ನಿರ್ಮಾಣ ಹಂತದ ಶಾಲೆಯ ಮೇಲೆ ಗುಂಪಿನಿಂದ ದಾಳಿ

ಶಿಲ್ಲಾಂಗ್ (ಮೇಘಾಲಯ) – ರಾಮಕೃಷ್ಣ ಮಿಷನ್ ಶಾಲೆಯ ನಿರ್ಮಾಣದ ವಿವಾದದಿಂದ ಮೇಘಾಲಯದ ಮಾವಕಿನರೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನವರಿ ೨೦ ರಂದು, ಸುಮಾರು ೨೫೦ ಜನರ ಗುಂಪೊಂದು ನಿರ್ಮಾಣ ಹಂತದಲ್ಲಿದ್ದ ಶಾಲೆಯ ಮೇಲೆ ದಾಳಿ ಮಾಡಿ ಅದನ್ನು ಕೆಡವಲು ಪ್ರಯತ್ನಿಸಿತು. ಈ ಘಟನೆಯ ನಂತರ, ಪೊಲೀಸರು ಮತ್ತು ಸಮೂಹದ ನಡುವೆ ಘರ್ಷಣೆ ನಡೆಯಿತು. ಹಿಂಸಾತ್ಮಕವಾಗುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಘರ್ಷಣೆಯಲ್ಲಿ ಪೊಲೀಸರು ಮತ್ತು ನಿವಾಸಿಗಳು ಸೇರಿದಂತೆ ಅನೇಕ ಜನರು ಗಾಯಗೊಂಡರು.
೧. ೨೦೨೨ ರಿಂದ ಶಾಲೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭೂಮಿಯನ್ನು ಪೊಲೀಸ್ ಗ್ರಾಮ ಪರಿಷತ್ತು ರಾಮಕೃಷ್ಣ ಮಿಷನ್ಗೆ ದಾನ ಮಾಡಿತ್ತು. ಪೊಲೀಸ್ ವರಿಷ್ಠಾಧಿಕಾರಿ ವಿವೇಕ ಸಿಮ ಮಾತನಾಡಿ, ಈ ಜಮೀನಿಗೆ ಸಂಬಂಧಿಸಿದಂತೆ ಈಗ ೨ ಗ್ರಾಮಗಳ ನಡುವೆ ವಿವಾದವಿದೆ. ಇನ್ನೊಂದು ಹಳ್ಳಿಯ ಜನರು ಈ ಆಸ್ತಿಯ ಮೇಲೆ ದಾವೆ ಮಾಡಿದ್ದಾರೆ ಎಂದು ಹೇಳಿದರು.
೨. ಶಾಲಾ ಭೂಮಿ ಗ್ರಾಮ ಪರಿಷತ್ತಿಗೆ ಸೇರಿದ್ದು, ಅದರ ಮೇಲೆ ಮಾವಕಿರೆ ಮತ್ತು ಮಾವಲಿನ ಎಂಬ ಎರಡು ಗ್ರಾಮಗಳು ಸಾಮುದಾಯಿಕ ಹಕ್ಕು ಇವೆ. ರಾಮಕೃಷ್ಣ ಮಿಷನ್ಗೆ ಭೂಮಿಯನ್ನು ನೀಡಿದಾಗ, ಎರಡೂ ಗ್ರಾಮಗಳ ಮುಖ್ಯಸ್ಥರು ಅದಕ್ಕೆ ಒಪ್ಪಿಕೊಂಡರು. ಈಗ ಮಾವಕಿರೆ ಗ್ರಾಮದ ಜನರು ಈ ಭೂಮಿಯನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !