ಕೊರೋನಾದಿಂದ ಸಾವನ್ನಪ್ಪಿದ ಲಕ್ಷ್ಮಣಪುರಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪತ್ನಿ

ಆಡಳಿತವರ್ಗದವರಿಂದಲೇ ನೀಡಲಾದ ಸಂಖ್ಯೆಯನ್ನು ಸಂಪರ್ಕಿಸಿದ ನಂತರವೂ ಯಾವುದೇ ಪ್ರತಿಕ್ರಿಯೆ ಸಿಗದ ಪರಿಣಾಮ !

  • ಬಿಜೆಪಿಯ ಆಡಳಿತದಲ್ಲಿರುವ ರಾಜ್ಯದಲ್ಲಿ ಇಂತಹ ಘಟನೆ ಸಂಭವಿಸುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !
  • ಓರ್ವ ನಿವೃತ್ತ ನ್ಯಾಯಾಧೀಶರ ಕೊರೋನಾ ಪೀಡಿತ ಹೆಂಡತಿಗೆ ಚಿಕಿತ್ಸೆ ಸಿಗದಿರುವಾಗ, ಸಾಮಾನ್ಯ ಜನರಿಗೆ ಬಗ್ಗೆ ಏನಾಗುತ್ತಿರಬಹುದು ಎಂಬುದರ ಬಗ್ಗೆ ಯೋಚಿಸದಿರುವುದು ಉತ್ತಮ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಒಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ಕೊರೋನಾ ಪೀಡಿತ ಹೆಂಡತಿಗೆ ಚಿಕಿತ್ಸೆ ಸಿಗಲು ಆಡಳಿತವನ್ನು ಸಂಪರ್ಕಿಸಿದ್ದರು. ಆಡಳಿತವರ್ಗದವರು ನೀಡಿದ ಸಂಖ್ಯೆಯನ್ನು ಸಂಪರ್ಕಿಸಿದ ನಂತರವೂ ಅವರಿಗೆ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ನಿವೃತ್ತ ನ್ಯಾಯಾಧೀಶರು ಬರೆದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ನಗರದ ಗೋಮಾತಿನಗರದಲ್ಲಿ ವಾಸಿಸುತ್ತಿರುವ ೬೭ ವರ್ಷದ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಮೇಶ ಚಂದ್ರಾ ಅವರು ಪತ್ರದಲ್ಲಿ, ‘ನಾನು ಏಪ್ರಿಲ್ ೧೪ ರಂದು ಬೆಳಿಗ್ಗೆ ೭ ಗಂಟೆಯಿಂದ ಆಡಳಿತವು ನೀಡಿದ ಸಂಖ್ಯೆಗೆ ಸಂಪರ್ಕಿಸುತ್ತಿದ್ದೆ; ಆದರೆ ಯಾರೂ ಕೂಡ ಔಷಧಿ ನೀಡಲು ಮನೆಗೆ ಬರಲಿಲ್ಲ ಅಥವಾ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆಯನ್ನು ಮಾಡಲಿಲ್ಲ. ಇದರಿಂದ ನನ್ನ ಪತ್ನಿ ಮಧು ಚಂದ್ರ ಇವರು ನಿಧನರಾದರು. ಸಧ್ಯ ಆಕೆಯ ದೇಹವನ್ನು ಸಾಗಿಸಲು ಯಾರೂ ಇಲ್ಲ. ದಯವಿಟ್ಟು ಸಹಾಯ ಮಾಡಿ.’ ಎಂದು ಬರೆದಿದ್ದಾರೆ.