ಉತ್ತರಪ್ರದೇಶದ ಅಲ್ಪಸಂಖ್ಯಾತ ಖಾತೆ ಸಚಿವ ಮೊಹಸೀನ್ ರಜಾ ಇವರ ಆದೇಶ
-
ನಕಲಿ ಕಾಗದಪತ್ರಗಳ ಆಧಾರದಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿರುವ ಮಾಹಿತಿ ಬಹಿರಂಗ
-
ಸಮಾಜವಾದಿ ಪಕ್ಷದ ರಾಜ್ಯಾಡಳಿತದಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಮದರಸಾದಲ್ಲಿ ಆಗಿರುವ ಎಲ್ಲ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ, ಎಂದು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಸಚಿವ ಮೊಹಸೀನ ರಜಾ ಇವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮದರಸಾದಲ್ಲಿ ಆದಂತಹ ನೇಮಕದ ಬಗ್ಗೆ ತನಿಖೆ ನಡೆಯಲಿದೆ.
ರಜಾ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ನಕಲಿ ಕಾಗದಪತ್ರಗಳನ್ನು ತಯಾರಿಸಿ ಮದರಸಾದಲ್ಲಿ ಕೆಲಸವನ್ನು ಗಿಟ್ಟಿಸಿರುವ ಮಾಹಿತಿ ಸಿಕ್ಕಿದ್ದರಿಂದ ಈ ತನಿಖೆ ನಡೆಯಲಿದೆ. ಸಮಾಜವಾದಿ ಪಕ್ಷವು ಮತಪೆಟ್ಟಿಗೆಗಾಗಿ ಮದರಸಾದಲ್ಲಿ ಭ್ರಷ್ಟಾಚಾರ ಮಾಡಿದೆ ಹಾಗೂ ಅವರ ಆಪ್ತರಿಗೆ ಅದರ ಲಾಭವನ್ನು ನೀಡಿದೆ. ತನಿಖೆಯಲ್ಲಿ ಆರೋಪ ಸಿದ್ಧವಾದರೆ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ಅಡ್ಡೆಯಾಗಿದ್ದ ಮದರಸಾದ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ !
ಬಂಗಾಲದ ಮದರಸಾಗಳಲ್ಲಿ ‘ವಂದೇ ಮಾತರಮ್’ ಹಾಡುವುದು ಕಡ್ಡಾಯ!
ತುಮಕೂರಿನಲ್ಲಿ ಮೌಲ್ವಿಯ ದೌರ್ಜನ್ಯ ತಾಳಲಾರದೆ ಮದರಸಾದಿಂದ 24 ಮಕ್ಕಳು ಪರಾರಿ !
Katni Railway Rescue : ಮಧ್ಯಪ್ರದೇಶದ ಕಟ್ನಿ ರೈಲ್ವೆ ನಿಲ್ದಾಣದಲ್ಲಿ ೧೬೭ ಅಪ್ರಾಪ್ತ ಮುಸಲ್ಮಾನ ಮಕ್ಕಳ ರಕ್ಷಣೆ !
ಮೋತಿಹಾರಿ (ಬಿಹಾರ) : ಮದರಸಾದಲ್ಲಿ ಪಿಸ್ತೂಲ್ ಪತ್ತೆ; ಮದರಸಾಗೆ ಬೀಗ; ಮೂವರ ಬಂಧನ
ಉತ್ತರ ಪ್ರದೇಶದ ೫೫೮ ಮದರಸಾಗಳ ಮೇಲೆ ಕ್ರಮ ಜರುಗಲಿದೆ! – UP Madrasa Mid Day Meal Scam