ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !

೧೧.೫.೨೦೧೯ ರಂದು ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ೭೭ ನೇ ಜನ್ಮೋತ್ಸವ ಸಮಾರಂಭವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಪೂ. (ಡಾ.)   ಉಲಗನಾಥನ ಇವರ ಮಾಧ್ಯಮದಿಂದ ಮಯನ ಮಹರ್ಷಿಯವರು ನೀಡಿದ ಆಜ್ಞೆಗನುಸಾರ ಈ ಸಮಾರಂಭದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸನಾತನದ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡಿದರು. ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆಯವರು ಬಿಡಿಸಿದ ಪರಾತ್ಪರ ಗುರುಗಳ ಸೂಕ್ಷ್ಮಚಿತ್ರ ಮತ್ತು ಅದರ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಸೌ. ಯೊಯಾ ವಾಲೆ

೧. ವಿಷ್ಣುತತ್ತ್ವ

೧ ಅ. ವಿಷ್ಣುತತ್ತ್ವದ ಪ್ರವಾಹವು ಆಶೀರ್ವಾದದ ಸ್ವರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಆಕರ್ಷಿತವಾಗುವುದು

೧ ಆ. ವಿಷ್ಣುತತ್ತ್ವದ ನಿರ್ಗುಣ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞಾಚಕ್ರದಲ್ಲಿ ತೇಜಸ್ವೀ ಸ್ವರೂಪದಲ್ಲಿ ಕಾರ್ಯನಿರತವಾಗುವುದು : ‘ಈಶ್ವರೀ ರಾಜ್ಯವನ್ನು ಸ್ಥಾಪಿಸುವುದು ಪರಾತ್ಪರ ಗುರು ಡಾ. ಆಠವಲೆಯವರ ಸಮಷ್ಟಿ ಧ್ಯೇಯವಾಗಿದೆ. ಈ ಧ್ಯೇಯವನ್ನು ಪೂರ್ಣಗೊಳಿಸಲು ಅವರ ಸಂಕಲ್ಪವು ಕಾರ್ಯನಿರತವಾಗಿರುವುದರಿಂದ ಹೀಗೆ ಆಯಿತು.

೧ ಇ. ಪರಾತ್ಪರ ಗುರು ಡಾ. ಆಠವಲೆಯವರ ದೇಹದ ಸುತ್ತಲು ವಿಷ್ಣುತತ್ತ್ವದ ಕವಚವು ಇರುವುದು : ಇದಕ್ಕೆ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವವಿರುವುದೇ ಕಾರಣವಾಗಿದೆ.

೧ ಈ. ವಿಷ್ಣುತತ್ತ್ವದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಮುಖದ ಸುತ್ತಲೂ ಕಾರ್ಯನಿರತವಾಗಿ ಪ್ರಕಾಶ ಸ್ವರೂಪದಲ್ಲಿ ಪ್ರಕ್ಷೇಪಿತವಾಗುವುದು

೧ ಉ. ವಿಷ್ಣುತತ್ತ್ವದ ವಲಯವು ವಾತಾವರಣದಲ್ಲಿ ಕಾರ್ಯನಿರತವಾಗಿ ಪ್ರಕ್ಷೇಪಿಸುವುದು : ಇದರಿಂದ ‘ನಾವು ಸಾಕ್ಷಾತ ವೈಕುಂಠ ಲೋಕದಲ್ಲಿ ಇದ್ದೇವೆ, ಎಂದು ಸಾಧಕರಿಗೆ ಅನುಭೂತಿ ಬರುತ್ತಿತ್ತು.

೨. ತಾರಕ ಶಕ್ತಿ

೨ ಅ. ತಾರಕ ಶಕ್ತಿಯ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಅನಾಹತ ಚಕ್ರದ ಬಳಿ ಕಾರ್ಯನಿರತವಾಗುವುದು

೨ ಆ. ತಾರಕ ಶಕ್ತಿಯ ಕಣಗಳು ಪರಾತ್ಪರ ಗುರು ಡಾ. ಆಠವಲೆಯವರಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವುದು : ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.

೩. ಸಗುಣ ಚೈತನ್ಯ

೩ ಅ. ಸಗುಣ ಚೈತನ್ಯದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಅನಾಹತ ಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗುವುದು.

೩ ಆ. ಸಗುಣ ಚೈತನ್ಯದ ವಲಯವು ಪ್ರಕಾಶಮಯ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುವುದು : ಸಾಧಕರಿಗೆ ಚೈತನ್ಯದ ಅನುಭೂತಿ ಸಿಗುವಂತಾಗಬೇಕೆಂದು ಹಾಗೆ ಆಯಿತು.

೪. ನಿರ್ಗುಣ ಚೈತನ್ಯ

೪ ಅ. ನಿರ್ಗುಣ ಚೈತನ್ಯದ ವಲಯವು ಪ್ರಕಾಶಮಯ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುವುದು

೫. ಆನಂದ

೫. ಅ. ಆನಂದದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಮುಖದಸುತ್ತಲೂ ತೇಜಸ್ವೀ ಸ್ವರೂಪದಲ್ಲಿ ಕಾರ್ಯನಿರತವಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು ನಿರ್ಗುಣಾವಸ್ಥೆಯಲ್ಲಿ ಇರುವುದರಿಂದ ಹಾಗಾಗುತ್ತದೆ.

೬. ಇತರ ಅಂಶಗಳು

೬ ಅ. ಪರಾತ್ಪರ ಗುರು ಡಾ. ಆಠವಲೆಯವರು ಸತತ ನಿರ್ಗುಣಾವಸ್ಥೆಯಲ್ಲಿರುತ್ತಾರೆ. ಆದ್ದರಿಂದ ಅವರು ಸ್ಥೂಲದಿಂದ ಅಲ್ಲಿದ್ದರೂ ಅವರ ಸ್ಥಳದಲ್ಲಿ ಕೇವಲ ಶ್ರೀಸತ್ಯನಾರಾಯಣ ದೇವರ ಅಸ್ತಿತ್ವವಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸ್ಥೂಲ ಹಾಗೂ ಸೂಕ್ಷ್ಮ ಈ ಎರಡೂ ಸ್ತರದಲ್ಲಿ ಸಹಾಯ ಮಾಡಲು ಎಲ್ಲಾ ದೇವತೆಗಳು ಸದಾ ಕಾಲ ತತ್ಪರರಾಗಿರುತ್ತಾರೆ.

೬ ಆ. ಶ್ರೀಸತ್ಯನಾರಾಯಣ ದೇವರು ಅಗತ್ಯಕ್ಕನುಸಾರ ಒಂದು ವಿಶಿಷ್ಟ ಶಕ್ತಿಯನ್ನು ನಿರ್ಮಿಸಬಲ್ಲರು. ಈ ಶಕ್ತಿಯಿಂದ ವ್ಯಕ್ತಿಗೆ ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಸದ್ಯದ ಕಲಿಯುಗದಲ್ಲೇ ಶ್ರೀಸತ್ಯನಾರಾಯಣ ದೇವರ ತತ್ತ್ವ(ಶಕ್ತಿ) ಕಾರ್ಯನಿರತವಾಗಿದೆ, ಇದು ಸಂಪೂರ್ಣ ಮನುಕುಲಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯಕ್ಕಾಗಿ ಈ ಸಮಾರಂಭದಲ್ಲಿ ಈ ಶಕ್ತಿಯು ಸೂಕ್ಷ್ಮದಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರತ್ತ ಹರಿಯಿತು.

ಇ. ಸಮಾರಂಭದ ಸಮಯದಲ್ಲಿ ಕು. ಶರ್ವರಿ ಕಾನಸ್ಕರ ಇವಳು ಪರಾತ್ಪರ ಗುರು ಡಾಕ್ಟರರ ಮುಂದೆ ನೃತ್ಯ ಮಾಡಿದಳು. ಈ ಸಮಯದಲ್ಲಿ ಅವಳಿಂದ ತುಂಬಾ ಪ್ರಮಾಣದಲ್ಲಿ ಭಾವವು ಪ್ರಕ್ಷೇಪಿತವಾಗುತ್ತಿತ್ತು. ಅವಳಲ್ಲಿರುವ ಭಾವದಿಂದ ಈ ಸಮಾರಂಭವನ್ನು ನೋಡುವ ಸಾಧಕರ ಭಾವವೂ ಜಾಗೃತವಾಗುತ್ತಿತ್ತು. ಇದರಿಂದಾಗಿ ‘ಪರಾತ್ಪರ ಗುರು ಡಾಕ್ಟರರ ಮುಂದೆ ನಾವೂ ಸಹ ನೃತ್ಯ ಮಾಡಬೇಕು, ಹೀಗೆ ಪ್ರತಿಯೊಬ್ಬ ಸಾಧಕರ ಮನಸ್ಸಿನಲ್ಲಿ ಉತ್ಕಟವಾದ ಇಚ್ಛೆ ಆಗಿತ್ತು. – ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೊಯಾ ವಾಲೆ (೬.೫.೨೦೨೦)

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ ಎಂದು ಹೇಳುತ್ತಾರೆ.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು