
ಶ್ರೀಗುರುಗಳ ಮಹಿಮೆಯನ್ನು ಕೊಂಡಾಡಲು ಅವಕಾಶ ಸಿಗುವುದು ಶಿಷ್ಯನಿಗೆ ಪರಮಭಾಗ್ಯದ ವಿಷಯವಾಗಿದೆ ! ಸಮಾಜಕ್ಕೆ ಅವರ ಅಲೌಕಿಕ ಗುಣಗಳ ಪರಿಚಯವಾಗಬೇಕೆಂದು ಗುರುದೇವರ ದೈವೀ ಕಾರ್ಯವನ್ನು ಕೃತಜ್ಞತಾಭಾವದಿಂದ ಈ ಜನ್ಮೋತ್ಸವದ ವಿಶೇಷಾಂಕಗಳಲ್ಲಿ ಮಂಡಿಸುತ್ತಿದ್ದೇವೆ !
೧೩.೫.೨೦೨೦ ಈ ದಿನದಂದು ಪರಾತ್ಪರ ಗುರು ಡಾ. ಆಠವಲೆಯವರ ೭೮ ನೇ ಜನ್ಮೋತ್ಸವವಾಯಿತು. ಆ ಸಮಯದಲ್ಲಿ ಲಾಕ್ಡೌನ್ದಿಂದಾಗಿ ಸಂಚಿಕೆಯ ಮುದ್ರಣವಾಗಲಿಲ್ಲ; ಗುರುಕೃಪೆಯಿಂದಲೇ ಅದು ಈಗ ಅದರ ಮುದ್ರಣವಾಗುತ್ತಿದೆ.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಾತ್ಮಪ್ರಸಾರದ ಕಾರ್ಯವು ೨೯ ವರ್ಷಗಳಲ್ಲಿ ವಟವೃಕ್ಷವಾಯಿತು. ನೂರಾರು ಸಾಧಕರು ಕುಟುಂಬದ ತ್ಯಾಗ ಮಾಡಿ ಪೂರ್ಣವೇಳೆ ಧರ್ಮಪ್ರಸಾರವನ್ನು ಮಾಡುತ್ತಿದ್ದಾರೆ. ಪಾತರಗಿತ್ತಿಗಳು ಹೇಗೆ ಹೂವುಗಳ ಕಡೆಗೆ ಆಕರ್ಷಿತವಾಗುತ್ತವೆಯೋ, ಅದೇ ರೀತಿ ಜಿಜ್ಞಾಸುಗಳು ಅವರ ಬಳಿ ಬರುತ್ತಾರೆ. ಗುರುದೇವರು ಇವರೆಲ್ಲರಿಗೆ ತೋರಿಸಿದ ಅಪಾರ ಪ್ರೀತಿಯ ಕೆಲವು ಕ್ಷಣಮುತ್ತುಗಳನ್ನು ಈ ಸಂಚಿಕೆಯ ಮಾಧ್ಯಮದಿಂದ ಅನುಭವಿಸೋಣ !

ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !
ಸಾಧಕರೇ, ನಾಮಜಪಾದಿ ಉಪಾಯಗಳ ವಿಷಯದಲ್ಲಿ ಇದನ್ನು ಗಮನಿಸಿರಿ !
ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !
ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ
‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು
ಪರಾತ್ಪರ ಗುರು ಡಾ. ಆಠವಲೆಯವರು ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯವನ್ನು ಪಡೆಯಲು ಕೊಡುವುದು