ಕೇಂದ್ರ ಸರಕಾರ ಇಂತಹ ವೆಬ್ ಸಿರೀಸ್‌ಗಳ ಮೇಲೆ ಕ್ರಮಕೈಗೊಳ್ಳಬೇಕು !

೧. ಇಸ್ಲಾಮೀ ದೇಶದ ‘ಜಾತ್ಯತೀತತೆ’ಯನ್ನು ತಿಳಿಯಿರಿ !

ಬಹರೀನ್‌ನ ಸೂಪರ್ ಮಾರ್ಕೇಟ್‌ವೊಂದರಲ್ಲಿ ಬುರಖಾ ತೊಟ್ಟ ಮತಾಂಧ ಮಹಿಳೆಯೊಬ್ಬಳು ‘ಇಸ್ಲಾಮೀ ದೇಶದಲ್ಲಿ ಗಣಪತಿಯ ವಿಗ್ರಹಗಳನ್ನು ಏಕೆ ಮಾರಾಟ ಮಾಡಲಾಗುತ್ತಿದೆ ?’, ಎಂದು ಪ್ರಶ್ನಿಸಿ ಶ್ರೀ ಗಣೇಶನ ವಿಗ್ರಹಗಳನ್ನು ಕೆಳಗೆ ಬಿಸಾಡಿ ಒಡೆದಳು.

೨. ಈ ಸ್ಥಿತಿ ಬರುವ ಮೊದಲೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಆವಶ್ಯಕ !

ಕೇರಳದ ವಾರ್ಷಿಕ ಜನನ ಮತ್ತು ಮರಣ ದರದ ವರದಿಗನುಸಾರ ಮುಸಲ್ಮಾನರ ಜನನಪ್ರಮಾಣ ಶೇ. ೪೩.೭೪ ರಷ್ಟಿದೆ, ಹಿಂದೂಗಳ ಜನನಪ್ರಮಾಣ ಶೇ. ೪೧. ೬೯ ರಷ್ಟಿದೆ. ೨೦೪೨ ರವರೆಗೆ ಕೇರಳದಲ್ಲಿ ಮುಸಲ್ಮಾನರ ಜನಸಂಖ್ಯೆಯು ಶೇ. ೫೧ ರಷ್ಟಾಗುವುದು.

೩. ಕೇಂದ್ರ ಸರಕಾರ ಇಂತಹ ವೆಬ್ ಸಿರೀಸ್‌ಗಳ ಮೇಲೆ ಕ್ರಮಕೈಗೊಳ್ಳಬೇಕು !

ಮುಂಬರುವ ‘ಆಶ್ರಮ ಈ ವೆಬ್ ಸಿರೀಸ್ ಮೂಲಕ ಸಾಧುಗಳ ಅವಮಾನ ಮಾಡಿರುವುದರಿಂದ ಅದನ್ನು ನಿಷೇಧಿಸಬೇಕೆಂದು ಧರ್ಮಪ್ರೇಮಿಗಳು ಆಗ್ರಹಿಸಿದ್ದಾರೆ. ಈ ವೆಬ್ ಸಿರೀಜ್‌ನಲ್ಲಿ ‘ಓರ್ವ ಬಾಬಾ ‘ಆಧ್ಯಾತ್ಮಿಕ’ನೆಂದು ನಟಿಸಿ ಅಪರಾಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾನೆಂದು’ ತೋರಿಸಲಾಗಿದೆ.

೪. ಹಿಂದೂಗಳು ಕಾನೂನನ್ನು ಪಾಲಿಸುತ್ತಿದ್ದರೆ, ಮತಾಂಧರು ಮಾತ್ರ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ !

ರಾಯಚೂರಿನಲ್ಲಿ ಫೇಸಬುಕ್‌ನಲ್ಲಿ ಭಗವಾನ ಶ್ರೀರಾಮನ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿದ ಜಹೀರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಕ್ಷೇಪಾರ್ಹ ಪೋಸ್ಟ್‌ನ ವಿರುದ್ಧ ಹಿಂದೂ ಧರ್ಮಪ್ರೇಮಿಗಳು ಪೊಲೀಸ್ ಠಾಣೆಯ ಹೊರಗೆ ಶಾಂತಿಯಿಂದ ಪ್ರತಿಭಟನೆ ನಡೆಸಿದರು.

೫. ತೃಣಮೂಲ ಕಾಂಗ್ರೆಸ್ಸಿನ ಅಭಿವೃದ್ಧಿವಿರೋಧಿ ಅಲ್ಪಸಂಖ್ಯಾತ ಪ್ರೀತಿಯನ್ನು ತಿಳಿಯಿರಿ !

ಕೋಲಕಾತಾದ ನೇತಾಜಿ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ‘ರನ್‌ವೇ ನಿರ್ಮಿಸಲು ಮಸೀದಿಯೊಂದು ಅಡ್ಡಿಯಾಗುತ್ತಿದ್ದರಿಂದ ಅದನ್ನು ಸ್ಥಳಾಂತರಿಸಲು ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಮನವಿ ಮಾಡಿದರೂ ಸರಕಾರದಿಂದ ಸಹಕಾರ ದೊರೆಯಲಿಲ್ಲ.

೬. ಪಾಕ್‌ನಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಕರಾಚಿಯ ಲಾಯರೀ ಪ್ರದೇಶದಲ್ಲಿ ಸ್ವಾತಂತ್ರ್ಯದ ಮೊದಲು ಕಟ್ಟಲಾಗಿದ್ದ ಹನುಮಂತನ ದೇವಸ್ಥಾನವನ್ನು ಕೆಡವಿ ಅಲ್ಲಿ ನಿವಾಸಿ ಸಂಕೀರ್ಣವನ್ನು ಕಟ್ಟಲು ದೇವಸ್ಥಾನದ ವಿಗ್ರಹವನ್ನು ನಾಪತ್ತೆ ಮಾಡಲಾಗಿದೆ. ದೇವಸ್ಥಾನದ ಪಕ್ಕದಲ್ಲಿ ನೆಲೆಸಿರುವ ೨೦ ಹಿಂದೂಗಳ ಮನೆಗಳನ್ನೂ ನೆಲಸಮ ಮಾಡಲಾಗಿದೆ.

೭. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ತಿಳಿಯಿರಿ

ದೆಹಲಿಯಲ್ಲಿ ಈ ವರ್ಷ ನಡೆದ ಹಿಂದೂವಿರೋಧಿ ಗಲಭೆಯನ್ನಾಧರಿಸಿದ ‘ದಿಲ್ಲಿ ರಾಯಟ್ಸ್ ೨೦೨೦ : ದ ಅನ್ ಟೋಲ್ಡ್ ಸ್ಟೋರಿ (ದೆಹಲಿ ಗಲಭೆ ೨೦೨೦ : ಹೇಳದಿರುವ ಕಥೆ) ಈ ಪುಸ್ತಕದ ಪ್ರಕಾಶನವನ್ನು ಎಡಪಂಥೀಯ ಹಾಗೂ ಇಸ್ಲಾಮ್‌ವಾದಿಗಳ ಒತ್ತಡದಿಂದಾಗಿ ಪ್ರಕಾಶಕ ‘ಬ್ಲೂಮ್ಸ್‌ಬ್ಯುರಿ ಇಂಡಿಯಾವು ಹಿಂದೆ ಸರಿದ ನಂತರ ಈಗ ‘ಗರುಡ ಪ್ರಕಾಶನವು ಈ ಪುಸ್ತಕವನ್ನು ಪ್ರಕಾಶಿಸಲಿದೆ.