ದೇವಸ್ಥಾನ ಸರಕಾರಿಕರಣ : ದೇವಸ್ಥಾನದ ನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ !

ಸದ್ಯ ನಡೆದಿರುವ ‘ಲಾಕ್‌ಡೌನ್ದಿಂದಾಗಿ ದೇಶವು ಆರ್ಥಿಕ ಸಂಕಟದಲ್ಲಿ ಸಿಲುಕಿದೆ. ಇದಕ್ಕೆ ಉಪಾಯವೆಂದು ಅನೇಕ  ಜನಪ್ರತಿನಿಧಿಗಳು, ಪ್ರಗತಿಪರರು ಮುಂತಾದವರು ಹಿಂದೂಗಳ ದೇವಸ್ಥಾನಗಳ ನಿಧಿಯನ್ನು  ಮತ್ತು ಆಸ್ತಿಯನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡುತ್ತಿದ್ದಾರೆ. ಸ್ವಾತಂತ್ರ್ಯದ ನಂತರದ ೭೨ ವರ್ಷಗಳಲ್ಲಿನ ಸರಕಾರಗಳು ಕೇವಲ ಹಿಂದೂಗಳ ಅನೇಕ ದೇವಸ್ಥಾನಗಳನ್ನು ಸರಕಾರೀಕರಣ ಮಾಡಿ ದೇವಸ್ಥಾನಗಳ ಆಸ್ತಿಯನ್ನು ತಮ್ಮ ವಂಶಜರ ಸಂಪತ್ತಿನಂತೆ, ಕಥಿತ ವಿಕಾಸಕಾರ್ಯಗಳು, ದಾನ, ಇತರ ಪಂಥದವರಿಗೆ ಸಹಾಯ ಹೀಗೆ ಮುಂತಾದ ಅಧಾರ್ಮಿಕ ವಿಷಯಗಳಿಗೆ ಖರ್ಚು ಮಾಡಿದ್ದಾರೆ. ವಾಸ್ತವದಲ್ಲಿ ಹಿಂದೂ ದೇವಸ್ಥಾನಗಳ ನಿಧಿಯು ಹಿಂದೂಗಳ ಧರ್ಮಕಾರ್ಯಕ್ಕಾಗಿ ಖರ್ಚಾಗಬೇಕು. ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂ ದೇವಸ್ಥಾನಗಳ ಸರಕಾರಿಕರಣ ಏಕೆ ಆಗುತ್ತದೆ ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಸರಕಾರಿಕರಣ ಏಕಿಲ್ಲ ?, ಈ ಪ್ರಶ್ನೆಗೆ ಇಂದಿನ ವರೆಗಿನ ಎಲ್ಲ ಸರಕಾರಗಳೂ ಮೌನ ವಹಿಸಿವೆ. ‘ಎಲ್ಲ ಕ್ಷೇತ್ರಗಳ ಖಾಸಗೀಕರಣವಾಗುತ್ತಿರುವಾಗ ಕೇವಲ ದೇವಸ್ಥಾನಗಳ ಸರಕಾರಿಕರಣ ಏಕೆ ?, ಈ ಪ್ರಶ್ನೆಯೂ ಅವರಿಗೆ ಅಡಚಣೆಯದ್ದಾಗಿರುತ್ತದೆ, ಇದು ಧಾರ್ಮಿಕ ತಾರತಮ್ಯ ಅಲ್ಲವೇ ? ಯಾವಾಗ ನೋಡಿದರೂ ಪ್ರತಿಯೊಂದು ಕಾರಣಕ್ಕೆ ದೇವಸ್ಥಾನಗಳ ಆಸ್ತಿಯನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡುವ ಜನಪ್ರತಿನಿಧಿಗಳು, ಪ್ರಗತಿಪರರು ಎಂದಾದರೂ ವಿದೇಶಗಳಲ್ಲಿನ ಕಪ್ಪುಹಣವನ್ನು ತಂದು ಅದನ್ನು ಉಪಯೋಗಿಸಿರಿ ಎಂದು ಏಕೆ ಸಲಹೆ ನೀಡುವುದಿಲ್ಲ ?

ವಾಸ್ತವದಲ್ಲಿ ಸರಕಾರದ ಭ್ರಷ್ಟಾಚಾರವಿಲ್ಲದ ಯಾವುದೇ ವಿಭಾಗವಿಲ್ಲ. ಹೀಗಿರುವಾಗ ಸರಕಾರಿಕರಣ ವಾಗಿರುವ ದೇವಸ್ಥಾನಗಳಾದರೂ ಅದರಿಂದ ಹೇಗೆ ತಪ್ಪಿಸಿಕೊಳ್ಳುವವು ? ಹೀಗಾಗುವುದು ಧರ್ಮಹಾನಿಯಾಗಿದೆ. ದೇವಸ್ಥಾನಗಳು ಚೈತನ್ಯದ ಸ್ರೋತಗಳಾಗಿವೆ, ಆದ್ದರಿಂದ ಅವು ಭಕ್ತರ ವಶದಲ್ಲಿರುವುದು ಆವಶ್ಯಕವಾಗಿದೆ. ಇದಕ್ಕಾಗಿ ಹಿಂದೂಗಳು ಕಾನೂನು ಮಾರ್ಗದಿಂದ ಪ್ರಯತ್ನಿಸಬೇಕು. ದೇಶ ಸ್ವತಂತ್ರವಾಗುವ ಮೊದಲು ಆಂಗ್ಲರು ಮತ್ತು ಸ್ವಾತಂತ್ರ್ಯದ ನಂತರ ೧೯೫೧ ರಿಂದ ದೇವಸ್ಥಾನಗಳ ಸರಕಾರಿಕರಣ ಕಾನೂನಾದ ನಂತರ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ದೇವರ ನಿಧಿಯನ್ನು ಹೇಗೆ ಕೊಳ್ಳೆಹೊಡೆಯಲಾಯಿತು, ಎಂಬುದರ ವಾಸ್ತವಿಕತೆಯನ್ನು ಮಂಡಿಸುವ ಲೇಖನವನ್ನು ನಮ್ಮ ವಾಚಕರಿಗಾಗಿ ೨ ಭಾಗಗಳಲ್ಲಿ ಪ್ರಸಿದ್ಧಪಡಿಸುತಿದ್ದೇವೆ. (ಭಾಗ ೨)

೭. ವಿದೇಶಿ ಲೇಖಕರಾದ ಸ್ಟೀಫನ್ ನೈಪ್ ಇವರು ಪ್ರಾಚೀನ ದೇವಸ್ಥಾನಗಳನ್ನು ಕಟ್ಟಿಸಿದ ಭಾರತೀಯ ರಾಜರ ಉದಾರತೆಯ ಬಗ್ಗೆ ನೀಡಿದ ದಾಖಲೆ !

ದುಃಖದ ವಿಷಯವೆಂದರೆ, ಹಿಂದೂಗಳ ದೇವಸ್ಥಾನಗಳ ಲೂಟಿಯ ಬಗ್ಗೆ ಹಿಂದೂ ಸಂತರು ಅಥವಾ ಹಿಂದೂ ಸಂಘಟನೆಗಳಲ್ಲ, ವಿದೇಶದಲ್ಲಿನ ಓರ್ವ ಲೇಖಕ ಸ್ಟೀಫನ್ ನೈಪ್‌ನು ಅತ್ಯಂತ ಶೋಧಾತ್ಮಕ ಹಾಗೂ ತಥ್ಯಾತ್ಮಕ ಪುಸ್ತಕವನ್ನು ಬರೆದಿದ್ದಾರೆ, ‘ಕ್ರೈಮ್ಸ್ ಅಗೇನ್ಸ್ಟ್ ಇಂಡಿಯಾ ಎಂಡ್ ದ ನೀಡ್ ಟು ಪ್ರೊಟೆಕ್ಟ್ ಏನ್ಶಿಯಂಟ್ ವೈದಿಕ್ ಟ್ರೆಡಿಶನ್ ಎಂಬುದು ಈ ಪುಸ್ತಕದ ಹೆಸರಾಗಿದ್ದು, ಅದು ಅಮೇರಿಕಾದಲ್ಲಿ ಪ್ರಕಾಶನಗೊಂಡಿದೆ. ಈ ಪುಸ್ತಕವನ್ನು ಓದಿದ ಮೇಲೆ ನಿಮಗೆ ಆಶ್ಚರ್ಯವಾಗಬಹುದು. ಸ್ಟೀಫನ್ ನೈಪ್‌ರು ಮುಂದಿನಂತೆ ಬರೆದಿದ್ದಾರೆ, ಯಾವ ಭಕ್ತ ರಾಜರು ಈ ದೇವಸ್ಥಾನಗಳನ್ನು ಕಟ್ಟಿದರೋ, ಅವುಗಳಲ್ಲಿನ ಯಾವುದೇ ರಾಜನು ಆ ದೇವಸ್ಥಾನಗಳ ಮೇಲೆ ತನ್ನ ಅಥವಾ ತನ್ನ ಕುಟುಂಬದವರ ಯಾವುದೇ ಅಧಿಕಾರವಿದೆಯೆಂದು ಹೇಳಿಲ್ಲ. ಅನೇಕ ರಾಜರು ತಮ್ಮ ಹೆಸರನ್ನು ಕೂಡ ದೇವಸ್ಥಾನದ ಮೇಲೆ ಹಾಕಿಲ್ಲ. ಅನೇಕ ಯುಗಗಳಿಂದ ನಿಂತಿರುವ ಈ ಹಳೆಯ ದೇವಸ್ಥಾನಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಯಾರು ನಿರ್ಮಿಸಿದರು, ಎಂಬ ಮಾಹಿತಿಯೂ ಸಿಗುವುದಿಲ್ಲ. ದೇವಸ್ಥಾನ ಮತ್ತು ಅವುಗಳ ಹಣದ ಮೇಲೆ ನಿಯಂತ್ರಣ ಮಾಡುವುದಂತೂ ದೂರ ಉಳಿಯಿತು, ಈ ರಾಜರು ತಮ್ಮ ಭೂಮಿ ಮತ್ತು ಇನ್ನಿತರ ಸಂಪತ್ತನ್ನು ಕೂಡ ದೇವಸ್ಥಾನಗಳ ಹೆಸರಿಗೆ ಮಾಡಿದ್ದಾರೆ. ಅವುಗಳಲ್ಲಿ ಆಭರಣಗಳು ಕೂಡ ಇವೆ. ಹಿಂದೂ ರಾಜರು ಕೇವಲ ದೇವಸ್ಥಾನಗಳಿಗೆ ಸಹಾಯ ಮಾಡಿದರು, ಆದರೆ ಅವರು ಅವುಗಳ ಮೇಲೆ ಯಾವುದೇ ಹಕ್ಕನ್ನು ಹೇxಳಲಿಲ್ಲ. ವಾಸ್ತವದಲ್ಲಿ ಹೀಗೆಯೇ ಇರುವುದು ಅಪೇಕ್ಷಿತವಿದೆ. (ಯಾವುದು ಓರ್ವ ವಿದೇಶಿ ಲೇಖಕರಿಗೆ ತಿಳಿಯುತ್ತದೆ, ಅದು ದೇಶದಲ್ಲಿನ ಜನಪ್ರತಿನಿಧಿಗಳಿಗೆ ತಿಳಿಯುವುದಿಲ್ಲವೆಂದರೆ, ಇದು ವೈಭವಶಾಲಿ ಭಾರತಕ್ಕೆ ಅತ್ಯಂತ ದುರ್ದೈವ ವೆಂದೇ ಹೇಳಬೇಕಾಗುತ್ತದೆ. ಹಿಂದೂಗಳೆ, ನಿಮ್ಮ ವೈಭವಶಾಲಿ ಪರಂಪರೆಗಳನ್ನು ಲೂಟಿ ಮಾಡಲಾಗುತ್ತಿದೆ, ಇದು ನಿಮಗೆ ಒಪ್ಪಿಗೆಯಿದೆಯೆ ?- ಸಂಪಾದಕರು)

೮. ಹೆಚ್ಚಿನ ದೇವಸ್ಥಾನಗಳ ಸಂಪತ್ತನ್ನು ಅಜ್ಞಾತ ಕಾರ್ಯ ಹಾಗೂ ಹಿಂದೂಯೇತರರಿಗಾಗಿ ಉಪಯೋಗಿಸುವುದು, ಇದಕ್ಕೆ ಹಿಂದೂಗಳ ಉದಾಸೀನತೆ ಹಾಗೂ ಸಹಿಷ್ಣುತೆಯೇ ಕಾರಣವಾಗಿದೆ.

ಕೆಲವು ಅಪವಾದಗಳನ್ನು ಬಿಟ್ಟರೆ ಸದ್ಯದ ಯಾವುದೇ ಸರಕಾರವು ಯಾವುದೇ ದೊಡ್ಡ ದೇವಸ್ಥಾನವನ್ನು ಕಟ್ಟಿಲ್ಲ. ಸರಕಾರಕ್ಕೆ ಯಾವುದೇ ದೇವಸ್ಥಾನದಲ್ಲಿನ ಹಣ, ಆಡಳಿತ ಅಥವಾ ಪೂಜೆಯ ಪದ್ಧತಿಯ ಬಗ್ಗೆ ಯಾವುದೇ ಅಧಿಕಾರವಿಲ್ಲ. ದೇವಸ್ಥಾನಗಳ ಹಣ ಕೇವಲ ದೇವಸ್ಥಾನಗಳ ಆಡಳಿತ, ಅವುಗಳನ್ನು ಕಾಪಾಡುವುದು, ಸಂವರ್ಧನೆ, ಅವುಗಳಿಗೆ ಸಂಬಂಧಿಸಿದ ಸಂರಚನೆ ಮತ್ತು ಸೌಲಭ್ಯಗಳಿಗೆ ಖರ್ಚಾಗಬೇಕು. ಅನಂತರ ಉಳಿದ ಹಣವನ್ನು ಆವಶ್ಯಕವಿರುವ ಇನ್ನಿತರ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಖರ್ಚು ಮಾಡಬೇಕು. ದೇವಸ್ಥಾನ ಸರಕಾರೀಕರಣ ಕಾನೂನಿನ (Temple Endowment Act) ಅಂತರ್ಗತ ಆಂಧ್ರಪ್ರದೇಶದಲ್ಲಿನ ೪೩ ಸಾವಿರ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ. ಈ ದೇವಸ್ಥಾನಗಳ ಕೇವಲ ಶೇ. ೧೮ ರಷ್ಟು ಆದಾಯವನ್ನು ಮಾತ್ರ ದೇವಸ್ಥಾನಗಳಿಗೆ ಹಿಂತಿರುಗಿಸಲಾಗಿದೆ. ಉಳಿದ ಶೇ. ೮೨ ರಷ್ಟು ಹಣವನ್ನು ಅಜ್ಞಾತ ಕಾರ್ಯಗಳಿಗಾಗಿ (ಈ ಹಣ ಎಲ್ಲಿ ಹೋಗಿರಬಹುದು ಎಂಬುದು ನಿಮಗೆ ತಿಳಿದಿರಬಹುದು !) ಖರ್ಚು ಮಾಡಲಾಗಿದೆ. ವಿಶ್ವಪ್ರಸಿದ್ಧ ತಿರುಮಲೈ ತಿರುಪತಿ ದೇವಸ್ಥಾನ ಕೂಡ ಇದಕ್ಕೆ ಹೊರತಾಗಿಲ್ಲ. ಸ್ಟೀಫನ್ ಇವರ ಹೇಳಿಕೆ ಗನುಸಾರ ಈ ದೇವಸ್ಥಾನದಲ್ಲಿ ಪ್ರತಿವರ್ಷ ೩ ಸಾವಿರದ ೧೦೦ ಕೋಟಿಗಿಂತಲೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ಈ ಮೊತ್ತದ ಶೇ. ೮೫ ರಷ್ಟು ಭಾಗವು ರಾಜಕೋಷದಲ್ಲಿ (ಸರಕಾಕ್ಕೆ) ಜಮೆಯಾಗುತ್ತದೆ. ರಾಜ್ಯ ಸರಕಾರವು ಈ ಆರೋಪವನ್ನು ಖಂಡಿಸಿಲ್ಲ. ದೇವಸ್ಥಾನದ ಉತ್ಪನ್ನದಲ್ಲಿನ ಹೆಚ್ಚಿನ ಭಾಗವನ್ನು ಹಿಂದೂ ಸಮಾಜಕ್ಕೆ ಸಂಬಂಧವಿಲ್ಲದ ವಿಷಯಗಳಿಗೆ ಖರ್ಚು ಮಾಡಲಾಗುತ್ತದೆ.

ಈಗ ಇನ್ನೊಂದು ಆರೋಪ ಕೇಳಿಬರುತ್ತಿದೆ, ಆಂಧ್ರಪ್ರದೇಶ ಸರಕಾರವು ಗಾಲ್ಫ್ ಕೋರ್ಸ್ ನಿರ್ಮಾಣಕ್ಕಾಗಿ ಸುಮಾರು ಕಡಿಮೆ ಎಂದರೂ ೧೦ ದೇವಸ್ಥಾನಗಳನ್ನು ಕೆಡವಲು ಆನುಮತಿ ನೀಡಿದೆ. ಸ್ಟೀಫನ್ ನೈಪ್ ಬರೆಯುತ್ತಾರೆ, ‘ಒಂದು ವೇಳೆ ೧೦ ಮಸೀದಿಗಳನ್ನು ಕೆಡವಿದ್ದರೆ, ಎಷ್ಟು ‘ಸೆಕ್ಯುಲರ್ ವಾದಿಗಳ ಗೊಂದಲ ನಿರ್ಮಾಣವಾಗುತ್ತಿತ್ತು ಎಂಬುದರ ಕಲ್ಪನೆಯನ್ನು ಮಾಡಬಹುದು. ಕರ್ನಾಟಕದಲ್ಲಿ ಸುಮಾರು ೨ ಲಕ್ಷ ಚಿಕ್ಕ ದೇವಸ್ಥಾನಗಳಿಂದ ೭೯ ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಯಿತು. ಅದರಲ್ಲಿ ದೇವಸ್ಥಾನಗಳಿಗೆ ಕೇವಲ ೭ ಕೋಟಿ ಹಣ ಸಿಕ್ಕಿತು. ಮದರಸಾಗಳು ಮತ್ತು ಹಜ್ ಅನುದಾನಕ್ಕಾಗಿ ೫೯ ಕೋಟಿ ರೂಪಾಯಿಗಳನ್ನು ಕೊಡಲಾಯಿತು ಹಾಗೂ ಚರ್ಚ್ಗಳಿಗೆ ಸುಮಾರು ೧೩ ಕೋಟಿ ರೂಪಾಯಿಗಳನ್ನು ಕೊಡಲಾಯಿತು. ಸ್ಟೀಫನ್ ನೈಪ್ ಹೇಳುತ್ತಾರೆ, ಇದರಿಂದ ೨ ಲಕ್ಷ ದೇವಸ್ಥಾನಗಳಿಗೆ ಶೇ. ೨೫ ರಷ್ಟೆ ಹಣ ಕೊಡಲಾಯಿತು, ಅಂದರೆ ಕರ್ನಾಟಕದಲ್ಲಿನ ಸುಮಾರು ೫೦ ಸಾವಿರ ದೇವಸ್ಥಾನಗಳನ್ನು ಸಾಧನ-ಸಾಮಗ್ರಿಗಳ ಅಭಾವದಿಂದ ಮುಚ್ಚಬೇಕಾಬಹುದು. ನೈಪ್ ಇವರ ಅಭಿಪ್ರಾಯದಲ್ಲಿ ಸರಕಾರದ ಈ ಕೃತ್ಯಗಳಿಗೆ ಹಿಂದೂಗಳ ನಿಷ್ಕಾಳಜಿ ಮತ್ತು ಸಹಿಷ್ಣುತೆಯೇ ಕಾರಣವಾಗಿದೆ.

೯. ದೇವಸ್ಥಾನಗಳ ಸಂಪತ್ತು ಮತ್ತು ಭೂಮಿಯ ಮೇಲಿನ ಅತಿಕ್ರಮಣ

ನೈಪ್ ಇವರು ತಮ್ಮ ಪುಸ್ತಕದಲ್ಲಿ ಕೇರಳದ ಉಲ್ಲೇಖವನ್ನೂ ಮಾಡಿದ್ದಾರೆ. ಗುರುವಾಯೂರು ದೇವಸ್ಥಾನದ ನಿಧಿಯನ್ನು ಇತರ ಸರಕಾರಿ ಯೋಜನೆಗಳಿಗೆ ಉಪಯೋಗಿಸಲಾಯಿತು. ಇದರಿಂದಾಗಿ ೪೫ ದೇವಸ್ಥಾನಗಳ ವಿಕಾಸಕಾರ್ಯ ನಿಂತು ಹೋಯಿತು. ಅಯ್ಯಪ್ಪಾ ಮಂದಿರದ ಭೂಮಿಯ ಅತಿಕ್ರಮಣ ಮಾಡಲಾಯಿತು, ಹಾಗೆಯೇ ಚರ್ಚ್ ದವರು ಮತ್ತು ವಿಸ್ತಾರವಾದಿ ವನಕ್ಷೇತ್ರದವರು ಶಬರಿಮಲೈಯನ ಸಾವಿರಾರು ಎಕ್ರೆ ಭೂಮಿಯನ್ನು ಅತಿಕ್ರಮಣ ಮಾಡಿದರು. ಕೇರಳದ ಸಾಮ್ಯವಾದಿ (ಕಮ್ಯುನಿಸ್ಟ್) ರಾಜ್ಯ ಸರಕಾರ ಒಂದು ಆದೇಶವನ್ನು ಹೊರಡಿಸುವ ವಿಚಾರ ಮಾಡುತ್ತಿದೆ, ಅದರಿಂದ ‘ತ್ರಾವಣಕೋರ್ ದೇವಸ್ವಮ್ ಬೋರ್ಡ್ ವಿಸರ್ಜನೆಯಾಗಬೇಕು ಹಾಗೂ ಅದರ ಅಂತರ್ಗತ ೧ ಸಾವಿರದ ೮೦೦ ಹಿಂದೂ ಮಂದಿರಗಳ ಸೀಮಿತ ಸ್ವತಂತ್ರ ಅಧಿಕಾರವನ್ನು ಕೈಗೆತ್ತಿಕೊಳ್ಳಬೇಕು ಎಂಬುದಾಗಿದೆ. ರಾಜ್ಯದ ದೀವಾಳಿತನದ ನಿವಾರಣೆ ಯಾಗಬೇಕೆಂದು ಮಹಾರಾಷ್ಟ್ರ ಸರಕಾರ ಕೂಡ ರಾಜ್ಯದ ೪೫ ಸಾವಿರ ದೇವಸ್ಥಾನಗಳ ಮೇಲೆ ಅತಿಕ್ರಮಣ ಮಾಡುವ ಸಿದ್ಧತೆಯಲ್ಲಿದೆ. ಇದೇ ರೀತಿ ಒಡಿಶಾ ರಾಜ್ಯ ಸರಕಾರ ಜಗನ್ನಾಥ ಮಂದಿರದ ದಾನ ಸ್ವರೂಪದಲ್ಲಿ ಬಂದಿರುವ ೭೦ ಸಾವಿರ ಎಕರೆಗಿಂತ ಹೆಚ್ಚು ಭೂಮಿಯನ್ನು ಮಾರಾಟ ಮಾಡುವ ಸಿದ್ಧತೆಯಲ್ಲಿದೆ. ದೇವಸ್ಥಾನದ ಅಯೋಗ್ಯ ವ್ಯವಸ್ಥಾಪನೆಯಿಂದಾಗಿ ಆಗಿರುವ ಆರ್ಥಿಕ ಹಾನಿಯನ್ನು ಈ ಹಣದಿಂದ ತುಂಬಿಸಬಹುದು ಎಂದು ಸರಕಾರ ಹೇಳುತ್ತಿದೆ.

೧೦. ಹಿಂದೂವಿರೋಧಿ ಭಾರತೀಯ ಪ್ರಸಾರಮಾಧ್ಯಮಗಳಿಂದಾಗಿ ಸರಕಾರದ ಹಿಂದೂವಿರೋಧಿ ಕಾರ್ಯವು ಯಾರ ಗಮನವನ್ನು ಸೆಳೆಯದೆ ಮುಂದುವರಿದಿದೆ

ನೈಪ ಇವರ ಪುಸ್ತಕಕ್ಕನುಸಾರ ಭಾರತೀಯ ಪ್ರಸಾರ ಮಾಧ್ಯಮಗಳು ವಿಶೇಷವಾಗಿ ಆಂಗ್ಲ ವಾಹಿನಿಗಳು ಮತ್ತು ದಿನಪತ್ರಿಕೆಗಳು ಹಿಂದೂ ವಿರೋಧಿ ಆಗಿದ್ದರಿಂದ ಈ ವಿಷಯದ ಮಾಹಿತಿ ಬೆಳಕಿಗೆ ಬರುವುದಿಲ್ಲ. ಹಿಂದೂಗಳ ಮೇಲೆ ಪ್ರಭಾವ ಬೀಳುವ ಯಾವುದೇ ವಿಷಯಕ್ಕೆ ಈ ಮಾಧ್ಯಮಗಳು ಕವರೇಜ ಕೊಡುವುದಿಲ್ಲ, ಹಾಗೆಯೇ ಇದರ ಬಗ್ಗೆ ಇವರಲ್ಲಿನ ಯಾರಿಗೂ ಸಹಾನಭೂತಿಯೂ ಅನಿಸುವುದಿಲ್ಲ. ಆದುದರಿಂದ ಎಲ್ಲ ಹಿಂದೂಗಳ ವಿರುದ್ದದ ಕಾರ್ಯಗಳು ಯಾರ ಗಮನವನ್ನು ಸೆಳೆಯದೇ ನಡೆದಿರುತ್ತವೆ.

ಕೆಲವು ದುಷ್ಟ ಪ್ರವೃತ್ತಿಯ ಜನರು ಹಣ ಸಂಪಾದಿಸಲು ದೇವಸ್ಥಾನಗಳನ್ನು ಕಟ್ಟುತ್ತಿರಬಹುದು; ಆದರೆ ಸರಕಾರಕ್ಕೆ ಇದರಿಂದ ಏನಾಗಬೇಕು ? ಎಲ್ಲ ಉತ್ಪನ್ನವನ್ನು ಕಬಳಿಸುವ ಬದಲು ಸರಕಾರ ದೇವಸ್ಥಾನಗಳ ನಿಧಿಗಾಗಿ ಸಮಿತಿಯನ್ನು ಸ್ಥಾಪಿಸಬಹುದು, ಅದರಿಂದ ಆ ಹಣವು ಕೇವಲ ದೇವಸ್ಥಾನಗಳಿಗಾಗಿ ಯೋಗ್ಯ ರೀತಿಯಲ್ಲಿ ಉಪಯೋಗವಾಗಬಹುದು.

೧೧. ದುರ್ಲಕ್ಷ ಹಾಗೂ ಸಹಿಷ್ಣು ಹಿಂದೂಗಳು ತಮ್ಮ ವಿಚಾರಗಳನ್ನು ಸ್ಪಷ್ಟ ಹಾಗೂ ದೃಢವಾಗಿ ವ್ಯಕ್ತಪಡಿಸುವುದು ಆವಶ್ಯಕವಾಗಿದೆ !

ಜಗತ್ತಿನಲ್ಲಿ ಯಾವುದೇ ಸ್ವತಂತ್ರ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸರಕಾರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವುದಿಲ್ಲ ಹಾಗೂ ಜನರನ್ನು ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿಸುವುದೂ ಇಲ್ಲ; ಆದರೆ ಭಾರತದಲ್ಲಿ ಹೀಗಾಗುತ್ತಿದೆ. ಸರಕಾರಿ ಅಧಿಕಾರಿಗಳು ಹಿಂದೂಗಳ ದೇವಸ್ಥಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು; ಏಕೆಂದರೆ ಅವರಿಗೆ ಇದರಿಂದ ಸಿಗುವ ಹಣದ ಮೇಲೆ ಕಣ್ಣಿದೆ. ಅವರು ಹಿಂದೂಗಳ ಉದಾಸೀನತೆಯನ್ನು ತಿಳಿದುಕೊಂಡಿದ್ದಾರೆ. ಏಕೆಂದರೆ ಹಿಂದೂಗಳು ಸಹಿಷ್ಣುಗಳು ಮತ್ತು ಎಷ್ಟು ಧೈರ್ಯ ಶಾಲಿಗಳಾಗಿದ್ದಾರೆ ಎಂಬುದು ಕೂಡ ಅವರಿಗೆ ತಿಳಿದಿದೆ. ರಸ್ತೆಯ ಮೇಲೆ ಪ್ರದರ್ಶನ ಮಾಡುವುದು, ದೇಶದ ಸಂಪತ್ತನ್ನು ನಾಶ ಮಾಡುವುದು. ಬೆದರಿಕೆ ಹಾಕುವುದು, ಲೂಟಿ ಮಾಡುವುದು, ಕೊಲೆ ಮುಂತಾದವುಗಳು ಹಿಂದೂಗಳ ರಕ್ತದಲ್ಲಿಯೇ ಇಲ್ಲ ಎಂಬುದೂ ಅವರಿಗೆ ತಿಳಿದಿದೆ. ಹಿಂದೂಗಳು ಸುಮ್ಮನೆ ಕುಳಿತು ತಮ್ಮ ಸಂಸ್ಕೃತಿಯ ಹತ್ಯೆಯನ್ನು ನೋಡುತ್ತಿ ದ್ದಾರೆ. ಹಿಂದೂಗಳು ತಮ್ಮ ವಿಚಾರವನ್ನು ಸ್ಪಷ್ಟ ಹಾಗೂ ದೃಢವಾಗಿ ವ್ಯಕ್ತಪಡಿಸಬೇಕು. ಸರಕಾರದ ಎಲ್ಲ ಸತ್ಯಾಂಶಗಳನ್ನು ಮುಂದಿಟ್ಟು ಜನರಿಗೆ ಅವರ ಹಿಂದೆ ಏನು ನಡೆದಿದೆ , ಎಂಬುದನ್ನು ತಿಳಿಸಿ ಹೇಳುವ ಸಮಯ ಈಗ ಬಂದಿದೆ. ‘ಪೀಟರ್‌ನ ಲೂಟಿ ಮಾಡಿ ಪಾಲ್‌ನ ಹೊಟ್ಟೆ ತುಂಬಿಸುವುದು, ಧರ್ಮನಿರಪೇಕ್ಷತೆಯಲ್ಲ. ದೇವಸ್ಥಾನಗಳನ್ನು ದೋಚಲು ಕಟ್ಟಿಲ್ಲ. ‘ಮಹಮ್ಮದ ಗಝನಿ ಸತ್ತನು, ಎಂದು ನಾವು ತಿಳಿದಿದ್ದೆವು; ಆದರೆ ಹಾಗಾಗಿಲ್ಲ, ‘ಅವನು ಪ್ರಜಾ ಪ್ರಭುತ್ವದಲ್ಲಿಯೂ ಬಣ್ಣ ಬದಲಾಯಿಸಿ ಬಂದಿದ್ದಾನೆ.

ಆಧಾರ – www.desicnn.com ಜಾಲತಾಣ

(ಸರಕಾರಿಕರಣ ಮಾಡಿದ ದೇವಸ್ಥಾನಗಳ ಲೂಟಿಯನ್ನು ತಡೆಗಟ್ಟಲು ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಕೊಡುವುದು ಎಷ್ಟು ಆವಶ್ಯಕವಾಗಿದೆ, ಎಂಬುದು ಇದರಿಂದ ತಿಳಿಯುತ್ತದೆ. ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಇತರ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ದೇವಸ್ಥಾನ ಸರಕಾರೀಕರಣದ ವಿರುದ್ಧ ವಿವಿಧ ಸ್ತರಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಎಲ್ಲ ದೇವಸ್ಥಾನಗಳ ವಹಿವಾಟು ಭಕ್ತರಲ್ಲಿರುವುದು ! – ಸಂಪಾದಕರು)