ಜೋಗೇಶ್ವರಿ (ಮುಂಬಯಿ) ನಲ್ಲಿ ನಡೆದ ಘಟನೆ
ಮುಂಬಯಿ – ಜೋಗೇಶ್ವರಿಯಲ್ಲಿ ಅನಧಿಕೃತ ಕೊಳಗೇರಿ ಪ್ರದೇಶದ ವಿರುದ್ಧ ಕ್ರಮ ಕೈಗೊಳ್ಳುವಾಗ, ಕೊಳೆಗೇರಿ ನಿವಾಸಿಗಳು ರೈಲ್ವೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ 5 ಪೊಲೀಸರು ಗಾಯಗೊಂಡಿದ್ದಾರೆ. ನಂತರ ಪೊಲೀಸರು 20 ರಿಂದ 25 ಜನರನ್ನು ವಶಕ್ಕೆ ಪಡೆದರು.
ಜನವರಿ 22 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ನಂತರ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು. ‘ಅನಧಿಕೃತ ನಿರ್ಮಾಣ’ಗಳನ್ನು ತೆಗೆದುಹಾಕಲು ರೈಲ್ವೆ ಆಡಳಿತವು ಈಗಾಗಲೇ ನೋಟಿಸ್ಗಳನ್ನು ನೀಡಿತ್ತು.
Illegal occupants of the Jogeshwari slum (Mumbai) area pelt stones at Police for taking action against unauthorised slums.
Almost all the suburban railway stations in Mumbai have slum areas outside, so the question is, why were they allowed to build up in the first place? Action… pic.twitter.com/oahIVlpbsD
— Sanatan Prabhat (@SanatanPrabhat) January 22, 2025