ನಿರ್ಮಾಣ ಹಂತದ ಶಾಲೆಯ ಮೇಲೆ ಗುಂಪಿನಿಂದ ದಾಳಿ

ಶಿಲ್ಲಾಂಗ್ (ಮೇಘಾಲಯ) – ರಾಮಕೃಷ್ಣ ಮಿಷನ್ ಶಾಲೆಯ ನಿರ್ಮಾಣದ ವಿವಾದದಿಂದ ಮೇಘಾಲಯದ ಮಾವಕಿನರೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನವರಿ ೨೦ ರಂದು, ಸುಮಾರು ೨೫೦ ಜನರ ಗುಂಪೊಂದು ನಿರ್ಮಾಣ ಹಂತದಲ್ಲಿದ್ದ ಶಾಲೆಯ ಮೇಲೆ ದಾಳಿ ಮಾಡಿ ಅದನ್ನು ಕೆಡವಲು ಪ್ರಯತ್ನಿಸಿತು. ಈ ಘಟನೆಯ ನಂತರ, ಪೊಲೀಸರು ಮತ್ತು ಸಮೂಹದ ನಡುವೆ ಘರ್ಷಣೆ ನಡೆಯಿತು. ಹಿಂಸಾತ್ಮಕವಾಗುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಘರ್ಷಣೆಯಲ್ಲಿ ಪೊಲೀಸರು ಮತ್ತು ನಿವಾಸಿಗಳು ಸೇರಿದಂತೆ ಅನೇಕ ಜನರು ಗಾಯಗೊಂಡರು.
೧. ೨೦೨೨ ರಿಂದ ಶಾಲೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭೂಮಿಯನ್ನು ಪೊಲೀಸ್ ಗ್ರಾಮ ಪರಿಷತ್ತು ರಾಮಕೃಷ್ಣ ಮಿಷನ್ಗೆ ದಾನ ಮಾಡಿತ್ತು. ಪೊಲೀಸ್ ವರಿಷ್ಠಾಧಿಕಾರಿ ವಿವೇಕ ಸಿಮ ಮಾತನಾಡಿ, ಈ ಜಮೀನಿಗೆ ಸಂಬಂಧಿಸಿದಂತೆ ಈಗ ೨ ಗ್ರಾಮಗಳ ನಡುವೆ ವಿವಾದವಿದೆ. ಇನ್ನೊಂದು ಹಳ್ಳಿಯ ಜನರು ಈ ಆಸ್ತಿಯ ಮೇಲೆ ದಾವೆ ಮಾಡಿದ್ದಾರೆ ಎಂದು ಹೇಳಿದರು.
೨. ಶಾಲಾ ಭೂಮಿ ಗ್ರಾಮ ಪರಿಷತ್ತಿಗೆ ಸೇರಿದ್ದು, ಅದರ ಮೇಲೆ ಮಾವಕಿರೆ ಮತ್ತು ಮಾವಲಿನ ಎಂಬ ಎರಡು ಗ್ರಾಮಗಳು ಸಾಮುದಾಯಿಕ ಹಕ್ಕು ಇವೆ. ರಾಮಕೃಷ್ಣ ಮಿಷನ್ಗೆ ಭೂಮಿಯನ್ನು ನೀಡಿದಾಗ, ಎರಡೂ ಗ್ರಾಮಗಳ ಮುಖ್ಯಸ್ಥರು ಅದಕ್ಕೆ ಒಪ್ಪಿಕೊಂಡರು. ಈಗ ಮಾವಕಿರೆ ಗ್ರಾಮದ ಜನರು ಈ ಭೂಮಿಯನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ