
ಹರಿದ್ವಾರ, ಏಪ್ರಿಲ್ ೧೮ (ವರದಿ.) : ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು. ಅನೇಕ ಅಡಚಣೆಗಳ ನಂತರ ಕುಂಭಮೇಳ ನಡೆಯಿತು; ಆದರೆ ಭಕ್ತರು ಕುಂಭಮೇಳಕ್ಕೆ ಬರಲು ಹಲವು ತೊಂದರೆಗಳು ಎದುರಾಗುತ್ತಿವೆ. ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ, ಎಂದು ನೋಯ್ಡಾದ ಸಿದ್ಧಪೀಠ ಶಿವ ಸಾಯಿ ಶನಿಧಮ ಆಶ್ರಮದ ಶ್ರೀ ಪರಮೇಶ್ವರವರದಾಸ ಮಹಾರಾಜ ಅದು(ಕೊರೋನಾ) ಕುಂಭಮೇಳಕ್ಕೆ ಬರುತ್ತದೆಯೇ ಖಂಡತುಂಡವಾಗಿ ಪ್ರಶ್ನೆಯನ್ನು ಎತ್ತಿದರು. ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ನಡೆಯುತ್ತಿರುವ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ರಾಜ್ಯದ ಸಂಘಟಕ ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರದಾಸ ಮಹಾರಾಜ ಅವರನ್ನು ಭೇಟಿಯಾದಾಗ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಹಂತ ಜಗದೀಶ್ವರದಾಸ ಮಹಾರಾಜ ಅವರನ್ನೂ ಕೂಡಾ ಭೇಟಿಯಾದರು. ಶ್ರೀ. ಸುನಿಲ ಘನವಟ ಇವರು ಶ್ರೀ ಪರಮೇಶ್ವರವರದಾಸ ಮಹಾರಾಜ ಮತ್ತು ಮಹಂತ ಜಗದೀಶ್ವರದಾಸ ಮಹಾರಾಜ ಇವರನ್ನು ‘ಸನಾತನ ಧರ್ಮಶಿಕ್ಷಣ ಹಾಗೂ ಹಿಂದೂ ರಾಷ್ಟ್ರ ಜಾಗೃತಿ ಕೇಂದ್ರ’ಕ್ಕೆ ಭೇಟಿ ನೀಡಲು ಆಮಂತ್ರಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಕಾಶಿ, ಮಥುರಾ, ಸಂಭಲ್ ವಿವಾದ: ಸುಪ್ರೀಂ ಸಲಹೆಗೆ ಒಪ್ಪಿಗೆ ಇಲ್ಲ : Kashi Mathura Case
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !
ಶ್ರೀರಾಮಜನ್ಮಭೂಮಿ ಟ್ರಸ್ಟ್ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ
ಹುಡುಗಿಯರು ಹುಡುಗರ ಜೊತೆ ಓಡಿಹೋಗುತ್ತಾರೆ ಮತ್ತು ನಂತರ ಗರ್ಭಿಣಿಯಾಗುತ್ತಾರೆ, ಇಂತಹ ಪರಾಕ್ರಮಗಳನ್ನು ಮಾಡಬೇಡಿ!