ಅಶ್ವಥ ಮರದ ಕೆಳಗೆ ಮಲಗುವುದರಿಂದ ಲಾಭವಾಗುತ್ತದೆ ಎಂದು ಹೇಳಿಕೊಳ್ಳಲಾಗುತ್ತಿದೆ !

ಶಹಜಹಾನಪುರ (ಉತ್ತರ ಪ್ರದೇಶ) – ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಸಂಖ್ಯೆಯಿಂದ ಆರೋಗ್ಯ ವ್ಯವಸ್ಥೆಯು ಹದಗೆಡುತ್ತಿದೆ. ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಶಹಜಹಾನ್ಪುರದ ತಿಲ್ಹಾರ್ನಲ್ಲಿ ಆಮ್ಲಜನಕ ಸಿಲಿಂಡರ್ ಗಳು ಲಭ್ಯವಿಲ್ಲದ ಕಾರಣ ಬಳಲುತ್ತಿದ್ದ ೪-೫ ಜನರು ಅಶ್ವಥ ಮರದ ಕೆಳಗೆ ಹೋಗಿ ಮಲಗಿದರು. ಈ ರೋಗಿಗಳು ಅಶ್ವಥ ಮರದ ಕೆಳಗೆ ಮಲಗಿದ್ದನ್ನು ನೋಡಿ, ಇತರರಿಂದಲೂ ಸಹ ಅಲ್ಲಿ ಜನದಟ್ಟಣೆಯಾಗತೊಡಗಿತು. ಈ ಎಲ್ಲಾ ಆಮ್ಲಜನಕ ಪರೀಕ್ಷಾ ವರದಿಗಳು ನಕಾರಾತ್ಮಕವಾಗಿ ಬಂದಿದೆ; ಆದರೆ ಸೋಂಕಿನ ಲಕ್ಷಣಗಳು ಈ ಜನರಲ್ಲಿ ಕಂಡು ಬರುತ್ತಿದೆ. ನಕಾರಾತ್ಮಕ ವರದಿಗಳ ಕಾರಣ ಆಸ್ಪತ್ರೆಗಳು ಆವರನ್ನು ದಾಖಲಿಸಲು ನಿರಾಕರಿಸಿ ಮನೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ಉಸಿರಾಡಲು ತೊಂದರೆಯಾಯಿತು. ನಂತರ ಆಮ್ಲಜನಕದ ಸಿಲಿಂಡರ್ ಗಾಗಿ ಹುಡುಕಾಟವು ಪ್ರಾರಂಭವಾಯಿತು; ಆದರೆ ಎಲ್ಲಿಯೂ ಆಮ್ಲಜನಕ ಸಿಲಿಂಡರ್ ಲಭ್ಯವಿರಲಿಲ್ಲ. ಆದ್ದರಿಂದ ಅವರು ಅಶ್ವಥ ಮರದ ಕೆಳಗೆ ಆಮ್ಲಜನಕವನ್ನು ಪಡೆಯಲು ಓಡಿದರು. ಅಶ್ವಥ ಮರವು ದಿನದ ೨೪ ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದರಿಂದ ಅದರ ಲಾಭ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ.
ಈ ಜನರನ್ನು ಕೇಳಿದಾಗ, ಅವರು ಮನೆಯಲ್ಲಿ ಉಸಿರಾಡಲು ತೊಂದರೆಯಾಗುತ್ತಿತ್ತು; ಆದರೆ ಅಶ್ವಥ ಮರದ ಕೆಳಗೆ ಬಂದ ನಂತರ ಆರಾಮವೆನಿಸುತ್ತಿದೆ ಎಂದು ಹೇಳಿದರು. ಈ ರೀತಿಯ ಮಾಹಿತಿ ಸಿಕ್ಕಿದ ತಕ್ಷಣ, ಅಶ್ವಥ ಮರದ ಕೆಳಗೆ ಮಲಗಿರುವ ರೋಗಿಗಳನ್ನು ನೋಡಲು ತಿಲಹರನ ಶಾಸಕ ರೋಶನಲಾಲ್ ಕೂಡ ಅಲ್ಲಿಗೆ ಬಂದರು. ನಂತರ ಅವರೆಲ್ಲರಿಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ರೋಶನಲಾಲ್ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
ಯಾರಾದರೂ ರಾಷ್ಟ್ರ ಮತ್ತು ಸಮಾಜಕ್ಕೆ ಅಪಾಯಕಾರಿಯಾದರೆ, ಅಹಿಂಸೆಯಲ್ಲ, ಹಿಂಸೆ ಅವಶ್ಯಕವಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !