
ಹರಿದ್ವಾರ, ಏಪ್ರಿಲ್ ೧೮ (ವರದಿ.) : ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು. ಅನೇಕ ಅಡಚಣೆಗಳ ನಂತರ ಕುಂಭಮೇಳ ನಡೆಯಿತು; ಆದರೆ ಭಕ್ತರು ಕುಂಭಮೇಳಕ್ಕೆ ಬರಲು ಹಲವು ತೊಂದರೆಗಳು ಎದುರಾಗುತ್ತಿವೆ. ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ, ಎಂದು ನೋಯ್ಡಾದ ಸಿದ್ಧಪೀಠ ಶಿವ ಸಾಯಿ ಶನಿಧಮ ಆಶ್ರಮದ ಶ್ರೀ ಪರಮೇಶ್ವರವರದಾಸ ಮಹಾರಾಜ ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ ಖಂಡತುಂಡವಾಗಿ ಪ್ರಶ್ನೆಯನ್ನು ಎತ್ತಿದರು. ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ನಡೆಯುತ್ತಿರುವ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ರಾಜ್ಯದ ಸಂಘಟಕ ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರದಾಸ ಮಹಾರಾಜ ಅವರನ್ನು ಭೇಟಿಯಾದಾಗ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಹಂತ ಜಗದೀಶ್ವರದಾಸ ಮಹಾರಾಜ ಅವರನ್ನೂ ಕೂಡಾ ಭೇಟಿಯಾದರು. ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರವರದಾಸ ಮಹಾರಾಜ ಮತ್ತು ಮಹಂತ ಜಗದೀಶ್ವರದಾಸ ಮಹಾರಾಜ ಇವರನ್ನು ‘ಸನಾತನ ಧರ್ಮಶಿಕ್ಷಣ ಹಾಗೂ ಹಿಂದೂ ರಾಷ್ಟ್ರ ಜಾಗೃತಿ ಕೇಂದ್ರ’ಕ್ಕೆ ಭೇಟಿ ನೀಡಲು ಆಮಂತ್ರಿಸಿದ್ದಾರೆ.
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !