ಈಗ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದ್ದರಿಂದ, ಇಂದೇ ಇದೇ ಕ್ಷಣ ಆಮ್ಲಜನಕವನ್ನು ಸರಬರಾಜು ಮಾಡಿ !
ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರೂ ಸೇರಿದಂತೆ ೮ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ !
ನವ ದೆಹಲಿ – ಈಗ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದೆ. ಈಗ ನಮಗೆ ಕಾರ್ಯಾಚರಣೆ ಬೇಕಾಗಿದೆ. ನೀವು ಈಗ ಎಲ್ಲ ವ್ಯವಸ್ಥೆಯನ್ನು ಮಾಡಲಿದ್ದೀರಿ. ಹೇಗಾದರೂ ಮಾಡಿ ದೆಹಲಿಗೆ ಇಂದು ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಒದಗಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶ ನೀಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ. ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಒಬ್ಬ ವೈದ್ಯರು ಸೇರಿದಂತೆ ಎಂಟು ರೋಗಿಗಳು ಸಾವನ್ನಪ್ಪಿದ್ದಾರೆ. ದೆಹಲಿಯ ಕೆಲವು ಆಸ್ಪತ್ರೆಗಳು ಆಮ್ಲಜನಕ ಪೂರೈಕೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಾಕಷ್ಟು ಪೂರೈಕೆಯಿಲ್ಲ ಎಂದು ಈ ರೋಗಿಗಳು ದೂರನ್ನು ನೀಡಿದ್ದಾರೆ. ಕೇಂದ್ರ ಸರಕಾರವು ಘೋಷಿಸಿದ ಸಂಗ್ರಹವನ್ನೂ ಸಹ ಸರಬರಾಜು ಮಾಡುತ್ತಿಲ್ಲ ಎಂದು ರಾಜ್ಯ ಸರಕಾರವು ಹೇಳಿದೆ. ಈ ವಿಷಯವನ್ನು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರತಿದಿನ ವಿಚಾರಣೆ ನಡೆಯುತ್ತಿದೆ.
ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಸರಬರಾಜು ಮಾಡಿ ಇಲ್ಲವೆ ನ್ಯಾಯಾಂಗ ನಿಂದನೆ ಎದುರಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ https://t.co/QnfmwMFw9y via @KannadaPrabha #oxygen #Delhi #contemptofcourt #DelhiHC
— kannadaprabha (@KannadaPrabha) May 1, 2021
ನ್ಯಾಯಾಲಯವು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಹೇಗಾದರೂ ಮಾಡಿ ಇಂದು ದೆಹಲಿಗೆ ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಬೇಕು ಎಂದು ನಾವು ಕೇಂದ್ರವನ್ನು ನಿರ್ದೇಶಿಸುತ್ತೇವೆ’ ಎಂದು ಹೇಳಿದೆ. ಈ ಉದ್ದೇಶಕ್ಕಾಗಿ ಟ್ಯಾಂಕರ್ಗಳನ್ನು ಒದಗಿಸುವ ಜವಾಬ್ದಾರಿಯೂ ಕೇಂದ್ರದ ಮೇಲಿದೆ. ಏಪ್ರಿಲ್ ೨೦ ರಂದು ಸರಕಾರವು ಆಮ್ಲಜನಕವನ್ನು ಪೂರೈಸಲು ನಿರ್ಧರಿಸಿತು; ಆದರೆ ಅಂದಿನಿಂದ ಇಂದಿನವರೆಗೂ ದೆಹಲಿಗೆ ಸಂಪೂರ್ಣ ಆಮ್ಲಜನಕ ಕೋಟಾ ಬಂದಿಲ್ಲ. ನಿಮಗೆ ಅಗತ್ಯಕ್ಕಿಂತ ಹೆಚ್ಚಿನ ಆಮ್ಲಜನಕವನ್ನು ಯಾರೂ ಕೇಳುವುದಿಲ್ಲ. ನಿಮಗೆ ಇಂದು ಸರಬರಾಜು ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ವಿಶ್ಲೇಷಣೆಯನ್ನು ಮೇ ೩ ರಂದು ನಾವು ಕೇಳುತ್ತೇವೆ ಎಂಬ ಶಬ್ದಗಳಲ್ಲಿ ನ್ಯಾಯಾಲಯ ಹೇಳಿದೆ.
ಸೈನ್ಯದ ಸಹಾಯ ತೆಗೆದುಕೊಳ್ಳಿ !
ನ್ಯಾಯಾಲಯವು, ನೀವು ಸೈನ್ಯದ ಸಹಾಯವನ್ನು ತೆಗೆದುಕೊಂಡರೆ, ಅವರು ತಮ್ಮ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಅವರು ತಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.
ದೆಹಲಿ ಜಿಮ್ಖಾನಾ ಕ್ಲಬ್ನ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ! – ದೆಹಲಿ ಹೈಕೋರ್ಟ್ಗೆ ಕೇಂದ್ರ ಸರಕಾರದ ಭರವಸೆ : Delhi Gymkhana Club
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಖಟ್ಲೆ (ಕೇಸ್) ಹಿಂಪಡೆಯಿರಿ, ಇಲ್ಲದಿದ್ದರೆ ನಿಮ್ಮ ಎರಡನೇ ಮಗನನ್ನೂ ಕೊಲ್ಲುತ್ತೇವೆ! – ಹಿಂದೂ ಕುಟುಂಬಕ್ಕೆ ಮುಸ್ಲಿಂರಿಂದ ಬೆದರಿಕೆ
ರಾಣಾ ಅಯ್ಯೂಬ್ ಆಕ್ಷೇಪಾರ್ಹ ಟ್ವೀಟ್: ‘ಎಕ್ಸ್’ ಕಾನೂನು ರಕ್ಷಣೆ ರದ್ದಾಗುವ ಸಾಧ್ಯತೆ – ಕೇಂದ್ರ ಸರಕಾರ
ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಪೋಸ್ಟ್ಗಳು ಅವಹೇಳನಕಾರಿ ಮತ್ತು ಕೋಮುವಾದಿ !
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy