ್ಷಗಳ ಕಾಲ ಸಾಧಕರು ಅದನ್ನು ಸಂಗ್ರಹಿಸಿಡಬಹುದು. ಈ ವಿಶೇಷಾಂಕ ಉಪಯೋಗಿಸುವಾಗ ಮಾಡುವಾಗ ಏನೆಲ್ಲ ಕಾಳಜಿ ವಹಿಸಬೇಕು, ಇದರ ಬಗ್ಗೆ ಕೆಲವು ಸೂಚನೆಗಳನ್ನು ಇಲ್ಲಿ ನೀಡಲಾಗುತ್ತಿದೆ.
೧. ವಿಶೇಷಾಂಕವನ್ನು ಓದಿದ ನಂತರ ಅದನ್ನು ಪ್ಲಾಸ್ಟಿಕ್ನ ಗಾಳಿಯಾಡದ ಚೀಲದಲ್ಲಿ ಇಡಬೇಕು.
೨. ಈ ಸಂಚಿಕೆಯನ್ನು ವರ್ಷಕ್ಕೊಮ್ಮೆ ೧೦ ನಿಮಿಷಗಳ ಕಾಲ ಬಿಸಿಲಿನಲ್ಲಿ ಇಡಬೇಕು. ನಂತರ ಅದನ್ನು ಕೂಡಲೇ ಚೀಲದಲ್ಲಿ ಇಡದೇ ಅದು ಸಂಪೂರ್ಣವಾಗಿ ತಣ್ಣಗಾದ ನಂತರವೇ ಚೀಲದಲ್ಲಿಡಬೇಕು.
೩. ಈ ವಿಶೇಷಾಂಕದಲ್ಲಿ ಸಾಧಕರಿಗೆ ಸಹಜವಾಗಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.
೪. ಸಂಚಿಕೆಯನ್ನು ಸಂಗ್ರಹದಲ್ಲಿಡುವಾಗ ಅದನ್ನು ತುಂಬಾ ಮಡಚದಿರಿ, ಮಡಚುವ ಸ್ಥಳದಲ್ಲಿ ಅದು ಬಹಳ ಬೇಗ ಹಾಳಾಗುತ್ತದೆ.
ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !