ಕೊನೆಗೂ ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಸ್ವೀಕೃತಿ
ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಇವರು ಪದಚ್ಯುತಗೊಂಡ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಹಿಂದುಗಳ ಮೇಲೆ ೮೮ ದಾಳಿಗಳು ನಡೆದಿರುವ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಒಪ್ಪಿಕೊಂಡಿದೆ. ಭಾರತದ ವಿದೇಶಾಂಗ ಸಚಿವ ವಿಕ್ರಮ ಮಿಸ್ರಿ ಇವರು ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಜೊತೆಗೆ ಸಭೆ ನಡೆಸಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಯ ಅಂಶಗಳನ್ನು ಉಪಸ್ಥಿತಗೊಳಿಸಿದರು. ಹಾಗೂ ಅವರ ಸುರಕ್ಷೆಯ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಅದರ ನಂತರ ಬಾಂಗ್ಲಾದೇಶ ಸರಕಾರದಿಂದ ಮೇಲಿನ ಸ್ವೀಕೃತಿ ನೀಡಲಾಯಿತು.
ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಪ್ರಸಾರಮಾಧ್ಯಮ ಸಚಿವ ಶಫಿಕುಲ್ ಆಲಮ ಇವರು, ಆಗಸ್ಟ್ ೫ ರಿಂದ ಅಕ್ಟೋಬರ್ ೨೨ ವರೆಗೆ ಅಲ್ಪಸಂಖ್ಯಾತರಿಗೆ ಸಂಬಂಧಿತ ಘಟನೆಯಲ್ಲಿ ಒಟ್ಟು ೮೮ ಪ್ರಕರಣಗಳು ದಾಖಲಾಗಿವೆ, ಈ ಘಟನೆಯ ಸಂದರ್ಭದಲ್ಲಿ ೭೦ ಜನರನ್ನು ಬಂಧಿಸಲಾಗಿದೆ. ಈಶಾನ್ಯ ಸುನಾಮಗಂಜ, ಮಧ್ಯ ಗಾಝೀಪುರ್ ಮತ್ತು ಇತರ ಪ್ರದೇಶದಿಂದ ಕೂಡ ಹಿಂಸಾಚಾರದ ಹೊಸ ಘಟನೆಗಳು ಘಟಿಸಿವೆ, ಆದ್ದರಿಂದ ಪ್ರಕರಣಗಳು ಮತ್ತು ಬಂಧನದ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಂತ್ರಸ್ತರಲ್ಲಿ ಕೆಲವು ಜನರು ಹಿಂದಿನ ಅಧಿಕಾರದಲ್ಲಿರುವ ಪಕ್ಷದ ಸದಸ್ಯರಾಗಿರುವ ಪ್ರಕರಣಗಳ ಕೂಡ ಇರಬಹುದು. ಅಕ್ಟೋಬರ್ ೨೨ ನಂತರ ಘಟಿಸಿರುವ ಘಟನೆಯ ವರದಿ ಆದಷ್ಟು ಬೇಗನೆ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.
🚨 88 Incidents of Attacks on Minority Hindus in Bangladesh! 🚫
The Interim Government of Bangladesh has finally acknowledged the violence against Hindus, but mere acknowledgment is NOT enough! 💔 The government MUST ensure protection and compensation for the victims and prevent… pic.twitter.com/0FtJR0cvks
— Sanatan Prabhat (@SanatanPrabhat) December 12, 2024
ಸಂಪಾದಕೀಯ ನಿಲುವು
|