ಪಚೋರಾ (ಜಲಗಾಂವ್) ಇಲ್ಲಿ ನಡೆದ ಘಟನೆ

ಜಳಗಾಂವ – ಇಲ್ಲಿನ ಪಚೋರ್ಯಾದಿಂದ ಸ್ವಲ್ಪ ದೂರದಲ್ಲಿರುವ ಪರಧಾಡೆ ನಿಲ್ದಾಣದ ಬಳಿ ಜನವರಿ 22 ರ ಸಂಜೆ ಪುಷ್ಪಕ ಎಕ್ಸ್ಪ್ರೆಸ್ನಲ್ಲಿ ಒಂದು ಘಟನೆ ಸಂಭವಿಸಿದೆ. ಗಾಡಿಯ ಬಾಗಿಲಿನಲ್ಲಿ ಕುಳಿತಿದ್ದ ಪ್ರಯಾಣಿಕರು, ಗಾಡಿಯ ಚಕ್ರಗಳು ಮತ್ತು ಹಳಿಗಳ ನಡುವೆ ಕಿಡಿಗಳನ್ನು ನೋಡಿದಾಗ ಬೆಂಕಿ ಇದೆ ಎಂದು ಭಾವಿಸಿ ರೈಲಿನಲ್ಲಿ ‘ಬೆಂಕಿ ತಾಗಿದೆ’ ಎಂಬ ವದಂತಿ ಕೆಲವು ಬೋಗಿಗಳಲ್ಲಿ ಹರಡಿತು. ಆದ್ದರಿಂದ, ಪ್ರಯಾಣಿಕರು ಹತ್ತಿರದ ಸರಪಳಿಯನ್ನು ಎಳೆದು ಸೇತುವೆಯ ಮೇಲೆ ನಿಲ್ಲಿಸಿದರು. ಈ ಸಮಯದಲ್ಲಿ, ಕೆಲವು ಪ್ರಯಾಣಿಕರು ಗಾಡಿಯಿಂದ ಹೊರಗೆ ಹಾರಿದರು. ಅದೇ ಸಮಯದಲ್ಲಿ, ಪಕ್ಕದ ಹಳಿಯಲ್ಲಿ ಕರ್ನಾಟಕದಿಂದ ದೆಹಲಿಗೆ ದಿಕ್ಕಿನತ್ತ ಸಾಗುತ್ತಿದ್ದ ‘ಕರ್ನಾಟಕ ಎಕ್ಸ್ಪ್ರೆಸ್’ ವೇಗವಾಗಿ ಬಂದಿದ್ದರಿಂದ ಪ್ರಯಾಣಕರಿಗೆ ಡಿಕ್ಕಿ ಹೊಡದ ಪರಿಣಾಮ, 11 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು 8 ಮಂದಿ ಗಾಯಗೊಂಡರು.
ಹಳಿಗಳ ಎರಡೂ ಬದಿಗಳಲ್ಲಿರುವ ಹಳ್ಳಿಗಳ ಗ್ರಾಮಸ್ಥರು ಪ್ರಯಾಣಿಕರ ಸಹಾಯಕ್ಕೆ ಧಾವಿಸಿದರು. ಈ ಘಟನೆಯ ನಂತರ, ಪುಷ್ಪಕ ಎಕ್ಸ್ಪ್ರೆಸ್ ಅನ್ನು ಆ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಆದ್ದರಿಂದ, ಭೂಸಾವಳ ಮತ್ತು ಇತರ ರೈಲುಗಳನ್ನು ಅವುಗಳ ನಿಲ್ದಾಣಗಳಲ್ಲಿ ನಿಲ್ಲಿಸಿದ್ದರಿಂದ ರೈಲು ಸಂಚಾರದ ಮೇಲೆ ಪರಿಣಾಮ ಬೀರಿತು.
🚨 Train tragedy in Jalgaon!
Passengers jump out of #PushpakExpress fearing fire, but are run over by another train – Six feared dead, many others injured.
The incident occurred when smoke emanated from the train’s wheels, causing panic among passengers. #TrainAccident l… pic.twitter.com/wO2UOj3pwb
— Sanatan Prabhat (@SanatanPrabhat) January 22, 2025
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath